ಸುಮಾರು 35-40ಸಾವಿರ ಬೆಲೆ ಬಾಳುವ ಟಗರು‌ ಮತ್ತು ಮೇಕೆ ಹೋತ ಕದ್ದೊಯ್ದ ಕಳ್ಳರು; ನಾಗದೇನಹಳ್ಳಿ ಗ್ರಾಮದಲ್ಲಿ ಘಟನೆ

ಸುಮಾರು 35-40 ಸಾವಿರ ಬೆಲೆ ಬಾಳುವ ಟಗರು ಹಾಗೂ ಹೋತವನ್ನ ರಾತ್ರೋರಾತ್ರಿ ಕದ್ದೊಯ್ದ ಕಳ್ಳರು. ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗದೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರೈತ ಶ್ರೀನಿವಾಸ್ ಎಂದಿನಂತೆ ‌ತನ್ನ ಮನೆಯ ಮುಂದೆ ಇರುವ ಕೊಟ್ಟಿಗೆಯಲ್ಲಿ ಕುರಿ, ಮೇಕೆ ಕಟ್ಟಿಹಾಕಿದ್ದರು. ಕೊಟ್ಟಿಗೆಯಲ್ಲಿದ್ದ ಚಿನ್ನದ ಬೆಲೆಯ ಟಗರು, ಹೋತವನ್ನ ರಾತ್ರೋರಾತ್ರಿ ಕಳ್ಳರು ಎಸ್ಕೇಪ್ ಮಾಡಿದ್ದಾರೆ.

35-40ಸಾವಿರ ಬೆಲೆ ಬಾಳುವ ಟಗರು ಮತ್ತು ಮೇಕೆ ಹೋತವನ್ನ ಕಳೆದುಕೊಂಡ ರೈತ ಶ್ರೀನಿವಾಸ್ ಕಣ್ಣೀರಿಟ್ಟು ಸಂಕಷ್ಟದ ಪಾಲಾಗಿದ್ದಾರೆ.

ಇತ್ತೀಚೆಗೆ ನಾಗದೇನಹಳ್ಳಿ ಗ್ರಾಮದ ಸುತ್ತಾಮುತ್ತ ಕಳ್ಳರ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳ್ಳರ ಹಾವಳಿಯನ್ನು ಮಟ್ಟಹಾಕುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!