ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ನಡುರಸ್ತೆಯಲ್ಲಿ ವಿದ್ಯಾರ್ಥಿಗೆ ಲಾಂಗು ಬೀಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನ ಬಂಧನ ಮಾಡಿರೋ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು.
ಕೆಎಲ್ ಇ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ದರ್ಶನ್ ಎಂಬ ವಿದ್ಯಾರ್ಥಿ ಮೇಲೆ ಇದೆ ತಿಂಗಳ 5ನೇ ತಾರೀಖು ಕಾಲೇಜಿನಲ್ಲಿ ಹವಾ ಕ್ರಿಯೇಟ್ ಮಾಡಲು ಜೂನಿಯರ್ ವಿದ್ಯಾರ್ಥಿ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿದ್ದ ಸೀನಿಯರ್ಸ್ ವಿದ್ಯಾರ್ಥಿಗಳು.
ಕೆಎಲ್ ಇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಹಸಗೌಡ, ಚಂದನ್, ಜೀವನ್ ಭಾಗಿಯಾಗಿದ್ದು, ಹೊರಗಿನವರಾದ ಅಭಿಷೇಕ್, ಗೌತಮ್, ರವಿಕುಮಾರ್ ಜೊತೆ ಸೇರಿ ದರ್ಶನ್ ಮೇಲೆ ಹಲ್ಲೆ ಮಾಡಲಾಗಿತ್ತು.
ನಿಮ್ಮದು ಗಾಂಚಾಲಿ ಜಾಸ್ತಿಯಾಗಿದೆ ಸರಿಯಾಗಿ ಮಾಡ್ತಿನಿ ಅಂತ ದರ್ಶನ್ ಹೇಳಿದ್ದನಂತೆ. ಈ ವಿಚಾರ ತಿಳಿದು ಕಾಲೇಜಿನ ಸೀನಿಯರ್ ವಿದ್ಯಾರ್ಥಿಯಾಗಿದ್ದ ಸಾಹಸಗೌಡ, ದರ್ಶನ್ ಮೇಲೆ ಹಲ್ಲೆಗೆ ಸ್ಕೆಚ್ ಹಾಕಿದ್ದ.
ಹಲ್ಲೆಗೊಳಗಾದ ವಿದ್ಯಾರ್ಥಿ ದರ್ಶನ್ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ. ಸದ್ಯ ಸಿಸಿಟಿವಿ ಆಧರಿಸಿ ಏಳು ಜನ ಆರೋಪಿಗಳನ್ನ ಬಂಧಿಸಿರುವ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು.