
ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಎಸ್ ಯು ರಮೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಜಿಲ್ಲಾಧ್ಯಕ್ಷ ನರೇಶ್ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಎಲ್ಲರ ಒಮ್ಮತದಿಂದ ಎಸ್ ಯು ರಮೇಶ್ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತಾಲೂಕು ನೂತನ ಅಧ್ಯಕ್ಷ ಎಸ್ ಯು ರಮೇಶ್ ಅವರಿಗೆ ಹೂಗುಚ್ಛ ನೀಡುವ ಮೂಲಕ ಗಣ್ಯರು ಅಭಿನಂದಿಸಿದರು.
ಈ ವೇಳೆ ಮಲ್ಲರಾಜು, ಮರಿಯಪ್ಪ, ಮುನಿರಾಜು ಗೌಡ, ಕೊನಘಟ್ಟ ರಾಮಾನಂಜಿನಪ್ಪ, ಗೂಳ್ಯ ಹನುಮಣ್ಣ, ರಾಜಗೋಪಲ್, ರಾಜು ಸಣ್ಣಕ್ಕಿ, ಮದ್ದೂರಪ್ಪ, ಅನಿಲ್, ರವಿ, ಆನಂದ, ಮಧುಸೂದನ್, ಎ ಮಂಜುನಾಥ್, ಛಲವಾದಿ ಸುರೇಶ್ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು…