
ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೊಟ್ಟೆನೋವಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ನೇರವಾಗಿ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢ ಶಾಲೆಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಮದ ವಿದ್ಯಾರ್ಥಿ ಗಗನ್ ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋಗಿ ಡ್ರಿಪ್ ಹಾಕಿಸಿಕೊಂಡು ಬಂದು ಮತ್ತೆ ಪರೀಕ್ಷೆ ಬರೆದಿದ್ದಾನೆ.
ಪರೀಕ್ಷೆ ಸಮಯದಲ್ಲಿ ಮತ್ತೆ ಹೊಟ್ಟೆ ನೋವು, ಆಸ್ಪತ್ರೆಗೆ ಹೋಗಿ ಬಂದು ಪರೀಕ್ಷೆಗೆ ಹಾಜರಾಗಿದ್ದಾನೆ ಎಂದು ತಿಳಿದು ಬಂದಿದೆ.
ಪರೀಕ್ಷೆಗೆ ತಪ್ಪಿಸಿಕೊಳ್ಳಬಾರದು ಎಂದು ಡ್ರಿಪ್ ಹಾಕಿಸಿಕೊಂಡೇ ಬಂದು ಪರೀಕ್ಷೆ ಬರೆದಿದ್ದಾನೆ. ಇಂದು 10ನೇ ತರಗತಿಯ ಕೊನೆ ಪರೀಕ್ಷೆ ಸಮಾಜ ವಿಜ್ಞಾನ ಹಾಗಾಗಿ ಪರೀಕ್ಷೆಯಿಂದ ವಂಚಿತನಾಗಬಾರದು ಎಂದು ಡ್ರಿಪ್ಸ್ ಹಾಕಿಕೊಂಡೇ ಪರೀಕ್ಷೆ ಬರೆದಿದ್ದಾನೆ.