ರಂಗಪ್ಪ ಸರ್ಕಲ್ ನ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕಳ್ಳತನ

ದೊಡ್ಡಬಳ್ಳಾಪುರ ನಗರದ ರಂಗಪ್ಪ ಸರ್ಕಲ್ ನಲ್ಲಿರುವ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕಳೆದ ರಾತ್ರಿ ಕಳ್ಳರ ಕೈಚಳಕ ಕಂಡುಬಂದಿದೆ. ಹುಂಡಿ ಕಳ್ಳತನವಾಗಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ…

ದೇವಾಲಯದ ಮುಖ್ಯ ಬಾಗಿಲಿಗೆ ಅಳವಡಿಸಿದ್ದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಕಬ್ಬಿಣದ ಹುಂಡಿ ಮುರಿದು ಕಾಣಿಕೆ ಕದಿಯಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದ ಕಾರಣ  ಸಮೀಪದಲ್ಲೇ ಇದ್ದ ಸ್ಟೀಲ್ ಮತ್ತೊಂದು ಹುಂಡಿಯನ್ನು ಮುರಿದು ಸುಮಾರು 40 ಸಾವಿರ ಮೌಲ್ಯದ ಕಾಣಿಕೆ ಕದ್ದು ಪರಾರಿಯಾಗಿದ್ದಾರೆಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!