ಎಲ್ಲರ ಚಿತ್ತ ಸಿಎಂ ಕುರ್ಚಿಯತ್ತ: ಯಾರಾಗ್ತಾರೆ ರಾಜ್ಯದ ಸಿಎಂ: ಸಿಎಂ ರೇಸ್ ನಲ್ಲಿ ಯಾರೆಲ್ಲಾ ಸ್ಪರ್ಧೆ?

ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಸಿಎಂ ಸಿಂಹಾಸನದ ಮಾತುಕತೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ‌ ಮೀರಿ ಜಯಭೇರಿ ಬಾರಿಸಿರುವ ಕಾಂಗ್ರೆಸ್.

ಬಹುಮತ ಪಡೆದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ ಪಿ) ಸಭೆ ಇಂದು ಸಂಜೆ ನಡೆಯಲಿದ್ದು, ನೂತನ ಸಿಎಂ ಹೆಸರನ್ನು ನಿರ್ಧರಿಸುವ ಸಾಧ್ಯತೆ ಇದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕನಕಪುರದಿಂದ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿರುವ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದ ಡಿ.ಕೆ. ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಹುದ್ದೆಯ ಮುಂಚೂಣಿಯಲ್ಲಿದ್ದಾರೆ. ಇವರಿಬ್ಬರಲ್ಲಿ ಯಾರು ರಾಜ್ಯದ ನೂತನ ಸಿಎಂ ಆಗ್ತಾರೆ ಎಂಬುದು ಇಂದು ಸಂಜೆ ಫೈನಲ್ ಆಗುವ ಸಾಧ್ಯತೆ.

ಇಬ್ಬರ ಜಗಳದಲ್ಲಿ ಮೂರನೆವರೆಗೆ ಲಾಭವಾಗುತ್ತಾ?

ಸಿದ್ದರಾಮಯ್ಯ, ಡಿಕೆಶಿ ಜೊತೆ ಕೆ.ಹೆಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್ ಸಿಎಂ ಆಗುವ ಅರ್ಹತೆ ಹೊಂದಿರುವ ನಾಯಕರು. ಒಟ್ಟಾರೆ ಹೈಕಮಾಂಡ್ ಯಾರಿಗೆ‌ ಮಣೆ ಹಾಕುತ್ತಾರೆ ಎಂಬುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *