ಸ್ನೇಹಿತರ ನಡುವೆ ಗಲಾಟೆಯಾಗಿ, ಕೊಲೆಯಲ್ಲಿ ಅಂತ್ಯ…?ವಾಗಿರುವ ಘಟನೆ ತಾಲೂಕಿನ ಹೆಗ್ಗಡಿಹಳ್ಳಿ ಬಳಿ ನಡೆದಿದೆ…
ವಿಜಯಕುಮಾರ್( 30) ಮೃತ ದುರ್ದೈವಿ.
ಗಲಾಟೆ ವೇಳೆ ಮೃತ ವಿಜಯಕುಮಾರ್ ತಲೆಗೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಪೂಜಪ್ಪ(45), ಎಂಬಾತ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಮಾಲೂರು ಮೂಲದ ಶ್ರೀನಿವಾಸ, ಮುರುಗೇಶ, ಪೂಜಪ್ಪ, ನಾಗರಾಜ ಜೊತೆ ಮೃತ ವಿಜಯಕುಮಾರ್ ತಾಲೂಕಿನ ಹೆಗ್ಗಡಿಹಳ್ಳಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪೈಪ್ ಲೈನ್ ಹಾಕಲು ಆಗೆದಿರುವ ಕಾಂಕ್ರಿಟ್ ರಸ್ತೆಯ ಸೈಡ್ ಲೈನ್ ಗೆ ಕಾಂಕ್ರಿಟ್ ಹಾಕುವ ಕೆಲಸಕ್ಕೆ ಬಂದಿದ್ದರು.

ಒಂದೇ ಕೊಠಡಿಯಲ್ಲಿ ಇದ್ದ ಐದು ಜನರ ನಡುವೆ ಜೂ.13ರ ಶುಕ್ರವಾರ ರಾತ್ರಿ ಘಟನೆ ನಡೆದಿದೆ, ಇದರಲ್ಲಿ ವಿಜಯಕುಮಾರ್ ತಲೆಗೆ ತೀವ್ರ ಪೆಟ್ಟಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರಕಾರಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ವಿಜಯಕುಮಾರ್ ಸಾವನ್ನಪ್ಪಿರುವ ಮಾಹಿತಿ ಜೂ.14 ಶನಿವಾರದಂದು ಸಂಬಂಧಿಕರಿಗೆ ತಿಳಿದಿದೆ.
ಪೂಜಪ್ಪನೇ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಅನುಮಾನಗೊಂಡು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ