ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ನವದೆಹಲಿ ರವರು ಜನ್ ಜಾತಿಯ ಗೌರವ್ ವರ್ಷದ ಅಂಗವಾಗಿ ಧರ್ತಿ ಅಭಾ ಜನ್ ಜಾತೀಯ ಉತ್ಕರ್ಷ ಅಭಿಯಾನ ಕೈಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 14 ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ.
ಧರ್ತಿ ಅಭಾ ಜನ್ ಜಾತೀಯ ಉತ್ಕರ್ಷ ಅಭಿಯಾನದಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ. ಚುನಾವಣಾ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆಯುಷ್ಮಾನ್ ಭಾರತ್ ಕಾರ್ಡ್. ಜನದನ್ ಬ್ಯಾಂಕ್ ಖಾತೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಕಿಸಾನ್ ಕ್ರೇಡಿಟ್ ಕಾರ್ಡ್, ಪಿ.ಎಂ.ಕಿಸಾನ್, ಎಮ್.ಜಿ.ನರೇಗಾ, ವೃದ್ದಾಪ್ಯ ವೇತನಾ. ಪಿ.ಎಂ.ವಿಶ್ವರ್ಮ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ. ವಿಕಲಾಂಗ ವೇತನಾ, ವಿಧವಾ ವೇತನಾ. ಮುದ್ರಾ ಯೋಜನೆ, ಖಾಯಂ ನಿವಾಸಿ ದೃಢೀಕರಣ ಪತ್ರ ಮುಂತಾದ ದಾಖಲಾತಿಗಳನ್ನು 14 ಗ್ರಾಮಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಮಾಡಿಕೊಡಲಾಗುವುದು.
*ಆಯ್ಕೆಯಾಗಿರುವ 14 ಗ್ರಾಮಗಳು*
ದೇವನಹಳ್ಳಿ ತಾಲ್ಲೂಕಿನ ಹೊಲೇರಹಳ್ಳಿ, ವೆಂಕಟೇನಹಳ್ಳಿ, ಚಿಕ್ಕ ತತ್ತಮಂಗಲ, ಕೆಂಪೇನಹಳ್ಳಿ, ಯರ್ತಿಗಾನಹಳ್ಳಿ, ಭುವನಹಳ್ಳಿ ರಾಯಸಂದ್ರ, ಬಮ್ಮನಹಳ್ಳಿ, ಜೊನ್ನಹಳ್ಳಿ, ಕೊಂಡೆನಹಳ್ಳಿ. ದೊಡ್ಡಬಳ್ಳಾಪುರ ತಾಲ್ಲೂಕಿನ ಗುಮ್ಮನಹಳ್ಳಿ, ಬೊಮ್ಮನಹಳ್ಳಿ.
ಹೊಸಕೋಟೆ ತಾಲ್ಲೂಕಿನ ವಲಗೇರೆಪುರ.
ಶಿಬಿರವು ಜೂನ್ 15 ರಿಂದ 30 ರ ವರೆಗೆ ಆಯೋಜನೆ ಮಾಡಲಾಗಿದ್ದು 14 ಗ್ರಾಮಗಳಲ್ಲಿನ ಎಲ್ಲಾ ಬುಡಕಟ್ಟು ಜನಾಂಗದವರು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ರವರನ್ನು, 080-29787448, ದೇವನಹಳ್ಳಿ 080-27681784, ದೊಡ್ಡಬಳ್ಳಾಪುರ-080-27629681 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Bommanahalli villege, Hanabe post ,
Doddaballapura (T), Bangalore rural ,Karnataka state.
Bad roads , colony house not good,