ನ್ಯಾಯಾಲಯದಲ್ಲಿ ಶಿಸ್ತು ಪಾಲನೆ ಕಡ್ಡಾಯ: ಕೋರ್ಟ್ ಆವರಣದಲ್ಲಿ ಅಡ್ಡಾದಿಡ್ಡಿ ಪಾರ್ಕ್ ಮಾಡಿದ್ದ ವಾಹನಗಳ ಜಪ್ತಿ, ದಂಡ

ದೊಡ್ಡಬಳ್ಳಾಪುರ ಕೋರ್ಟ್ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದಲ್ಲದೇ ದಂಡ ಕೂಡ ವಿಧಿಸಿದರು.

ನ್ಯಾಯಾಧೀಶರ ಸೂಚನೆ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಜಪ್ತಿ ಮಾಡಿ ಕೆಲವೊಂದು ವಾಹನಗಳ ಮಾಲೀಕರಿಗೆ ದಂಡ ಕೂಡ ವಿಧಿಸಿದರು.

ಇನ್ನು ಮುಂದೆ ನಿಗದಿತ ವಾಹನ ನಿಲುಗಡೆ ಸ್ಥಳದಲ್ಲಿ ಮಾತ್ರ ವಾಹನಗಳನ್ನು ಪಾರ್ಕ್ ಮಾಡುವಂತೆ ಎಚ್ಚರಿಸಿದರು.

ನ್ಯಾಯಾಲಯದ ಒಳಗಡೆ ಪ್ರವೇಶಿಸುವ ಮುನ್ನ ಸಾರ್ವಜನಿಕರು ಕೆಲವೊಂದು ಶಿಸ್ತುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇ ಬೇಕಾಗಿರುತ್ತದೆ. ಸಾರ್ವಜನಿಕರು ತಮ್ಮ ಮೊಬೈಲ್ ಗಳನ್ನು ಸೈಲೆಂಟ್ ಅಥವಾ ಸ್ವೀಚ್ ಆಫ್ ಮಾಡತಕ್ಕದು. ನ್ಯಾಯಾಲಯದ ಆವರಣದಲ್ಲಿ ತಂಬಾಕು ಹಾಗೂ ಧೂಮಪಾನ ಮಾಡಬಾರದು. ಸಾರ್ವಜನಿಕರು ನ್ಯಾಯಾಲಯವನ್ನು ದೇವಾಲಯದಂತೆ ಪರಿಗಣಿಸಿ ಶಿಸ್ತಿನಿಂದ ವರ್ತಿಸುವುದು…  ನ್ಯಾಯಾಲಯ ಕಲಾಪ ನಡೆಯುತ್ತಿರುವಾಗ ನಿಶ್ಯಬ್ಧವಾಗಿರುವುದು. ನ್ಯಾಯಾಲಯದ ಒಳಭಾಗದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ನಿಂತು ಮಾತನಾಡಬಾರದು. ನ್ಯಾಯಾಲಯ ಒಳಂಗಣದಲ್ಲಿ ಉಗುಳುವುದು.. ಪ್ಲಾಸ್ಟಿಕ್ ಬಾಟಲ್ ಗಗಳನ್ನು ಹಾಕದೆ ಸ್ವಚ್ಛತೆ ಕಾಪಾಡುವುದು.. ನ್ಯಾಯಾಲಯದಲ್ಲಿನ ಶೌಚಲಯವನ್ನು ಸ್ವಚ್ಛತೆಯಿಂದಿಡುವುದು.. ಕಕ್ಷಿದಾರರು ವಕೀಲರೊಂದಿಗೆ ಸೌಜನ್ಯದಿಂದ ವರ್ತಿಸುವುದು… ಸೇರಿದಂತೆ ಇತರೆ  ಶಿಸ್ತುಗಳನ್ನು ಪಾಲನೆ ಮಾಡಬೇಕು….

Leave a Reply

Your email address will not be published. Required fields are marked *