ಕೆರೆ ಏರಿ ಮೇಲೆ ನವಜಾತ ಶಿಶು ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಮಾನಿಕೆರೆ ಬಳಿ ನಡೆದಿದೆ.
ಜಿಟಿ ಜಿಟಿ ಮಳೆ ನಡುವೆ ಪಾಪಿತಾಯಿ ನವಜಾತ ಶಿಶುವನ್ನ ಬಿಟ್ಟು ಹೋಗಿದ್ದಾಳೆ. ಕೆರೆ ಏರಿ ಬಳಿ ಬ್ಯಾಗ್ ನಲ್ಲಿ ನವಜಾತ ಶಿಶುವನ್ನಿಟ್ಟು ಎಸ್ಕೇಪ್ ಆಗಿದ್ದಾಳೆ.
ಮಳೆ ಹನಿಗಳಿಂದ ಸಂಪೂರ್ಣ ನೆನೆದು ಅಳುತ್ತಿದ್ದ ಮಗುವಿನ ಶಬ್ದ ಕೇಳಿ ಸ್ಥಳಿಯರು ರಕ್ಷಿಸಿದ್ದಾರೆ. ಮೂರು ದಿನಗಳಿಂದಷ್ಟೇ ಜನಿಸಿರುವ ಗಂಡು ಮಗು. ಬ್ಯಾಗ್ ನಲ್ಲಿದ್ದ ಮಗುವನ್ನ ಸರ್ಕಾರಿ ಆಸ್ವತ್ರೆಗೆ ಕರೆತಂದು ಹಾರೈಕೆ ಮಾಡಲಾಗುತ್ತಿದೆ.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಲಾಗುತ್ತಿದೆ.
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.