ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಒಳ್ಳೆ ಹಣ್ಣು: ಕಾಂಗ್ರೆಸ್-ದಳ ಅಭ್ಯರ್ಥಿಗಳು ಕೊಳೆತ ಹಣ್ಣು: ಆಯ್ಕೆ ನಿಮ್ಮದು: ಸಿ.ಟಿ.ರವಿ

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕೊಳೆತ ಹಣ್ಣಿನಂತೆ, ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಒಳ್ಳೆಯ ಹಣ್ಣಿನಂತಿದ್ದಾರೆ, ಮಾರುಕಟ್ಟೆಯಲ್ಲಿ ಒಳ್ಳೆಯ ಹಣ್ಣನ್ನು ಆಯ್ದುಕೊಳ್ಳುವಂತೆ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ‌ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ತಾಲ್ಲೂಕಿನ ಮದುರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬಿಜೆಪಿಯ ಅಭ್ಯರ್ಥಿ ಧೀರಜ್ ಮುನಿರಾಜು ಪರ ರೋಡ್ ಶೋ ನಡೆಸಿ ಮಾತನಾಡಿದರು. ಪಕ್ಕದ ಕ್ಷೆತ್ರದ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರು ಯಲಹಂಕವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ ಅದು ಅವರಿಂದ ಸಾಧ್ಯವಾಗುವುದಾದರೇ ದೊಡ್ಡಬಳ್ಳಾಪುರ ಕ್ಷೇತ್ರ ಏಕೆ ಅಭಿವೃದ್ದಿ ಹೊಂದಿಲ್ಲ ಎಂದು ಪ್ರಶ್ನಿಸುವ ಮೂಲಕ ಶಾಸಕರ ಕಾರ್ಯ ವೈಖರಿಯನ್ನು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಸಕರು ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಬರಿ ಹಣ ಮಾಡುವುದಷ್ಟೆ ಕೆಲಸ ಅಲ್ಲಾ, ಅಭಿವೃದ್ದಿ ಕೆಲಸ ಮಾಡಿ ತೋರಿಸಬೇಕು, ಬರಿ ಬಾಯಿ ಮಾತಿಗೆ ಎಲ್ಲವನ್ನು ನಾನೇ ಮಾಡಿದ್ದು ಎಂದು ಹೇಳಿದ್ದಕ್ಕಿಂತ ಏನು ಮಾಡಿದ್ದಾರೆ ಎಂದು ತೋರಿಸಲಿ ಎಂದು ಸವಾಲ್ ಹಾಕಿದರು.

ಧೀರಜ್ ಮುನಿರಾಜು ಜನರ ನಡುವೆ ಇದ್ದೂ ಕೆಲಸ ಮಾಡುವ ಯುವಕ ಮೊದಲು ಆತನ ಕೆಲಸಗಳನ್ನು ಅನುಮಾನದಿಂದ ನೊಡುತ್ತಿದ್ದೆವು ಕ್ಷರಮೇಣ ಅವರ ಸಾಮಾಜಿಕ ಕೆಲಸಗಳನ್ನು ವಿಶ್ವಾಸ ಹಾಗೂ ಅಭಿಮಾನದಿಂದ ನೋಡಿದೆವು ನೀವು ಕೂಡ ಕಿರಿಯ ವಯಸ್ಸಿನ ನನ್ನ ತಮ್ಮನಂತಿರುವ ಧೀರಜ್ ಮುನಿರಾಜು ಅವರನ್ನು ಅಭಿಮಾನದಿಂದ ನೋಡಿ ಬೆಂಬಲಿಸಬೇಕು ಎಂದರು.

ದೊಡ್ಡತುಮಕೂರು ಕೆರೆ ಸಂರಕ್ಷಣೆ ಕುರಿತು ಈಗಾಗಲೇ ಮುಖ್ಯಮಂತ್ರಿ ಮಾತುಕೊಟ್ಟಿದ್ದಾರೆ ಸ್ಥಳೀಯ ಶಾಸಕರು ಕೆರೆ ಉಳಿಸುವ ಕೆಲಸ ಮಾಡಬೇಕಾಗಿತ್ತು ಆದರೇ ಹತ್ತು ವರ್ಷಗಳಲ್ಲಿ ಏನು ಮಾಡಿಲ್ಲ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಿನಲ್ಲೆ ನಗರದ ನಾಗರಕೆರೆ ಸೇರಿದಂತೆ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬಳಿಕ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್, ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಅವರನ್ನು ನನ್ನ ಜೊತೆಯಲ್ಲೇ ಶಾಸನಸಭೆಗೆ ಕಳುಹಿಸಿಕೊಟ್ಟರೆ ದೊಡ್ಡಬಳ್ಳಾಪುರ ಅಭಿವೃದ್ದಿಗೆ ಇಬ್ಬರೂ ಸೇರಿ ಶ್ರಮಿಸುತ್ತೇವೆ, ನಮ್ಮ ಕ್ಷೇತ್ರದ ಗಡಿಭಾಗದ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಪಡಿಸಿದ್ದೇನೆ ಆದರೇ ದೊಡ್ಡಬಳ್ಳಾಪುರ ಕ್ಷೇತ್ರದ ರಸ್ತೆಗಳು ಹದಗೆಟ್ಟಿವೆ ಮಧುರೆ ವರೆಗಿನ ರಸ್ತೆ ಕಾಮಗಾರಿಗೆ ಸರ್ಕಾರದೊಂದಿಗೆ ಮಾತನಾಡಿ ಚಾಲನೆ ಕೊಡಿಸಿದ್ದೇನೆ ಎಂದರು.

ಜೆ.ನರಸಿಂಹಸ್ವಾಮಿ ಶಾಸಕರಾಗಿದ್ದಾಗ ಯಡಿಯೂರಪ್ಪ ಅವರ ಬಳಿ ಕರೆದೊಯ್ದು ದೊಡ್ಡಬಳ್ಳಾಪುರಕ್ಕೆ‌ 750 ಕೋಟಿ ರೂ. ಅನುದಾನ ಕೊಡಿಸಿದ್ದೆ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಿದ್ದವು ಆದರೇ ಕಾಂಗ್ರೆಸ್ ಶಾಸಕರು ಬಂದ ಮೇಲೆ ಶಾಸಕರ ಕಾರ್ಯ ವೈಖರಿ ನೀವೆ ಗಮನಿಸಿದ್ದೀರಿ ಅದನ್ನು ಪ್ರತ್ಯೇಕ ವಾಗಿ ಹೇಳಬೇಕಾಗಿಲ್ಲ.

ಈ ವೇಳೆ ಬಿಜೆಪಿ ಮುಖಂಡ ಕೆ.ಹೆಚ್ ಹನುಂಮತರಾಯಪ್ಪ, ಬಿಜೆಪಿ ಅಭ್ಯರ್ಥಿ ಧೀರಜ್‌ಮುನಿರಾಜ್, ಬಿ.ಸಿ.ನಾರಾಯಣಸ್ವಾಮಿ, ತಿ.ರಂಗರಾಜು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ‌ ಮಾಡಿದರು.

Leave a Reply

Your email address will not be published. Required fields are marked *