Self Accident: ಬೈಕ್ ಸವಾರನಿಗೆ ಅಪಘಾತ: ಆಸ್ಪತ್ರೆಗೆ ರವಾನೆ ವೇಳೆ ಸಾವು

ತಾಲೂಕಿನ ರಾಜಘಟ್ಟ- ದಾಸಗೊಂಡನಹಳ್ಳಿ ಮಾರ್ಗಮಧ್ಯೆ‌ ಬರುವ ರಸ್ತೆಯಲ್ಲಿ ಸಂಭವಿಸಿದ ಸ್ವಯಂ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸುಮಾರು 6:30ರ ಸಮಯದಲ್ಲಿ ನಡೆದಿದೆ.

ಮೃತರನ್ನು ಕೇರಳ ಮೂಲದ 23 ವರ್ಷದ ಹರ್ಷದ್ ಎಂದು ಗುರುರಿಸಲಾಗಿದೆ.

ರಕ್ತದ ಮಡುವುನಲ್ಲಿ ಬಿದ್ದಿದ್ದ ಗಾಯಾಳು ಬೈಕ್ ಸವಾರನನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….

Leave a Reply

Your email address will not be published. Required fields are marked *