ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಚೆನ್ನಾದೇವಿ ಅಗ್ರಹಾರ ವ್ಯವಸಾಯ ಸೇವಾ ಸಹಕಾರ ಸಂಘ(ವಿಎಸ್ಎಸ್ ಎನ್) ಚುನಾವಣೆ ನಡೆದಿದ್ದು, ವಿಎಸ್ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಕಾಡನೂರು ಪಾಳ್ಯದ ನಾರಾಯಣ್.ಎ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಾರದಮ್ಮ ಮುಂದುವರಿದಿದ್ದಾರೆ. ನೂತನವಾಗಿ ವಿಎಸ್ಎಸ್ ಎನ್ ಅಧ್ಯಕ್ಷರಾಗಿ ಆಯ್ಕೆಯಾದ ನಾರಾಯಣ್.ಎ ರವರನ್ನು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಸೇರಿದಂತೆ ಇತರೆ ಗಣ್ಯರು ಅಭಿನಂದಿಸಿದ್ದಾರೆ.
ನಿರ್ದೇಶಕರುಗಳು ಪಟ್ಟಿ:-
ಪುರುಷೋತ್ತಮಗೌಡ
ಬೈಲಪ್ಪ.ಎ
ದೇವರಾಜು
ಮಂಗಳಮ್ಮ
ಶಾರದಮ್ಮ
ಹನುಮಂತಯ್ಯ
ಶ್ರೀನಿವಾಸ್
ಮಾರೇಗೌಡ.ಜಿ
ಗೋವಿಂದರಾಜು
ಗಂಗರಾಜು
ಈ ವೇಳೆ ಕಾಡನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಎಂ.ಸಿ, ವೃತ್ತಿಪರ ನಿರರ್ದೇಶಕರಾದ ಜಿ.ಕೆಂಪೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.