Crime update: ರಾತ್ರಿ ಮನೆಯ ಹೊರಗೆ ಮಲಗಿದ್ದ ವೃದ್ಧನ ಕುತ್ತಿಗೆಗೆ ಚಾಕು ಇರಿತ…?: ಕುತ್ತಿಗೆಗೆ ಚಾಕು ಹಾಕಿ ಹಾಗೇ ಬಿಟ್ಟಿರುವ ದುಷ್ಕರ್ಮಿಗಳು: ಮುಂದುವರಿದ ಪೊಲೀಸ್ ತನಿಖೆ

ರಾತ್ರಿ ಮನೆಯ ಹೊರಗೆ ಮಲಗಿದ್ದ ವೃದ್ಧ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ವಾಸುದೇವನಹಳ್ಳಿಯಲ್ಲಿ ನಡೆದಿದೆ. ವೃದ್ಧನ ಕುತ್ತಿಗೆಯಲ್ಲಿ ಚಾಕು ಇರುವುದು ಕಂಡುಬಂದಿದೆ. ಚಾಕು ಇರುವುದು ಗಮನಿಸಿದಾಗ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಈರಣ್ಣ (70) ಮೃತ ದುರ್ದೈವಿ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅವರು ಭೇಟಿ ನೀಡಿ ಪರಿಶೀಲನೆ‌ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!