ತಾಲ್ಲೂಕಿನ ಅಬಕಾರಿ ವಲಯ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಅಕ್ರಮ ಮದ್ಯವನ್ನು ಇಂದು ನಾಶಪಡಿಸಲಾಯಿತು.
ನಗರದ ಹೊರವಲಯದ ಬಾಶೆಟ್ಟಿಹಳ್ಳಿಯಲ್ಲಿರುವ ಕೆಎಸ್ ಬಿ ಸಿಎಲ್ ಡಿಪೋ ದೊಡ್ಡಬಳ್ಳಾಪುರ ಶಾಖೆ ಅವರಣದಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ನಾಗೇಶ್ ಕುಮಾರ್ ಡಿ, ಯವರ ಆದೇಶದ ಮೇರೆಗೆ ನಾಶಪಡಿಸಲಾಯಿತು.
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮದ್ಯ- 92.285 ಲೀಟರ್, ವೈನ್- 30 ಲೀಟರ್ , ಬಿಯರ್-48.330ಲೀ, 9 ಲೀಟರ್ ಸೇಂದಿಯನ್ನು ನಾಶಪಡಿಸಲಾಯಿತು.
ಈ ವೇಳೆ ತಹಶಿಲ್ದಾರ್ ಮೋಹನ್ ಕುಮಾರಿ, ಅಬಕಾರಿ ಉಪ ಅಧೀಕ್ಷಕರಾದ ಪರಮೇಶ್ವರಪ್ಪ, ಅಬಕಾರಿ ನಿರೀಕ್ಷಕರಾದ ಎಸ್.ಎಂ. ಪಾಟೀಲ್, KSBCL ಡಿಪೋ ಅಬಕಾರಿ ನಿರೀಕ್ಷಕರು, ಮ್ಯಾನೇಜರ್, ಸಿಬ್ಬಂದಿ ಹನುಮಂತರಾಜು, ರಾಜಶೇಖರ್ ಜಿಆರ್, ಮಂಜುನಾಥ್ ಮೆಡ್ಲೇರಿ, ಮುನಿರಾಜು ಎಂ ಹಾಜರಿದ್ದರು.