ರಾತ್ರಿ ಸುರಿದ ಜಡಿ ಮಳೆಗೆ ಪೂರ್ತಿಯಾಗಿ ನೆನೆದು ಮನೆಯ ಒಂದು ಭಾಗದ ಗೋಡೆ ನೆಲಕ್ಕುರುಳಿದೆ, ಮನೆಯಲ್ಲಿದ್ದ ವಸ್ತುಗಳು ಜಖಂಗೊಂಡಿದ್ದು,, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮುಕ್ಕಡಿಘಟ್ಟ ಗ್ರಾಮದಲ್ಲಿ ನಡೆದಿದೆ. ಗಂಗರಾಜ್ ಮತ್ತು ನಾಗರತ್ನಮ್ಮ ಎಂಬುವರಿಗೆ ಸೇರಿದ ಮನೆಯಾಗಿದ್ದು, ಘಟನೆ ನಡೆದ ವೇಳೆ ದಂಪತಿ ಸೇರಿದಂತೆ ಮೂವರು ಮಕ್ಕಳು ಮನೆಯಲ್ಲಿದ್ದರು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾಗಶಃ ಮನೆ ಹಾನಿಯಾಗಿದೆ.