ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ ಇತ್ತೀಚೆಗೆ ಜೋಡಿ ಕೊಲೆ ಸಂಭವಿಸಿದ್ದು, ಕೊಲೆಗೂ ಮುನ್ನ ಆರೋಪಿಗಳು ದೂರು ನೀಡಲು ಬಂದಾಗ ಪೊಲೀಸ್ ಅಧಿಕಾರಿಗಳು ನಿರಾಕರಿಸುತ್ತಾರೆ ಇದಾದ ಕೆಲವೇ ನಿಮಿಷಗಳಲ್ಲಿ ಎರಡು ಹತ್ಯೆಗಳಾದವು ಎಂಬ ಪ್ರಶ್ನೆಗೆ ನಗರದಲ್ಲಿ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ,
ಈ ಪ್ರಕರಣ ಸದ್ಯ ವಿಚಾರಣ ಹಂತದಲ್ಲಿದೆ ಇದನ್ನು ಈ ಪ್ರಕರಣವನ್ನು ಹಾಗೇ ಬಿಡುವುದಿಲ್ಲ, ಅಧಿಕಾರಿಗಳದ್ದು ಏನು ತಪ್ಪಿದೆ ಮತ್ತು ಈ ಪ್ರಕರಣ ಏತಕ್ಕಾಗಿ ಆಗಿದೆ ಎಂಬುದನ್ನು ತನಿಖೆ ನಂತರ ತಿಳಿಯಲಿದೆ, ಈ ಪ್ರಕರಣದಲ್ಲಿ ಪೊಲೀಸರ ಕೈವಾಡವೇನಾದರು ಇದ್ದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಆರೋಪಿಗಳಿಗೂ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದರು.
ತಾಲ್ಲೂಕಿನಲ್ಲಿ ಸರಣಿ ಕಳ್ಳತನಕ್ಕೆ ಪೊಲೀಸ್ ಸಿಬ್ಬಂದಿ ಕೊರತೆ:
ಕಾಂಗ್ರೆಸ್ ಕಾಲದಲ್ಲಿ 35 ಸಾವಿರ ಪೊಲೀಸ್ ಸಿಬ್ಬಂದಿಗಳ ಹುದ್ದೆ ಖಾಲಿ ಇತ್ತು ಅದನ್ನು ಈಗಾಗಲೇ ಭರ್ತಿ ಮಾಡಲಾಗಿದೆ ಉಳಿದ 12 ಸಾವಿರ ಕಾನ್ಸ್ಟೆ ಬಲ್ ಹುದ್ದೆಗಳು ಭರ್ತಿ ಮಾಡಲಿದ್ದೇವೆ, ಸಬ್ ಇನ್ಸ್ ಪೆಕ್ಟರ್ ಹಗರಣ ನಡೆಯದೇ ಇದ್ದಿದ್ದರೆ ಇಷ್ಟೊತ್ತಿಗೆ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ ತಾಲ್ಲೂಖನ ಸಿಬ್ಬಂದಿಗಳ ಕೊರತೆ ನೀಗುತ್ತಿತ್ತು,
ತಾಲ್ಲೂಕಿನಲ್ಲಿ ಆದಷ್ಟು ಬೇಗ ಜನಸಂಖ್ಯೆ ಮತ್ತು ಏರಿಯಾದ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿಗಳ ಹೆಚ್ಚಿಗೆ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ ಎಂದರು.
ಪಿಎಸ್ ಐ ಹಗರಣ ತನಿಖೆ ಪಾರದರ್ಶಕ:
ಪಿಎಸ್ ಐ ಹಗರಣದ ತನಿಖೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಿದ್ದೇವೆ, ಈಗಾಗಲೇ ಪ್ರಮುಖ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ, ಕೋರ್ಟ್ ಆದೇಶದ ಮೇರೆಗೆ ಮತ್ತೊಮ್ಮೆ ಪರೀಕ್ಷೆ ನಡೆಸಬೇಕಾ ಅಥವಾ ಈಗಾಗಲೇ ಪಾಸ್ ಆದ ಅಭ್ಯರ್ಥಿಗಳಿಗೆ ವರ್ಕ್ ಆರ್ಡರ್ ನೀಡಬೇಕಾ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.