ಶ್ರೀ ಘಾಟಿ ದೇವಾಲಯದ ಇಒ ಡಿ.ನಾಗರಾಜ್ ಎತ್ತಂಗಡಿ; ಎನ್. ಕೃಷ್ಣಪ್ಪ ಘಾಟಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಿ ಧಾರ್ಮಿಕ‌ ದತ್ತಿ ಇಲಾಖೆ ಆದೇಶ

ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ‌ನಿರ್ವಾಹಕ ಅಧಿಕಾರಿ ಡಿ.ನಾಗರಾಜ್ ಅವರನ್ನು ದಿಢೀರ್ ಎತ್ತಂಗಡಿ‌ ಮಾಡಿ ಧಾರ್ಮಿಕ‌ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ಕುಣಿಗಲ್ ತಾಲೂಕಿ‌ನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ಯ‌ನಿರ್ಚಹಿಸುತ್ತಿದ್ದ ಎನ್. ಕೃಷ್ಣಪ್ಪ ಅವರನ್ನು ಘಾಟಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಎನ್.ಕೃಷ್ಣಪ್ಪ ಅವರು ಈ ಹಿಂದೆ ಘಾಟಿ ಸುಕ್ಷೇತದಲ್ಲೇ ಕಾರ್ಯ‌ನಿರ್ವಹಿಸಿದ್ದರು. ನಾಗರಾಜ್ ಅವರನ್ನು ಯಡಿಯೂರಿಗೆ ವರ್ಗಾವಣೆ‌ ಮಾಡಲಾಗಿದೆ.

Leave a Reply

Your email address will not be published. Required fields are marked *