93 ವರ್ಷದ ವೃದ್ಧನೊಬ್ಬ ತನ್ನ ಪತ್ನಿಗೆ ಮಂಗಳಸೂತ್ರ ಕೊಡಿಸಲು ಚಿನ್ನದಂಗಡಿಗೆ ಚಿಲ್ಲರೆ ಕಾಸು ತಂದ ವಿಡಿಯೋ ಒಂದು ವೈರಲ್ ಆಗಿದೆ. ಇವರ ಕರುಣಾಜನಕ ಪ್ರೀತಿಗೆ ಮನಸೋತ ಅಂಗಡಿಯಾತ ಕೇವಲ 20 ರೂ. ಪಡೆದು ಮಂಗಳಸೂತ್ರ ಕೊಟ್ಟು ಕಳಿಸಿದ್ದಾನೆ.
ಅಂಗಡಿಯಾತನ ಹೃದಯ ವೈಶಾಲ್ಯತೆಗೆ ಕರಗಿಹೋದ ವೃದ್ಧ, ದಂಪತಿ ಕಣ್ಣೀರು ಹಾಕಿದ್ದಾರೆ. ನಮಗೆ ಇಬ್ಬರು ಗಂಡು ಮಕ್ಕಳಿದ್ದರು, ಅವರ ಪೈಕಿ ಒಬ್ಬ ಮೃತಪಟ್ಟಿದ್ದು , ಮತ್ತೊಬ್ಬ ಕುಡಿತದ ದಾಸನಾಗಿದ್ದಾನೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಸದ್ಯದ ಚಿನ್ನದ ಬೆಲೆಯ ಅರಿವಿಲ್ಲದೆ ಅಂಗಡಿ ಬಾಗಿಲು ಹತ್ತಿದ ಈ ದಂಪತಿ ತಮ್ಮ ಕೈಚೀಲದಿಂದ 1200 ರೂ. ತೆಗೆದಿದ್ದಾರೆ. ಇಷ್ಟು ಹಣ ಸಾಲದು ಎಂದು ಅಂಗಡಿಯಾತ ಹೇಳಿದಾಗ ವೃದ್ಧ ತನ್ನ ಜೇಬಿನಿಂದ ಚಿಲ್ಲರೆ ನಾಣ್ಯಗಳನ್ನು ಹೊರತೆಗೆದಿದ್ದಾನೆ. ಈ ದೃಶ್ಯ ಕಂಡು ಅಂಗಡಿಯಾತ ಕರಗಿ ನೀರಾಗಿದ್ದಾನೆ.
ಬಳಿಕ ಇಬ್ಬರ ಹಣವನ್ನೂ ಅವರಿಗೆ ವಾಪಸ್ ಕೊಟ್ಟು. ತಾಳಿಯನ್ನೂ ಕೊಟ್ಟು ನೀವು ಪಾಂಡುರಂಗ ರುಕ್ಮಿಣಿ ಇದ್ದಂತೆ.. ಕೇವಲ ಹತ್ತು ರೂಪಾಯಿ ಕೊಡಿ ಎಂದು ಹೇಳಿ ಆಶೀರ್ವಾದ ಪಡೆದು ಕಳಿಸಿದ್ದಾನೆ. ಅಂಗಡಿಯಾತನ ವರ್ತನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…
ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…
ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…
ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…