93 ವರ್ಷದ ವೃದ್ಧನೊಬ್ಬ ತನ್ನ ಪತ್ನಿಗೆ ಮಂಗಳಸೂತ್ರ ಕೊಡಿಸಲು ಚಿನ್ನದಂಗಡಿಗೆ ಚಿಲ್ಲರೆ ಕಾಸು ತಂದ ವಿಡಿಯೋ ಒಂದು ವೈರಲ್ ಆಗಿದೆ. ಇವರ ಕರುಣಾಜನಕ ಪ್ರೀತಿಗೆ ಮನಸೋತ ಅಂಗಡಿಯಾತ ಕೇವಲ 20 ರೂ. ಪಡೆದು ಮಂಗಳಸೂತ್ರ ಕೊಟ್ಟು ಕಳಿಸಿದ್ದಾನೆ.
ಅಂಗಡಿಯಾತನ ಹೃದಯ ವೈಶಾಲ್ಯತೆಗೆ ಕರಗಿಹೋದ ವೃದ್ಧ, ದಂಪತಿ ಕಣ್ಣೀರು ಹಾಕಿದ್ದಾರೆ. ನಮಗೆ ಇಬ್ಬರು ಗಂಡು ಮಕ್ಕಳಿದ್ದರು, ಅವರ ಪೈಕಿ ಒಬ್ಬ ಮೃತಪಟ್ಟಿದ್ದು , ಮತ್ತೊಬ್ಬ ಕುಡಿತದ ದಾಸನಾಗಿದ್ದಾನೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಸದ್ಯದ ಚಿನ್ನದ ಬೆಲೆಯ ಅರಿವಿಲ್ಲದೆ ಅಂಗಡಿ ಬಾಗಿಲು ಹತ್ತಿದ ಈ ದಂಪತಿ ತಮ್ಮ ಕೈಚೀಲದಿಂದ 1200 ರೂ. ತೆಗೆದಿದ್ದಾರೆ. ಇಷ್ಟು ಹಣ ಸಾಲದು ಎಂದು ಅಂಗಡಿಯಾತ ಹೇಳಿದಾಗ ವೃದ್ಧ ತನ್ನ ಜೇಬಿನಿಂದ ಚಿಲ್ಲರೆ ನಾಣ್ಯಗಳನ್ನು ಹೊರತೆಗೆದಿದ್ದಾನೆ. ಈ ದೃಶ್ಯ ಕಂಡು ಅಂಗಡಿಯಾತ ಕರಗಿ ನೀರಾಗಿದ್ದಾನೆ.
ಬಳಿಕ ಇಬ್ಬರ ಹಣವನ್ನೂ ಅವರಿಗೆ ವಾಪಸ್ ಕೊಟ್ಟು. ತಾಳಿಯನ್ನೂ ಕೊಟ್ಟು ನೀವು ಪಾಂಡುರಂಗ ರುಕ್ಮಿಣಿ ಇದ್ದಂತೆ.. ಕೇವಲ ಹತ್ತು ರೂಪಾಯಿ ಕೊಡಿ ಎಂದು ಹೇಳಿ ಆಶೀರ್ವಾದ ಪಡೆದು ಕಳಿಸಿದ್ದಾನೆ. ಅಂಗಡಿಯಾತನ ವರ್ತನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…
ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…