40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತನಿಗೆ ಬಿಟ್ಟು, ಬೇರೊಬ್ಬ ವ್ಯಕ್ತಿಗೆ ಭೂಮಿ ಮಂಜೂರು

ದೊಡ್ಡಬಳ್ಳಾಪುರ : ಗಿಡಗಂಟೆಗಳಿಂದ ಅವರಿಸಿದ್ದ ಗುಡ್ಡ ಪ್ರದೇಶ, ಗಿಡ ಕಿತ್ತು ಭೂಮಿ ಸಮತಟ್ಟು ಮಾಡಿದ ರೈತ ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ, ಭೂ ಮಂಜೂರಾತಿಯ ನಿರೀಕ್ಷೆಯಲ್ಲಿದ್ದ ಸಾಗುವಳಿದಾರನ ಜಮೀನು ಬೇರೊಬ್ಬ ವ್ಯಕ್ತಿಗೆ ಮಂಜೂರಾಗಿದೆ, 40 ವರ್ಷಗಳ ಶ್ರಮ ಹಾಕಿದ ಭೂಮಿಯನ್ನ ಬೀಡುವಂತೆ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ರೈತ ಮುತ್ತುರಾಜ್ ಆರೋಪಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ತಂಬೇನಹಳ್ಳಿಯ ಸರ್ವೆ ನಂಬರ್ 15ರ ಸರ್ಕಾರಿ ಗೋಮಾಳದಲ್ಲಿನ 2 ಎಕರೆ ಜಾಗದಲ್ಲಿ ರೈತ ಮುತ್ತುರಾಜ್ ಸಾಗುವಳಿ ಮಾಡುತ್ತಿದ್ದಾರೆ. ಅವರ ತಂದೆ ತಾಡಪ್ಪ ಕಳೆದ 40 ವರ್ಷಗಳಿಂದ ಈ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ, ಮೊದಲಿಗೆ ಗುಡಿಸಿಲಲ್ಲಿ ವಾಸವಾಗಿದ್ದ ಅವರು ಭೂಮಿಯನ್ನ ಸಾಗುವಳಿ ಭೂಮಿಯನ್ನಾಗಿ ಮಾಡಿದ್ದಾರೆ, ಬೇಸಾಯದ ಜೊತೆಯಲ್ಲಿ ಹಲಸಿನ ಮರಗಳನ್ನ ಬೆಳೆದಿದ್ದಾರೆ, ಇತ್ತಿಚೇಗೆ ಸಾಧರಣ ಮನೆಯನ್ನ ಕಟ್ಟಿಕೊಂಡು ವಾಸವಾಗಿದ್ದಾರೆ, ರಾಗಿ, ಜೋಳ, ಅಲಸಂದಿ, ಅವರೆ, ತೊಗರಿ ಬೆಳೆದು ಜೀವನ ಮಾಡುತ್ತಿದ್ದಾರೆ, ಭೂ ಮಂಜೂರಾತಿಗಾಗಿ ತಹಶೀಲ್ದಾರ್ ಕಛೇರಿಗೆ ಅರ್ಜಿಯನ್ನ ಸಲ್ಲಿಸಿದರು, ಇಂದಲ್ಲಾ ನಾಳೆ ತಮ್ಮ ಹೆಸರಿಗೆ ಜಮೀನು ಮಂಜೂರಾತಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇದೇ ಜಾಗ ಚೌಡಮ್ಮ ಎಂಬುವರ ಹೆಸರಿಗೆ ಮಂಜೂರಾತಿಯಾಗಿದೆ, ಹೊಲ ಮನೆ ಬಿಟ್ಟು ಹೋಗುವಂತೆ ಮುತ್ತುರಾಜ್ ಕುಟುಂಬ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಮುತ್ತುರಾಜ್, ಕಳೆದ 40 ವರ್ಷಗಳಿಂದ ನಾವು ಈ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದೇವೆ, ರೈತನ ಹೆಸರಿಗೆ ಖಾತೆ ಮಾಡುವ ಮುನ್ನ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಮಹಜರ್ ಮಾಡಿ, ಜಮೀನು ಅಕ್ಕಪಕ್ಕ ರೈತನ ಸಹಿ ಪಡೆದು, ನೈಜ ವರದಿಯ ಮೇಲೆ ಸಾಗುವಳಿ ಚೀಟಿ ಮತ್ತು ರೈತನ ಹೆಸರಿಗೆ ಪಹಣಿ ಮಾಡ ಬೇಕು. ಆದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ, ಸ್ದಾಧೀನದಲ್ಲಿರುವ ನಮ್ಮನ್ನು ಕೇಳದೆ, ನಾವು ಸಾಗುವಳಿ ಮಾಡುತ್ತಿರುವ ಜಮೀನನ್ನ ಚೌಡಮ್ಮರವರಿಗೆ ಮಂಜೂರು ಮಾಡಿ ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ರೈತ ಮುನೇಗೌಡ ಮಾತನಾಡಿ, ಮುತ್ತುರಾಜ್ ಕುಟುಂಬ ಕಳೆದ 40 ವರ್ಷಗಳಿಂದ ಈ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದಾರೆ, ನಾವೇಲ್ಲ ಭೂ ಮಂಜೂರಾತಿಗಾಗಿ ತಹಶೀಲ್ದಾರ್ ಕಛೇರಿಗೆ ಅರ್ಜಿಯನ್ನ ಹಾಕಿದ್ದೇವು, ಇಲ್ಲಿಯವರೆಗೂ ನಮಗೆ ಸಾಗುವಳಿ ಚೀಟಿ ಸಹ ನೀಡಿಲ್ಲ, ಕಛೇರಿಯಿಂದ ಕಛೇರಿಗೆ ಅಲೆಸುತ್ತಿದ್ದಾರೆ, ಹಣ ನೀಡುವ ರೈತರಿಗೆ ಸಾಗುವಳಿ ಚೀಟಿ, ಪಹಣೆ ಮಾಡಲಾಗುತ್ತಿದೆ ಎಂದರು.

ಚೌಡಮ್ಮರವರ ಅಳಿಯ ರಾಜಣ್ಣ ಮಾತನಾಡಿ, ಚೌಡಮ್ಮ ಭೂ ಮಂಜೂರಾತಿ ಅರ್ಜಿ ಹಾಕಿದ್ದು, ಆದರ ಆಧಾರ ಮೇಲೆ ಭೂ ಮಂಜೂರಾತಿಯಾಗಿದೆ, ಭೂ ಮಂಜೂರಾತಿ ಮುನ್ನ ಚೌಡಮ್ಮರವರ ಜಮೀನು ಯಾವುದೆಂದ್ದು ಗೊತ್ತಿರಲಿಲ್ಲ, ಮಂಜೂರಾತಿಯಾದ ನಂತರ ಚೌಡಮ್ಮ ಜಾಗ ಇದೆ ಎಂದು ತಿಳಿದು ಬಂದಿದೆ, ಜಾಗ ಆದಲಿ ಬದಲಿಯಾಗಿದೆ, ಆ ಕಾರಣಕ್ಕೆ ಜಮೀನು ಬಿಡುವಂತೆ ನಾವು ಕೇಳುತ್ತಿರುವುದ್ದಾಗಿ ಹೇಳಿದರು.

Ramesh Babu

Journalist

Recent Posts

ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಯತ್ನ

ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಚಿನ್ನಾಭರಣ ದರೋಡೆಗೆ…

50 minutes ago

ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ: ಇಬ್ಬರು ಯುವಕರಿಗೆ ಸುಟ್ಟ ಗಾಯ

ದೊಡ್ಡಬಳ್ಳಾಪುರ: ರಾತ್ರಿ ವೇಳೆ ಗ್ಯಾಸ್ ಸ್ಟೌವ್ ಆನ್ ಸ್ಥಿತಿಯಲ್ಲಿಯೇ ಕೆಲಸಕ್ಕೆ ತೆರಳಿದ್ದ ಪರಿಣಾಮ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಇಬ್ಬರು…

10 hours ago

ಬರ ವೀಕ್ಷಣೆ ನಡೆಸಿದ ಸಚಿವ ಕೆ.ಎಚ್ ಮುನಿಯಪ್ಪ: ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

1 day ago

28ಕ್ಕೂ ಹೆಚ್ಚು ಜಿಲ್ಲೆಗಳು ಬರದ ಸಂಕಷ್ಟದಲ್ಲಿ; ರೈತರಿಗೆ ತಕ್ಷಣ ₹10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿ: ಬಿ.ವೈ. ವಿಜಯೇಂದ್ರ ಆಗ್ರಹ

ತುಮಕೂರು: ರಾಜ್ಯದ 28ಕ್ಕೂ ಹೆಚ್ಚು ಜಿಲ್ಲೆಗಳು ಸಮರ್ಪಕ ಮಳೆಯ ಕೊರತೆಯಿಂದ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ರಾಜ್ಯ…

2 days ago

ಅತಿವೃಷ್ಟಿ–ಬರ ಎದುರಿಸಲು ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಯಾವ ಸಚಿವರಿಗೆ ಯಾವ ಜಿಲ್ಲೆ? ಸರ್ಕಾರದಿಂದ ಉಸ್ತುವಾರಿ ಪಟ್ಟಿ ಪ್ರಕಟ

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಚಿವ ಸಂಪುಟದ ಸದಸ್ಯರಿಗೆ…

2 days ago

ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಅಧ್ಯಕ್ಷರಾಗಿ ಜಿ.ಲಕ್ಷ್ಮಿಪತಿ ಆಯ್ಕೆ

ದೊಡ್ಡಬಳ್ಳಾಪುರ: ಸಮಾಜ ಸೇವೆಯೇ ಲಯನ್ಸ್ ಕ್ಲಬ್‌ನ ಮೂಲ ಧ್ಯೇಯವಾಗಿದ್ದು, ನಿರಂತರವಾಗಿ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು. ಲಯನ್ಸ್ ಕ್ಲಬ್ ಆಫ್ ಕೊನಘಟ್ಟ…

2 days ago