ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12 ಕೆಜಿ ಗಾಂಜಾವನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 8 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬಂಧಿತ ಆರೋಪಿ ಬೆಂಗಳೂರಿನ ಟಿನ್ ಫ್ಯಾಕ್ಟರಿ ಮೂಲದ ಹನಿಯಪ್ಪನ್ (60) ಎಂದು ತಿಳಿದುಬಂದಿದೆ. ಬಂಧಿತನಿದ್ದ 8 ಲಕ್ಷ ರೂಪಾಯಿ ಮೌಲ್ಯದ 12 ಕೆಜಿ ಗಾಂಜಾ ವಶಪಡಿಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಬಕಾರಿ ಅಧೀಕ್ಷಕರು ಉಪ ವಿಭಾಗ ಚಿಕ್ಕಬಳ್ಳಾಪುರ ಅರುಣ್ ಪ್ರಸಾದ್ ನೇತೃತ್ವದಲ್ಲಿ ತಂಡ ರಚಿಸಿ ಖಚಿತ ಮಾಹಿತಿ ಮೆರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿ ವೇಳೆ ಗೌರಿಬಿದನೂರು ಅಬಕಾರಿ ನಿರೀಕ್ಷಕರಾದ ಮಂಜುನಾಥ್, ಹಾಗೂ ಅಶ್ವಿನಿ ಬೆಳ್ಳೂರ್, ಉಪ ವಿಭಾಗದ ವಿನೋದ್ ಡಿಎಲ್, ಹಿಂದೂಪುರ ಆರ್ಪಿಎಫ್ ಅಧಿಕಾರಿಯಾದ ಸಾಯಿನಾಥ ರೆಡ್ಡಿ, ಹಾಗೂ ಪೇದೆಗಳಾದ ರವಿ ಪ್ರಸಾದ್, ಹರೀಶ್, ಗೃಹರಕ್ಷಕ ಸಿಬ್ಬಂದಿ ರಾಜಣ್ಣ ಮತ್ತು ಕಾಂತರಾಜ್ ಇದ್ದರು.