2023-24 ನೇ ವರ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜ್ಯವಲಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ಸಸಿಗಳ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅಗತ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ತೆಂಗು, ಮಾವು, ಸೀಬೆ, ನುಗ್ಗೆ, ಕರಿಬೇವು, ನೆಲ್ಲಿ ಮತ್ತು ನಿಂಬೆ ಕಸಿ/ಸಸಿಗಳನ್ನು ತೋಟಗಾರಿಕೆ ಇಲಾಖೆ ನಿಗದಿಪಡಿಸಿದ ದರದಲ್ಲಿ ಖರೀದಿಸಲು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.

2023ರ ಎಪ್ರಿಲ್ ಅಂತ್ಯಕ್ಕೆ ತೋಟಗಾರಿಕೆ ಇಲಾಖೆಯಡಿ ಒಟ್ಟಾರೆ ಉಳಿಕೆ ಕಸಿ/ಸಸಿಗಳ ವಿವರ:

ಕನ್ನಮಂಗಲ ನರ್ಸರಿಯಲ್ಲಿ ಮಾವು-3596, ಸೀಬೆ-3510, ನಿಂಬೆ-1830, ತೆಂಗು-9485, ಪಪ್ಪಾಯ-1977 , ನುಗ್ಗೆ-1262, ಕರಿಬೇವು-1977, ಇತರೆ (ಅಲಂಕಾರಿಕ ಗಿಡಗಳು)-6968, ಒಟ್ಟು-30605 ಗಿಡಗಳಿವೆ.

ನಗರೂರು ನರ್ಸರಿಯಲ್ಲಿ ತೆಂಗು-8550, ಇತರೆ (ಅಲಂಕಾರಿಕ ಗಿಡಗಳು)-2200
ಒಟ್ಟು-10750 ಗಿಡಗಳಿವೆ.

ದೊಡ್ಡಬಳ್ಳಾಪುರ ನರ್ಸರಿಯಲ್ಲಿ ತೆಂಗು-10650, ಅಡಿಕೆ-2000, ನುಗ್ಗೆ-990, ಕರಿಬೇವು-990, ಇತರೆ (ಅಲಂಕಾರಿಕ ಗಿಡಗಳು)-3402, ಒಟ್ಟು-18032 ಗಿಡಗಳಿವೆ.

ತಿಪ್ಪಗೊಂಡನಹಳ್ಳಿ ನರ್ಸರಿಯಲ್ಲಿ ಮಾವು-3000, ಸೀಬೆ-3000, ನಿಂಬೆ-3282, ತೆಂಗು-13300,ಅಡಿಕೆ- 20000,ನುಗ್ಗೆ-1918, ಕರಿಬೇವು-700, ಇತರೆ(ಅಲಂಕಾರಿಕ ಗಿಡಗಳು)- 235, ಒಟ್ಟು-45435 ಗಿಡಗಳಿವೆ.

ಕೆ.ಪೂಜೇನಹಳ್ಳಿ ನರ್ಸರಿಯಲ್ಲಿ ಮಾವು-1718, ಸೀಬೆ-3000, ನಿಂಬೆ-1130, ತೆಂಗು-10125, ಇತರೆ(ಅಲಂಕಾರಿಕ ಗಿಡಗಳು)-300 , ಒಟ್ಟು-16273 ಗಿಡಗಳಿವೆ.

ಒಟ್ಟು ಜಿಲ್ಲೆಯಲ್ಲಿ 8314ಮಾವು, 9510ಸೀಬೆ, ನಿಂಬೆ 6242, ತೆಂಗು52110, ಪಪ್ಪಾಯ1977, ಅಡಿಕೆ22000, ನುಗ್ಗೆ4170, ಕರಿಬೇವು3667, ಇತರೆ(ಅಲಂಕಾರಿಕ ಗಿಡಗಳು) 13105, ಒಟ್ಟು121095 ಗಿಡಗಳಿವೆ.

ಹೆಚ್ಚಿನ ಮಾಹಿತಿಗಾಗಿ

ಲಕ್ಷ್ಮಿ ಜೆ,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ:9449045052,

ಸ್ಮಿತಾ ಎಂ.ಎನ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೆ.ಪೂಜೇನಹಳ್ಳಿ ತೋಟಗಾರಿಕೆ ಕ್ಷೇತ್ರ: 9035958286,

ಶಾಮಣ್ಣ.ಎಸ್.ಎನ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕನ್ನಮಂಗಲ ಮಾವು ಉತ್ಕೃಷ್ಟ ಕೇಂದ್ರ: 7338011518,

ವಿಜಯ್ ಕುಮಾರ್ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಿಪ್ಪಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ: 9035720179,

ಶಿವಾನಂದ್, ತೋಟಗಾರಿಕೆ ಸಹಾಯಕರು, ದೊಡ್ಡಬಳ್ಳಾಪುರ ತೋಟಗಾರಿಕೆ ಕ್ಷೇತ್ರ: 9164021289 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರಾದ ಗುಣವಂತ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ramesh Babu

Journalist

Recent Posts

ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್

  ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…

5 minutes ago

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣದ ಪಾಲು

ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…

2 hours ago

ಆಸ್ತಿ ವ್ಯಾಮೋಹಕ್ಕೆ ಹೆತ್ತ ತಾಯಿಯ ಕೊಲೆ: ಕಲ್ಲು ಎತ್ತಿ ಹಾಕಿ ಕೊಂದ ಮಗ.!

ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…

2 hours ago

ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್….! ಏಕೆ ಗೊತ್ತಾ….?

ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…

4 hours ago

ಪಿಟಿಸಿಎಲ್ ಕಾಯ್ದೆ ವಿರುದ್ದ ತೀರ್ಪು ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯ

ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…

5 hours ago

ಸಾಲದ ಸುಳಿಗಿಂತಲೂ ಕಿರುಕುಳವೇ ಮಾರಕ…

ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…

9 hours ago