ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅಗತ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ತೆಂಗು, ಮಾವು, ಸೀಬೆ, ನುಗ್ಗೆ, ಕರಿಬೇವು, ನೆಲ್ಲಿ ಮತ್ತು ನಿಂಬೆ ಕಸಿ/ಸಸಿಗಳನ್ನು ತೋಟಗಾರಿಕೆ ಇಲಾಖೆ ನಿಗದಿಪಡಿಸಿದ ದರದಲ್ಲಿ ಖರೀದಿಸಲು ರೈತರಿಗೆ ಅರಿವು ಮೂಡಿಸಲಾಗುತ್ತಿದೆ.
2023ರ ಎಪ್ರಿಲ್ ಅಂತ್ಯಕ್ಕೆ ತೋಟಗಾರಿಕೆ ಇಲಾಖೆಯಡಿ ಒಟ್ಟಾರೆ ಉಳಿಕೆ ಕಸಿ/ಸಸಿಗಳ ವಿವರ:
ಕನ್ನಮಂಗಲ ನರ್ಸರಿಯಲ್ಲಿ ಮಾವು-3596, ಸೀಬೆ-3510, ನಿಂಬೆ-1830, ತೆಂಗು-9485, ಪಪ್ಪಾಯ-1977 , ನುಗ್ಗೆ-1262, ಕರಿಬೇವು-1977, ಇತರೆ (ಅಲಂಕಾರಿಕ ಗಿಡಗಳು)-6968, ಒಟ್ಟು-30605 ಗಿಡಗಳಿವೆ.
ನಗರೂರು ನರ್ಸರಿಯಲ್ಲಿ ತೆಂಗು-8550, ಇತರೆ (ಅಲಂಕಾರಿಕ ಗಿಡಗಳು)-2200
ಒಟ್ಟು-10750 ಗಿಡಗಳಿವೆ.
ದೊಡ್ಡಬಳ್ಳಾಪುರ ನರ್ಸರಿಯಲ್ಲಿ ತೆಂಗು-10650, ಅಡಿಕೆ-2000, ನುಗ್ಗೆ-990, ಕರಿಬೇವು-990, ಇತರೆ (ಅಲಂಕಾರಿಕ ಗಿಡಗಳು)-3402, ಒಟ್ಟು-18032 ಗಿಡಗಳಿವೆ.
ತಿಪ್ಪಗೊಂಡನಹಳ್ಳಿ ನರ್ಸರಿಯಲ್ಲಿ ಮಾವು-3000, ಸೀಬೆ-3000, ನಿಂಬೆ-3282, ತೆಂಗು-13300,ಅಡಿಕೆ- 20000,ನುಗ್ಗೆ-1918, ಕರಿಬೇವು-700, ಇತರೆ(ಅಲಂಕಾರಿಕ ಗಿಡಗಳು)- 235, ಒಟ್ಟು-45435 ಗಿಡಗಳಿವೆ.
ಕೆ.ಪೂಜೇನಹಳ್ಳಿ ನರ್ಸರಿಯಲ್ಲಿ ಮಾವು-1718, ಸೀಬೆ-3000, ನಿಂಬೆ-1130, ತೆಂಗು-10125, ಇತರೆ(ಅಲಂಕಾರಿಕ ಗಿಡಗಳು)-300 , ಒಟ್ಟು-16273 ಗಿಡಗಳಿವೆ.
ಒಟ್ಟು ಜಿಲ್ಲೆಯಲ್ಲಿ 8314ಮಾವು, 9510ಸೀಬೆ, ನಿಂಬೆ 6242, ತೆಂಗು52110, ಪಪ್ಪಾಯ1977, ಅಡಿಕೆ22000, ನುಗ್ಗೆ4170, ಕರಿಬೇವು3667, ಇತರೆ(ಅಲಂಕಾರಿಕ ಗಿಡಗಳು) 13105, ಒಟ್ಟು121095 ಗಿಡಗಳಿವೆ.
ಹೆಚ್ಚಿನ ಮಾಹಿತಿಗಾಗಿ
ಲಕ್ಷ್ಮಿ ಜೆ,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ:9449045052,
ಸ್ಮಿತಾ ಎಂ.ಎನ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೆ.ಪೂಜೇನಹಳ್ಳಿ ತೋಟಗಾರಿಕೆ ಕ್ಷೇತ್ರ: 9035958286,
ಶಾಮಣ್ಣ.ಎಸ್.ಎನ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕನ್ನಮಂಗಲ ಮಾವು ಉತ್ಕೃಷ್ಟ ಕೇಂದ್ರ: 7338011518,
ವಿಜಯ್ ಕುಮಾರ್ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಿಪ್ಪಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ: 9035720179,
ಶಿವಾನಂದ್, ತೋಟಗಾರಿಕೆ ಸಹಾಯಕರು, ದೊಡ್ಡಬಳ್ಳಾಪುರ ತೋಟಗಾರಿಕೆ ಕ್ಷೇತ್ರ: 9164021289 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರಾದ ಗುಣವಂತ.ಜೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…