2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭ ಹಿನ್ನೆಲೆ, ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಶಾಂತಿಯುತ ಮತದಾನಕ್ಕೆ ಹಾಗೂ ಸಾರ್ವಜನಿಕರು, ಮತದಾರರಿಗೆ ಧೈರ್ಯ ತುಂಬಲು ತಾಲೂಕಿನ ದೊಡ್ಡಬೆಳವಂಗಲ ಪಿಎಸ್ ವ್ಯಾಪ್ತಿಯಲ್ಲಿ ತ್ರಿಪುರ ರಾಜ್ಯ ರೈಫಲ್ಸ್ ತುಕಡಿ ‘ರೂಟ್ ಮಾರ್ಚ್’ ನಡೆಸಲಾಯಿತು.
ರೂಟ್ ಮಾರ್ಚ್ ನಡೆಸಿದ ಪೊಲೀಸರು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಸಾರ್ವಜನಿಕರ ಸಹಕಾರ ಕೋರಿ, ನಿರ್ಭಯವಾಗಿ ಮತ ಚಲಾಯಿಸಲು ಮುಂದಾಗಬೇಕು ಎಂಬ ಸಂದೇಶ ರವಾನೆ ಮಾಡಿದರು.
ದೊಡ್ಡಬೆಳವಂಗಲ ಠಾಣಾ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ಬಹಳ ಶಿಸ್ತಿನಿಂದ ತ್ರಿಪುರ ರಾಜ್ಯ ರೈಫಲ್ಸ್ ತುಕಡಿ ‘ರೂಟ್ ಮಾರ್ಚ್’ ನಡೆಸಿದರು.