‘2018ರ ಚುನಾವಣೆಯಲ್ಲಿ ವೆಂಕಟರಮಣಯ್ಯ ಮತ್ತು ನರಸಿಂಹಸ್ವಾಮಿ ನಡುವೆ ಒಪ್ಪಂದ; ಒಳ ಒಪ್ಪಂದ ಸಾಕ್ಷೀಕರಿಸಿ ನರಸಿಂಹಸ್ವಾಮಿ ಕಾಂಗ್ರೆಸ್ ಸೇರ್ಪಡೆ’-ಬಿ.ಮುನೇಗೌಡ

ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ವೆಂಕಟರಣಯ್ಯ ಮತ್ತು ಜೆ.ನರಸಿಂಹಸ್ವಾಮಿ ನಡುವೆ ಒಳ ಒಪ್ಪಂದವಾಗಿತ್ತು, ನರಸಿಂಹಸ್ವಾಮಿ ಚುನಾವಣೆಯ ದಿನ ಜನರ ಕೈಗೆ ಸಿಗದೆ ನಾಪತ್ತೆಯಾಗಿದ್ರು, ಇದರಿಂದ ವೆಂಕಟರಣಯ್ಯ ಬಹಳ ಸುಲಭವಾಗಿ ಗೆದ್ದರು. ಈಗ ನರಸಿಂಹಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಒಳ ಒಪ್ಪಂದವನ್ನ ಸಾಕ್ಷೀಕರಿಸಿದೆ ಎಂದರು.

ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಬಿ.ಮುನೇಗೌಡ, ಹಾಲಿ ಶಾಸಕರ ವಿರುದ್ಧ ವಾಗ್ಧಾಳಿ ನಡೆಸಿದರು. ಟಿ.ವೆಂಕಟರಮಣಯ್ಯ ಶಾಸಕರಾಗಿ 10 ವರ್ಷಗಳಾಗಿದೆ, ಆದರೆ ತಾಲೂಕಿನ ಅಭಿವೃದ್ಧಿ ಬಗ್ಗೆ ಅವರಿಗೆ ಆಸಕ್ತಿಯ ಇಲ್ಲ, ಕೇವಲ ಅವರ ಅಭಿವೃದ್ಧಿಗಾಗಿ ಶಾಸಕರಾಗಿದ್ದಾರಷ್ಟೇ, ದೊಡ್ಡಬೆಳವಂಗಲ ಹೋಬಳಿಯಲ್ಲಿ ಬಿಬಿಎಂಪಿಯನ್ನ ಕಸವನ್ನ ತಂದು ಸುರಿಯಲಾಗುತ್ತಿದೆ, ಆದರೆ ಶಾಸಕರಾದ ಟಿ.ವೆಂಕಟರಣಯ್ಯ ಕಸವನ್ನ ಶಾಶ್ವತವಾಗಿ ನಿಲ್ಲಿಸುವ ಪ್ರಯತ್ನವೇ ಮಾಡಿಲ್ಲ. ಬಿಬಿಎಂಪಿ ಕಸದಿಂದ ರೋಸಿ ಹೋದ ಜನರು ಪ್ರತಿಭಟನೆಯನ್ನ ಮಾಡುತ್ತಾರೆ.

ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳ ಜೊತೆ ಶಾಸಕರು ಭೇಟಿ ನೀಡುತ್ತಾರೆ. ಪ್ರತಿಭಟನೆ ಬೀಸಿಗೆ ಬಿಬಿಎಂಪಿಯಿಂದ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ, ಶಾಸಕರು ಬಿಬಿಎಂಪಿ ಕಸವನ್ನ ನಿಲ್ಲಿಸದೆ ಇರುವುದು ನೋಡಿದ್ದಾರೆ ಬಿಬಿಎಂಪಿ ಅನುಧಾನದ ಕಮಿಷನ್ ಹಣಕ್ಕೆ ಆಸೆಪಟ್ಟಿರುವಂತೆ ಕಾಣಿಸುತ್ತಿದೆ ಎಂದು ಆರೋಪ ಮಾಡಿದರು.

ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಇತ್ತಿಚೇಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನೇಗೌಡರು 2018ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾದ ಟಿ.ವೆಂಕಟರಣಯ್ಯ ಮತ್ತು ಜೆ.ನರಸಿಂಹಸ್ವಾಮಿ ಒಳ ಒಪ್ಪಂದ ಮಾಡಿಕೊಂಡಿದ್ದರು ಇದೇ ಕಾರಣಕ್ಕೆ ನರಸಿಂಹಸ್ವಾಮಿ ಚುನಾವಣೆಯ ದಿನ ಜನರ ಕೈಗೆ ಸಿಗದೆ ನಾಪತ್ತೆಯಾಗಿದ್ದರು, ಇದು ಶಾಸಕರ ಗೆಲುವಿಗೆ ಕಾರಣವಾಗಿತ್ತು, ಈಗ ನರಸಿಂಹಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಇಬ್ಬರ ಒಳ ಒಪ್ಪಂದಕ್ಕೆ ಸಾಕ್ಷಿಯಾಗಿದೆ ಎಂದರು, ಇದೇ ವೇಳೆ ನರಸಿಂಹಸ್ವಾಮಿಗೆ ಕಿವಿಮಾತು ಹೇಳಿದರ ಅವರು ಇವರು ಸ್ವಾರ್ಥ ಬಿಟ್ಟು ಪಕ್ಷದ ಬಗ್ಗೆ ಯೋಚನೆ ಮಾಡಲಿ ಎಂದರು.