18 ವರ್ಷದೊಳಗಿನ ಮಕ್ಕಳ ಬೈಕ್ ಸಂಚಾರಕ್ಕೆ ಬ್ರೇಕ್:  ಅಪ್ರಾಪ್ತರಿಗೆ ಬೈಕ್ ಕೊಟ್ಟರೆ ಪಾಲಕರಿಗೆ ಬೀಳುತ್ತೆ ದಂಡ ಅಥವಾ ಜೈಲು ಶಿಕ್ಷೆ…ಹುಷಾರ್…!

ಶಾಲಾ, ಕಾಲೇಜಿನಲ್ಲಿ ಓದುತ್ತಿರುವ (18 ವರ್ಷದೊಳಗಿನವರು) ಬಾಲಕ, ಬಾಲಕಿಯರಿಗೆ ಚಾಲನ ಪರವಾನಗಿ ಅಲ್ಲ, ಬೈಕ್ ಕೂಡಾ ಕೈಗೆ ನೀಡಬಾರದೆಂಬುದು ಸುಪ್ರಿಂ ಕೋರ್ಟ್ ಆದೇಶ‌ ಇದೆ. ಈ ಆದೇಶ ಪಾಲಿಸದಿದ್ದಲ್ಲಿ ಪೋಷಕರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಎಚ್ಚರಿಸಿದರು.

ನಗರದಲ್ಲಿ ಅಪ್ರಾಪ್ತರ ಬೈಕ್ ಸಂಚಾರಕ್ಕೆ ಕಡಿವಾಣ ಹಾಕಲು, 18 ವರ್ಷದೊಳಗಿನ ಮಕ್ಕಳು ಚಾಲಯಿಸುತ್ತಿದ್ದ ಬೈಕ್ ಗಳನ್ನು ತಡೆದು ಸಂಚಾರಿ ನಿಯಮಗಳನ್ನು ತಿಳಿಹೇಳುವ ಅಭಿಯಾನ ಕೈಗೊಂಡು ಮಾತನಾಡಿದ ಅವರು, ಅಪ್ರಾಪ್ತ ಬಾಲಕ, ಬಾಲಕಿಯರ ಕೈಗೆ ಬೈಕ್ ಸಿಕ್ಕರೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ‌ ಮನಸೋಇಚ್ಛೆ ಬೈಕ್ ಚಾಲಯಿಸಿ ಸಾರ್ವಜನಿಕ ಸಂಚಾರ ಅಸ್ತವ್ಯವಸ್ಥಗೊಳಿಸಿದ್ದಾರೆ. ಹೀಗಾಗಿ ಈ ವರ್ಗದ ಮಕ್ಕಳು ನಗರ ಸೇರಿದಂತೆ ಜಿಲ್ಲಾದ್ಯಂತ ಎರ‌್ರಾಬಿರ‌್ರಿ ಬೈಕ್‌ನಲ್ಲಿ ಸಂಚರಿಸುವ ಮೂಲಕ ರಸ್ತೆ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಅದೆಷ್ಟೋ ಮಕ್ಕಳು ಅರಳುವ ಮುನ್ನವೇ ಇಹಲೋಕ ತ್ಯಜಿಸುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ ಎಂದರು.

18 ವರ್ಷ ಪೂರೈಸದ ಬಾಲಕ, ಬಾಲಕಿ ಕೈಗೆ ಬೈಕ್ ಕೊಡುವುದನ್ನು ಪಾಲಕರು ಮೊದಲು ನಿರಾಕರಿಸಬೇಕು. ಬೈಕ್ ಕೊಟ್ಟರೆ ಸಿನಿಮಾ ಸ್ಟ್ರೈಲ್‌ನಲ್ಲಿ ಬೈಕ್ ಓಡಿಸುವ ಮೂಲಕ ಅಪಘಾತ ಸೇರಿದಂತೆ ಇಲ್ಲದ ಆವಾಂತರಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಪೋಷಕರಿಗಿರುವ ಮರ್ಯಾದೆಯನ್ನು ರಸ್ತೆ ಪಾಲು ಮಾಡುತ್ತಾರೆ. ಅವರು ಮಾಡುವ ಅನಾಹುತಕ್ಕೆ ಪೋಷಕರೇ ಬೆಲೆ ತೆತ್ತಬೇಕಾಗುತ್ತದೆ ಎನ್ನುವದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಎಲ್ಲರ ಜೀವ ಅತ್ಯಮೂಲ್ಯ, ಆದ್ದರಿಂದ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಬೈಕ್ ಸವಾರರು ತಲೆಗೆ ಹೆಲ್ಮೆಟ್ ಧರಿಸಬೇಕು ಎಂದು ತಿಳಿಹೇಳಿದರು.

ಅಪ್ರಾಪ್ತರು ತಂದಿದ್ದ ಬೈಕ್ ಗಳನ್ನು ಸೀಜ್ ಮಾಡಿ ಪೋಷಕರನ್ನು ಠಾಣೆಗೆ ಬರಮಾಡಿಕೊಂಡು ಇನ್ನು‌ ಮುಂದೆ 18 ವರ್ಷ ಪೂರೈಸದ ಬಾಲಕ, ಬಾಲಕಿ ಕೈಗೆ ಬೈಕ್ ಕೊಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Ramesh Babu

Journalist

Recent Posts

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

12 hours ago

ತೂಬಗೆರೆ ಸೊಸೈಟಿ ಅಧ್ಯಕ್ಷರಾಗಿ ವಾಸುದೇವ್, ಉಪಾಧ್ಯಕ್ಷರಾಗಿ ಸತ್ಯನಾರಾಯಣಸ್ವಾಮಿ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…

18 hours ago

80ರ ಹೊಸ್ತಿಲಲ್ಲಿ ಭಾರತ…..

ಅಂತೂ ಇಂತೂ, ಹಾಗೂ ಹೀಗೂ ಸ್ವಾತಂತ್ರ್ಯ ಪಡೆದ ನಂತರದ 79 ವರ್ಷಗಳನ್ನು ಪೂರೈಸಿದ್ದೇವೆ. ಬಹುತೇಕ ಒಂದು ಪೀಳಿಗೆ ಅಂತ್ಯವಾಗಿ ಮುಂದಿನ…

1 day ago

ಆಹಾರ ಭದ್ರತೆಯಲ್ಲಿ ಯಾವುದೇ ಲೋಪವಾಗದಿರಲಿ- ಆಹಾರ ಆಯೋಗ ಅಧ್ಯಕ್ಷ ಡಾ.ಹೆಚ್ ಕೃಷ್ಣ

ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ವಿತರಿಸುವ ಮಕ್ಕಳಿಗೆ, ಮಹಿಳೆಯರಿಗೆ ದುರ್ಬಲರಿಗೆ, ಹಿರಿಯರಿಗೆ ಆಹಾರ ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷ ಕಂಡು…

1 day ago

ನಾಳೆ(ಆ.14) ತೂಬಗೆರೆ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ (ಎಂ.ಪಿ.ಆರ್.ಎ.ಸಿ.ಎಸ್.) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ…

2 days ago

“ನನಗೆ ನೀರು ಬೇಕು, ಮಾತಾಡಲ್ಲ” — ಬಾಯಿಗೆ ಪ್ಲಾಸ್ಟರ್ ಹಾಕಿದ ವಾಟಾಳ್ ನಾಗರಾಜ್

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು…

2 days ago