13 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ: ವಾರದ ಪ್ರೀತಿಗೆ ವೆಲ್ ಕಮ್: ಇನ್ಸ್ಚಾಗ್ರಾಮ್ ನಲ್ಲಿ ಲವ್ & ಮ್ಯಾರೇಜ್

13 ವರ್ಷದ ದಾಂಪತ್ಯ ಜೀವನಕ್ಕೆ ಒಬ್ಬ‌ ಮಗನಿದ್ದಾನೆ. ಇನ್ಸ್ಚಾಗ್ರಾಮ್ ನಲ್ಲಿದ್ದ ಅವಳಿಗೆ ಹೊಸ ಲವರ್ ಸಿಕ್ಕಿದ್ದು, ವಾರದಲ್ಲಿ ಪ್ರೀತಿ ಮಾಡಿದ್ಳು, ಇದೀಗ ಲವರ್ ಜೊತೆ ಮದುವೆಯಾಗಿ ಗಂಡನಿಗೆ ಶಾಕ್ ನೀಡಿದ್ದಾಳೆ.

ನೆಲಮಂಗಲ ನಗರದ ಜಕ್ಕಸಂದ್ರದ ರಾಘವೇಂದ್ರ ನಗರದ ನೇತ್ರಾವತಿ ಎಂಬಾಕೆ ಗಂಡ ಮತ್ತು ಆತನ ಮನೆಯವರಿಗೆ ಬೀಗ್ ಶಾಕ್ ಕೊಟ್ಟಿದ್ದಾಳೆ.

ಗಂಡನ ಜೊತೆ ಜಗಳ ಮಾಡ್ಕೊಂಡ್ ಮನೆ ಬಿಟ್ಟು ಹೋಗಿದ್ದವಳು, ಇನ್ಸ್ಟಾ ಗ್ರಾಮ್ ನಲ್ಲಿ ಮದುವೆ ವಿಡಿಯೋ ಶೇರ್ ಮಾಡಿಕೊಂಡು, ಮತ್ತೊಂದು ಮದುವೆಯಾಗಿರುವುದಾಗಿ ಹೇಳಿದ್ದಾಳೆ.

ಪ್ರಕರಣ ಸಂಬಂಧ ಆಕೆಯ ಗಂಡನ ಕಡೆಯವರು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ನೇತ್ರಾವತಿ 13 ವರ್ಷಗಳ ಹಿಂದೆ ರಮೇಶ್ ಜೊತೆ ಮದುವೆಯಾಗಿದ್ಳು, ಇವರ ದಾಂಪತ್ಯಕ್ಕೆ ಒಬ್ಬ ಮಗ ಸಹ ಇದ್ದಾನೆ, ಡ್ರೈವರ್ ಕೆಲಸ ಮಾಡುವ ರಮೇಶ್ ಸಂಸಾರವನ್ನ ಚೆನ್ನಾಗಿಯೇ ನೋಡಿಕೊಂಡಿದ್ದ, ಇತ್ತಿಚೇಗೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಜಗಳ ನಂತರ ನೇತ್ರಾವತಿ ಮನೆ ಬಿಟ್ಟು ಹೋಗಿದ್ದಾಳೆ. ವಾರದ ನಂತರ ಅವಳ ಇನ್ಸ್ಟಾಗ್ರಾಮ್ ನಲ್ಲಿ ಮದುವೆಯಾಗಿರುವ ವಿಡಿಯೋ ಶೇರ್ ಮಾಡಿದ್ದಾಳೆ.

ಸಂತೋಷ ಎಂಬ ಯುವಕನನ್ನ ಮದುವೆಯಾಗಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾಳೆ, ಅಂದಹಾಗೇ, ವಾರದ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಸಂತೋಷ ಪರಿಚಯವಾಗಿದೆ, ನೇತ್ರಾವತಿ ಆತನನ್ನು ಪ್ರೀತಿ ಮಾಡಿದ್ದಾಳೆ, ವಾರದೊಳಗೆ ಆತನ ಜೊತೆ ಮದುವೆ ಆಗಿದ್ದಾಳೆ, ಇನ್ಸ್ಟಾಗ್ರಾಮ್ ನಲ್ಲಿ ಮದುವೆ ವಿಡಿಯೋ ನೋಡಿದ ಗಂಡ ರಮೇಶ್ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.

ನೇತ್ರಾವತಿಗೆ ತಂದೆಯ ಮನೆಯಿಂದ 50 ಲಕ್ಷ ಮೌಲ್ಯದ ಆಸ್ತಿ ಬಂದಿದೆ, ಈ ಆಸ್ತಿಯನ್ನ ಹೊಡೆಯಲು ಸಂತೋಷ್ ಎಂಬ ಯುವಕ ನೇತ್ರಾವತಿಯನ್ನ ಮದುವೆಯಾಗಿದ್ದಾನೆಂದು ರಮೇಶ್ ಆರೋಪ ಮಾಡಿದ್ದಾನೆ, ನನಗೆ ನನ್ನ ಮಗ ಬೇಕು, ಹೆಂಡತಿಯಿಂದ ನ್ಯಾಯ ಬೇಕೆಂದು ದೂರು ನೀಡಿದ್ದಾನೆ.

Ramesh Babu

Journalist

Recent Posts

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

2 days ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

2 days ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

2 days ago

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಮದರ್‌ ತೆರೇಸಾ - ಆಗಸ್ಟ್ 26, 1910..... ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ…

3 days ago

ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ

ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)…

3 days ago

ಮೂರು ತಾಲೂಕು ಬರದ ಪಟ್ಟಿಗೆ; ದೊಡ್ಡಬಳ್ಳಾಪುರಕ್ಕೆ ವಿನಾಯಿತಿ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

3 days ago