13 ವರ್ಷದ ದಾಂಪತ್ಯ ಜೀವನಕ್ಕೆ ಒಬ್ಬ ಮಗನಿದ್ದಾನೆ. ಇನ್ಸ್ಚಾಗ್ರಾಮ್ ನಲ್ಲಿದ್ದ ಅವಳಿಗೆ ಹೊಸ ಲವರ್ ಸಿಕ್ಕಿದ್ದು, ವಾರದಲ್ಲಿ ಪ್ರೀತಿ ಮಾಡಿದ್ಳು, ಇದೀಗ ಲವರ್ ಜೊತೆ ಮದುವೆಯಾಗಿ ಗಂಡನಿಗೆ ಶಾಕ್ ನೀಡಿದ್ದಾಳೆ.
ನೆಲಮಂಗಲ ನಗರದ ಜಕ್ಕಸಂದ್ರದ ರಾಘವೇಂದ್ರ ನಗರದ ನೇತ್ರಾವತಿ ಎಂಬಾಕೆ ಗಂಡ ಮತ್ತು ಆತನ ಮನೆಯವರಿಗೆ ಬೀಗ್ ಶಾಕ್ ಕೊಟ್ಟಿದ್ದಾಳೆ.
ಗಂಡನ ಜೊತೆ ಜಗಳ ಮಾಡ್ಕೊಂಡ್ ಮನೆ ಬಿಟ್ಟು ಹೋಗಿದ್ದವಳು, ಇನ್ಸ್ಟಾ ಗ್ರಾಮ್ ನಲ್ಲಿ ಮದುವೆ ವಿಡಿಯೋ ಶೇರ್ ಮಾಡಿಕೊಂಡು, ಮತ್ತೊಂದು ಮದುವೆಯಾಗಿರುವುದಾಗಿ ಹೇಳಿದ್ದಾಳೆ.
ಪ್ರಕರಣ ಸಂಬಂಧ ಆಕೆಯ ಗಂಡನ ಕಡೆಯವರು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ನೇತ್ರಾವತಿ 13 ವರ್ಷಗಳ ಹಿಂದೆ ರಮೇಶ್ ಜೊತೆ ಮದುವೆಯಾಗಿದ್ಳು, ಇವರ ದಾಂಪತ್ಯಕ್ಕೆ ಒಬ್ಬ ಮಗ ಸಹ ಇದ್ದಾನೆ, ಡ್ರೈವರ್ ಕೆಲಸ ಮಾಡುವ ರಮೇಶ್ ಸಂಸಾರವನ್ನ ಚೆನ್ನಾಗಿಯೇ ನೋಡಿಕೊಂಡಿದ್ದ, ಇತ್ತಿಚೇಗೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಜಗಳ ನಂತರ ನೇತ್ರಾವತಿ ಮನೆ ಬಿಟ್ಟು ಹೋಗಿದ್ದಾಳೆ. ವಾರದ ನಂತರ ಅವಳ ಇನ್ಸ್ಟಾಗ್ರಾಮ್ ನಲ್ಲಿ ಮದುವೆಯಾಗಿರುವ ವಿಡಿಯೋ ಶೇರ್ ಮಾಡಿದ್ದಾಳೆ.
ಸಂತೋಷ ಎಂಬ ಯುವಕನನ್ನ ಮದುವೆಯಾಗಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾಳೆ, ಅಂದಹಾಗೇ, ವಾರದ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಸಂತೋಷ ಪರಿಚಯವಾಗಿದೆ, ನೇತ್ರಾವತಿ ಆತನನ್ನು ಪ್ರೀತಿ ಮಾಡಿದ್ದಾಳೆ, ವಾರದೊಳಗೆ ಆತನ ಜೊತೆ ಮದುವೆ ಆಗಿದ್ದಾಳೆ, ಇನ್ಸ್ಟಾಗ್ರಾಮ್ ನಲ್ಲಿ ಮದುವೆ ವಿಡಿಯೋ ನೋಡಿದ ಗಂಡ ರಮೇಶ್ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.
ನೇತ್ರಾವತಿಗೆ ತಂದೆಯ ಮನೆಯಿಂದ 50 ಲಕ್ಷ ಮೌಲ್ಯದ ಆಸ್ತಿ ಬಂದಿದೆ, ಈ ಆಸ್ತಿಯನ್ನ ಹೊಡೆಯಲು ಸಂತೋಷ್ ಎಂಬ ಯುವಕ ನೇತ್ರಾವತಿಯನ್ನ ಮದುವೆಯಾಗಿದ್ದಾನೆಂದು ರಮೇಶ್ ಆರೋಪ ಮಾಡಿದ್ದಾನೆ, ನನಗೆ ನನ್ನ ಮಗ ಬೇಕು, ಹೆಂಡತಿಯಿಂದ ನ್ಯಾಯ ಬೇಕೆಂದು ದೂರು ನೀಡಿದ್ದಾನೆ.
ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…
ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…
ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ…
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…