12‌ ವರ್ಷದ ಬಾಲಕಿ ನೇಣಿಗೆ ಶರಣು

ಸುಮಾರು 12‌ ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ನಿನ್ನೆ(ಮೇ.29) ಬೆಳಗ್ಗೆ ಸುಮಾರು 10ಗಂಟೆ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಶ್ರೀನಗರದಲ್ಲಿ ನಡೆದಿದೆ…

ಘಟನೆ ತಡವಾಗಿ ಬೆಳಕಿಗೆ ಬಂದಿದೆ….

ಬಿಹಾರ ಮೂಲದ ಚಾಂದಿನಿ ಕುಮಾರಿ(12), ನೇಣಿಗೆ ಶರಣಾದ‌ ಬಾಲಕಿ.

ತಂದೆ ಧಮೇಂದ್ರ, ತಾಯಿ‌ ಹಾಗೂ ಒಂದು ಹೆಣ್ಣು,‌ ಒಂದು ಗಂಡು ಮಗು ಸಮೇತ ಬಿಹಾರದಿಂದ ದೊಡ್ಡಬಳ್ಳಾಪುರ ನಗರಕ್ಕೆ ಬಂದು ಶ್ರೀನಗರದಲ್ಲಿ‌ ಮನೆ ಮಾಡಿಕೊಂಡು ವಾಸವಿದ್ದರು ಎನ್ನಲಾಗಿದೆ.

ಮೃತಳ ತಂದೆ ಧಮೇಂದ್ರ ರೈಲ್ವೆ ನಿಲ್ದಾಣದಲ್ಲಿ ಸಿಮೆಂಟ್ ಇಳಿಸುವ ಕಾರ್ಮಿಕನಾಗಿ ಕೆಲಸ ಮಾಡುತ್ತಿರುತ್ತಾನೆ. ತಾಯಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸುಮಾರು 7 ವರ್ಷದ ಗಂಡು ಮಗು ಸಹ ಇದೆ.

ಚಾಂದಿನಿ ಕುಮಾರಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ತಂದೆ ತಾಯಿ ಕೆಲಸಕ್ಕೆ ಹೋದ ಕೂಡಲೇ ಮನೆ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ….

ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

ಹೆಚ್ಚಿನ‌ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…..

Leave a Reply

Your email address will not be published. Required fields are marked *