Oplus_0
1000 ರೂ. ವಿಚಾರಕ್ಕೆ ಕಿರಿಕ್ ಆಗಿ ಇಬ್ಬರಿಗೆ ಚಾಕು ಇರಿಯಲಾಗಿದೆ. ಈ ಘಟನೆ ಇಂದು ಬೆಳಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೇತನ್ ಮತ್ತು ಸುದೀಪ್ ಇರಿತಕ್ಕೊಳಗಾದವರು.
2 ವರ್ಷದ ಹಿಂದೆ ಸುದೀಪ್ ಗೆ ಯುವತಿಯೊಬ್ಬಳ ಜೊತೆ ಪ್ರೀತಿಯಾಗಿತ್ತು. ಆವಾಗ ಪ್ರಿಯತಮೆಗೆ 2 ಸಾವಿರ ರೂ. ಹಣವನ್ನು ಸಾಲದ ರೂಪದಲ್ಲಿ ಸುದೀಪ್ ಕೊಟ್ಟಿದ್ದ. ಇದಾದ ನಂತರ ಕೆಲ ತಿಂಗಳ ಹಿಂದೆ ಈ ಜೋಡಿ ನಡುವೆ ಬ್ರೇಕಪ್ ಆಗಿದೆ. ಬ್ರೇಕಪ್ ಆದ ನಂತರ ಮಾಜಿ ಪ್ರಿಯತಮೆ ಬಳಿ ಕೊಟ್ಟಿರುವ 2 ಸಾವಿರ ಹಣವನ್ನು ವಾಪಸ್ ನೀಡುವಂತೆ ಸುದೀಪ್ ಕೇಳಿದ್ದಾನೆ. 2000 ರೂ. ನಲ್ಲಿ ಸುದೀಪ್ ಗೆ 1000 ರೂ. ವಾಪಸ್ ಯುವತಿ ಕೊಟ್ಟಿದ್ದಳು. ಇನ್ನು ಉಳಿದ ಒಂದು ಸಾವಿರ ಕೊಡುವಂತೆ ಯುವತಿಗೆ ಫೋನ್ ಮಾಡಿ ಸುದೀಪ್ ಕೇಳಿದ್ದಾನೆ.
ಈ ವಿಚಾರ ಕೆಲ ಪುಂಡರಿಗೆ ಈ ಯುವತಿ ಸುದೀಪ್ ಮೇಲೆ ದೂರು ನೀಡಿದ್ದಾಳೆ. ಮೂರು ದಿನದ ಹಿಂದೆ ಜ್ಯೂಸ್ ಅಂಗಡಿ ಬಳಿ ನಾಲ್ಕೈದು ಜನ ಬಂದು ಯುವತಿ ಬಳಿ ಹಣ ಕೇಳ್ತೀಯಾ ಅಂತ ಹೇಳಿ ಅವರೇ 1000 ಸಾವಿರ ಫೋನ್ ಪೇ ಮಾಡಿ ಹೋಗಿದ್ದರು. ಇಷ್ಟಾದರು. ಮತ್ತೆ ಈ ಸುದೀಪ್ ಆ ಯುವತಿ ಬಳಿ ಹಣ ಹಾಕಿಸಿಕೊಳ್ಳುತ್ತಾನೆ.ಇದಕ್ಕೆ ಕುಪಿತಗೊಂಡ ಯುವಕರು ಅದೇ ದಿನ ಸಂಜೆ ಬಂದು ಯುವತಿ ಹಣ ಕೊಟ್ಟಿದ್ದರೂ ಮತ್ತೆ ಹಣ ಹಾಕಿಸಿಕೊಳ್ತೀಯಾ ಎಂದು ಗಲಾಟೆ ಮಾಡಿ ಸುದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸುದೀಪ್ ಗೆ ಹಲ್ಲೆ ಮಾಡುತ್ತಿದ್ದ ವೇಳೆ ಬಿಡಿಸಲು ಬಂದ ಚೇತನ್ ಗೂ ಚಾಕು ಇರಿಯಲಾಗಿದೆ. ಚೇತನ್ ನ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಸುದೀಪ್ ಬೆನ್ನಿಗೆ ಇರಿದು ಯುವಕರು ಎಸ್ಕೇಪ್ ಆಗಿದ್ದಾರೆ. ಬಿಡಿಸಲು ಬಂದವನು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…
ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್, ಸಿಹಿ,…
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…
ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…