Oplus_0
1000 ರೂ. ವಿಚಾರಕ್ಕೆ ಕಿರಿಕ್ ಆಗಿ ಇಬ್ಬರಿಗೆ ಚಾಕು ಇರಿಯಲಾಗಿದೆ. ಈ ಘಟನೆ ಇಂದು ಬೆಳಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೇತನ್ ಮತ್ತು ಸುದೀಪ್ ಇರಿತಕ್ಕೊಳಗಾದವರು.
2 ವರ್ಷದ ಹಿಂದೆ ಸುದೀಪ್ ಗೆ ಯುವತಿಯೊಬ್ಬಳ ಜೊತೆ ಪ್ರೀತಿಯಾಗಿತ್ತು. ಆವಾಗ ಪ್ರಿಯತಮೆಗೆ 2 ಸಾವಿರ ರೂ. ಹಣವನ್ನು ಸಾಲದ ರೂಪದಲ್ಲಿ ಸುದೀಪ್ ಕೊಟ್ಟಿದ್ದ. ಇದಾದ ನಂತರ ಕೆಲ ತಿಂಗಳ ಹಿಂದೆ ಈ ಜೋಡಿ ನಡುವೆ ಬ್ರೇಕಪ್ ಆಗಿದೆ. ಬ್ರೇಕಪ್ ಆದ ನಂತರ ಮಾಜಿ ಪ್ರಿಯತಮೆ ಬಳಿ ಕೊಟ್ಟಿರುವ 2 ಸಾವಿರ ಹಣವನ್ನು ವಾಪಸ್ ನೀಡುವಂತೆ ಸುದೀಪ್ ಕೇಳಿದ್ದಾನೆ. 2000 ರೂ. ನಲ್ಲಿ ಸುದೀಪ್ ಗೆ 1000 ರೂ. ವಾಪಸ್ ಯುವತಿ ಕೊಟ್ಟಿದ್ದಳು. ಇನ್ನು ಉಳಿದ ಒಂದು ಸಾವಿರ ಕೊಡುವಂತೆ ಯುವತಿಗೆ ಫೋನ್ ಮಾಡಿ ಸುದೀಪ್ ಕೇಳಿದ್ದಾನೆ.
ಈ ವಿಚಾರ ಕೆಲ ಪುಂಡರಿಗೆ ಈ ಯುವತಿ ಸುದೀಪ್ ಮೇಲೆ ದೂರು ನೀಡಿದ್ದಾಳೆ. ಮೂರು ದಿನದ ಹಿಂದೆ ಜ್ಯೂಸ್ ಅಂಗಡಿ ಬಳಿ ನಾಲ್ಕೈದು ಜನ ಬಂದು ಯುವತಿ ಬಳಿ ಹಣ ಕೇಳ್ತೀಯಾ ಅಂತ ಹೇಳಿ ಅವರೇ 1000 ಸಾವಿರ ಫೋನ್ ಪೇ ಮಾಡಿ ಹೋಗಿದ್ದರು. ಇಷ್ಟಾದರು. ಮತ್ತೆ ಈ ಸುದೀಪ್ ಆ ಯುವತಿ ಬಳಿ ಹಣ ಹಾಕಿಸಿಕೊಳ್ಳುತ್ತಾನೆ.ಇದಕ್ಕೆ ಕುಪಿತಗೊಂಡ ಯುವಕರು ಅದೇ ದಿನ ಸಂಜೆ ಬಂದು ಯುವತಿ ಹಣ ಕೊಟ್ಟಿದ್ದರೂ ಮತ್ತೆ ಹಣ ಹಾಕಿಸಿಕೊಳ್ತೀಯಾ ಎಂದು ಗಲಾಟೆ ಮಾಡಿ ಸುದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸುದೀಪ್ ಗೆ ಹಲ್ಲೆ ಮಾಡುತ್ತಿದ್ದ ವೇಳೆ ಬಿಡಿಸಲು ಬಂದ ಚೇತನ್ ಗೂ ಚಾಕು ಇರಿಯಲಾಗಿದೆ. ಚೇತನ್ ನ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಸುದೀಪ್ ಬೆನ್ನಿಗೆ ಇರಿದು ಯುವಕರು ಎಸ್ಕೇಪ್ ಆಗಿದ್ದಾರೆ. ಬಿಡಿಸಲು ಬಂದವನು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…
ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…
ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…
ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ…