Oplus_0
1000 ರೂ. ವಿಚಾರಕ್ಕೆ ಕಿರಿಕ್ ಆಗಿ ಇಬ್ಬರಿಗೆ ಚಾಕು ಇರಿಯಲಾಗಿದೆ. ಈ ಘಟನೆ ಇಂದು ಬೆಳಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೇತನ್ ಮತ್ತು ಸುದೀಪ್ ಇರಿತಕ್ಕೊಳಗಾದವರು.
2 ವರ್ಷದ ಹಿಂದೆ ಸುದೀಪ್ ಗೆ ಯುವತಿಯೊಬ್ಬಳ ಜೊತೆ ಪ್ರೀತಿಯಾಗಿತ್ತು. ಆವಾಗ ಪ್ರಿಯತಮೆಗೆ 2 ಸಾವಿರ ರೂ. ಹಣವನ್ನು ಸಾಲದ ರೂಪದಲ್ಲಿ ಸುದೀಪ್ ಕೊಟ್ಟಿದ್ದ. ಇದಾದ ನಂತರ ಕೆಲ ತಿಂಗಳ ಹಿಂದೆ ಈ ಜೋಡಿ ನಡುವೆ ಬ್ರೇಕಪ್ ಆಗಿದೆ. ಬ್ರೇಕಪ್ ಆದ ನಂತರ ಮಾಜಿ ಪ್ರಿಯತಮೆ ಬಳಿ ಕೊಟ್ಟಿರುವ 2 ಸಾವಿರ ಹಣವನ್ನು ವಾಪಸ್ ನೀಡುವಂತೆ ಸುದೀಪ್ ಕೇಳಿದ್ದಾನೆ. 2000 ರೂ. ನಲ್ಲಿ ಸುದೀಪ್ ಗೆ 1000 ರೂ. ವಾಪಸ್ ಯುವತಿ ಕೊಟ್ಟಿದ್ದಳು. ಇನ್ನು ಉಳಿದ ಒಂದು ಸಾವಿರ ಕೊಡುವಂತೆ ಯುವತಿಗೆ ಫೋನ್ ಮಾಡಿ ಸುದೀಪ್ ಕೇಳಿದ್ದಾನೆ.
ಈ ವಿಚಾರ ಕೆಲ ಪುಂಡರಿಗೆ ಈ ಯುವತಿ ಸುದೀಪ್ ಮೇಲೆ ದೂರು ನೀಡಿದ್ದಾಳೆ. ಮೂರು ದಿನದ ಹಿಂದೆ ಜ್ಯೂಸ್ ಅಂಗಡಿ ಬಳಿ ನಾಲ್ಕೈದು ಜನ ಬಂದು ಯುವತಿ ಬಳಿ ಹಣ ಕೇಳ್ತೀಯಾ ಅಂತ ಹೇಳಿ ಅವರೇ 1000 ಸಾವಿರ ಫೋನ್ ಪೇ ಮಾಡಿ ಹೋಗಿದ್ದರು. ಇಷ್ಟಾದರು. ಮತ್ತೆ ಈ ಸುದೀಪ್ ಆ ಯುವತಿ ಬಳಿ ಹಣ ಹಾಕಿಸಿಕೊಳ್ಳುತ್ತಾನೆ.ಇದಕ್ಕೆ ಕುಪಿತಗೊಂಡ ಯುವಕರು ಅದೇ ದಿನ ಸಂಜೆ ಬಂದು ಯುವತಿ ಹಣ ಕೊಟ್ಟಿದ್ದರೂ ಮತ್ತೆ ಹಣ ಹಾಕಿಸಿಕೊಳ್ತೀಯಾ ಎಂದು ಗಲಾಟೆ ಮಾಡಿ ಸುದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸುದೀಪ್ ಗೆ ಹಲ್ಲೆ ಮಾಡುತ್ತಿದ್ದ ವೇಳೆ ಬಿಡಿಸಲು ಬಂದ ಚೇತನ್ ಗೂ ಚಾಕು ಇರಿಯಲಾಗಿದೆ. ಚೇತನ್ ನ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಸುದೀಪ್ ಬೆನ್ನಿಗೆ ಇರಿದು ಯುವಕರು ಎಸ್ಕೇಪ್ ಆಗಿದ್ದಾರೆ. ಬಿಡಿಸಲು ಬಂದವನು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…
ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…