ಹೆದ್ದಾರಿ ಡಾಬಾಗಳ ಬಳಿ ಖದೀಮರಿಂದ ದರೋಡೆ ಸ್ಕೇಚ್: ಸ್ವಲ್ಪ ಯಾಮಾರಿದ್ರೆ ಚಾಕು ತೋರಿಸಿ, ಬೆದರಿಸಿ ಹಣ, ಚಿನ್ನಾಭರಣ, ಮೊಬೈಲ್ ಎಗರಿಸುವ ದರೋಡೆಕೋರರು….ಇರಲಿ ಎಚ್ಚರಿಕೆ….

ಹೆದ್ದಾರಿಗಳಲ್ಲಿ ಹೋಗುವ ವಾಹನ ಸವಾರರು ಮಧ್ಯಾಹ್ನ ಮತ್ತು ರಾತ್ರಿ ವೇಳೆ ಡಾಬಾಗಳ ಬಳಿ ವಾಹನ ನಿಲ್ಲಿಸಿ ಊಟ ಮಾಡಿ ಹೋಗುವುದು ಸಹಜ. ಆದರೆ, ಇದನ್ನೆ ತಮ್ಮ ಬಂಡವಾಳ ಮಾಡಿಕೊಂಡ ಖದೀಮರು ಒಂಟಿ ಜನರನ್ನ ಬೆದರಿಸಿ ಶೋಕಿ ಮಾಡೋದನ್ನ ಕರಗತ ಮಾಡಿಕೊಂಡಿದ್ದು ಇದೀಗ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.

ದಡೋತಿ ದೇಹ ಕೈ ಕಾಲುಗಳೆಲ್ಲ ದೇವರ ಚೆನ್ನಾಗೆ ಕೊಟ್ಟಿದ್ದಾನೆ. ದುಡಿದು ತಿನ್ನೋಕ್ಕೆ ತೋಳಲ್ಲಿ ಶಕ್ತಿ ಸಹ ಇದ್ದರು, ಮೈ ಬಗ್ಗಿಸಿ ಕೆಲಸ ಮಾಡೋದನ್ನ ಬಿಟ್ಟು ಅಡ್ಡದಾರಿಯಲ್ಲಿ ಜನರ ಸುಲಿಗೆ ಮಾಡೋಕ್ಕೆ ಶುರು ಮಾಡಿರುವ ಖದೀಮರು. ಜೊತೆಗೆ ಒಂದಷ್ಟು ಕಡೆ ಸುಲಿಗೆ ಸ್ಕೇಚ್ ಸಹ ಸಕ್ಸಸ್ ಆಗಿದ್ದು, ಇದನ್ನೆ ಉದ್ಯೋಗ ಮಾಡಿಕೊಳ್ಳಲು ಹೋಗಿ ಇದೀಗ ಪೊಲೀಸರ ಮುಂದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಇಂಗು ತಿಂದ್ದ ಮಂಗಗಳಾಂತಾಗಿದ್ದಾರೆ.

ಡಾಬಾ ಬಳಿ ಸ್ಕೇಚ್ ಹಾಕಿ ಸುಲಿಗೆ ಮಾಡುತ್ತಿದ್ದವರು ಅಂದರ್….

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಮುಂದೆ ಕೈ ಕಟ್ಟಿ ಕುಳಿತಿರುವ ಹೆಸರು ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ಹಾದು ಹೋಗಿರುವ ದಾಬಸ್ ಪೇಟೆಯಿಂದ ಹೊಸಕೊಟೆವರೆಗಿನ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಬೀಡು ಬಿಡ್ತಿದ್ದ ಈ ಮೂವರು ಖದೀಮರು ಡಾಬಾಗಳ ಬಳಿ ಸ್ಕೇಚ್ ಹಾಕ್ತಿದ್ರು. ಅಲ್ಲದೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಡಾಬಾಗಳಿಗೆ ಬರುವ ಒಂಟಿ ಜನರನ್ನೆ ಟಾರ್ಗೆಟ್ ಮಾಡಿಕೊಳ್ತಿದ್ದ ಖದೀಮರು ವಾಹನ ಸವಾರರು ಊಟ ಮುಗಿಸಿ ಕಾರು ಹತ್ತುತ್ತಿದ್ದಂತೆ ಬಂದು ಅಟ್ಯಾಕ್ ಮಾಡ್ತಿದ್ರು. ಇದೇ ರೀತಿ ಕಳೆದ ಎರಡು ತಿಂಗಳಿಂದೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನದೇವಿ ಅಗ್ರಹಾರದ ಮೂನ್ ಲೈಟ್ ಡಾಬಾದಲ್ಲಿ ಊಟಕ್ಕೆ ಬಂದಿದ್ದವರನ್ನ ಬೆದರಿಸಿ ಸುಲಿಗೆ ಮಾಡಿದ್ದು, ಮೊಬೈಲ್ ನಗದು ಮತ್ತು ಫೋನ್ ಪೇ ನಲ್ಲಿದ್ದ ಹಣವನ್ನೆಲ್ಲ ಕಿತ್ತುಕೊಂಡು ಎಸ್ಕೇಪ್ ಆಗಿದ್ರು…

ಕಳೆದ ಮೂರು ನಾಲ್ಕು ತಿಂಗಳುಗಳಿಂದ ದೊಡ್ಡಬಳ್ಳಾಪುರ-ದೇವನಹಳ್ಳಿ ಹೆದ್ದಾರಿಯಲ್ಲಿ ಇದೇ ರೀತಿ ಹಲವು ದರೋಡೆ ಪ್ರಕರಣಗಳು ನಡೆದಿದ್ದ ಕಾರಣ ಅಲರ್ಟ್ ಆಗಿದ್ದ ದೊಡ್ಡಬೆಳವಂಗಲ ಪೊಲೀಸರು ಇದೀಗ ಒಂಟಿ ಜನರನ್ನ ಸುಲಿಗೆ ಮಾಡ್ತಿದ್ದ ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್ ಅನ್ನೊ ಮೂವರು ಖದೀಮರನ್ನ ಲಾಕ್ ಮಾಡಿದ್ದಾರೆ.

ಬಂಧಿತರಿಂದ ಒಂಟಿ ಜನರ ಬಳಿ ಸುಲಿಗೆ ಮಾಡಿದ್ದ 2 ದ್ವಿಚಕ್ರ ವಾಹನ,  2 ಐ ಫೋನ್, ಬೆಲೆ ಬಾಳುವ ವಾಚ್, 80 ಸಾವಿರ ನಗದು ಸೇರಿದಂತೆ ಹಲವು ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬಂಧಿತ ಬಾಲಕೃಷ್ಣ ವಿರುದ್ದ ರೌಡಿ ಶೀಟರ್ ತೆರೆದಿದ್ದು, ಬಾಲೃಕಷ್ಣ ಜೊತೆಗೆ ಅನಿಲ್ ಕುಮಾರ್ ಮೇಲೆ ಮಾದನಾಯಕನಹಳ್ಳಿ, ಮಂಡ್ಯ, ಪೀಣ್ಯ ಬಾಗಲಗುಂಟೆ, ಯಲಹಂಕ, ಕೆಂಗೇರಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಗಳಲ್ಲಿ ಹಲವು ಕೇಸ್ ಗಳು ದಾಖಲಾಗಿವೆ.

ಇದೀಗ ದೊಡ್ಡಬೆಳವಂಗಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ  ಮತ್ತು ಸಿಬ್ಬಂದಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಜೈಲಿಗೆ ಹೋಗಿ ಬಂದಿದ್ದರೂ ಒಳ್ಳೆ ಬುದ್ದಿ ಕಲಿಯದೆ ಜೈಲಿನಲ್ಲಿ ಸಿಕ್ಕ ಸ್ನೇಹಿತರ ಜೊತೆಗೂಡಿ ಮತ್ತಷ್ಟು ಅಪರಾದಗಳನ್ನ ಮಾಡುತ್ತಿದ್ದವರು ಇದೀಗ ಮತ್ತೆ ಮುದ್ದೆ ಮುರಿಯಲು ಮುಂದಾಗಿದ್ದಾರೆ.

Ramesh Babu

Journalist

Recent Posts

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

8 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

9 hours ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

10 hours ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

11 hours ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

18 hours ago

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

2 days ago