ಹೆದ್ದಾರಿ ಡಾಬಾಗಳ ಬಳಿ ಖದೀಮರಿಂದ ದರೋಡೆ ಸ್ಕೇಚ್: ಸ್ವಲ್ಪ ಯಾಮಾರಿದ್ರೆ ಚಾಕು ತೋರಿಸಿ, ಬೆದರಿಸಿ ಹಣ, ಚಿನ್ನಾಭರಣ, ಮೊಬೈಲ್ ಎಗರಿಸುವ ದರೋಡೆಕೋರರು….ಇರಲಿ ಎಚ್ಚರಿಕೆ….

ಹೆದ್ದಾರಿಗಳಲ್ಲಿ ಹೋಗುವ ವಾಹನ ಸವಾರರು ಮಧ್ಯಾಹ್ನ ಮತ್ತು ರಾತ್ರಿ ವೇಳೆ ಡಾಬಾಗಳ ಬಳಿ ವಾಹನ ನಿಲ್ಲಿಸಿ ಊಟ ಮಾಡಿ ಹೋಗುವುದು ಸಹಜ. ಆದರೆ, ಇದನ್ನೆ ತಮ್ಮ ಬಂಡವಾಳ ಮಾಡಿಕೊಂಡ ಖದೀಮರು ಒಂಟಿ ಜನರನ್ನ ಬೆದರಿಸಿ ಶೋಕಿ ಮಾಡೋದನ್ನ ಕರಗತ ಮಾಡಿಕೊಂಡಿದ್ದು ಇದೀಗ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.

ದಡೋತಿ ದೇಹ ಕೈ ಕಾಲುಗಳೆಲ್ಲ ದೇವರ ಚೆನ್ನಾಗೆ ಕೊಟ್ಟಿದ್ದಾನೆ. ದುಡಿದು ತಿನ್ನೋಕ್ಕೆ ತೋಳಲ್ಲಿ ಶಕ್ತಿ ಸಹ ಇದ್ದರು, ಮೈ ಬಗ್ಗಿಸಿ ಕೆಲಸ ಮಾಡೋದನ್ನ ಬಿಟ್ಟು ಅಡ್ಡದಾರಿಯಲ್ಲಿ ಜನರ ಸುಲಿಗೆ ಮಾಡೋಕ್ಕೆ ಶುರು ಮಾಡಿರುವ ಖದೀಮರು. ಜೊತೆಗೆ ಒಂದಷ್ಟು ಕಡೆ ಸುಲಿಗೆ ಸ್ಕೇಚ್ ಸಹ ಸಕ್ಸಸ್ ಆಗಿದ್ದು, ಇದನ್ನೆ ಉದ್ಯೋಗ ಮಾಡಿಕೊಳ್ಳಲು ಹೋಗಿ ಇದೀಗ ಪೊಲೀಸರ ಮುಂದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಇಂಗು ತಿಂದ್ದ ಮಂಗಗಳಾಂತಾಗಿದ್ದಾರೆ.

ಡಾಬಾ ಬಳಿ ಸ್ಕೇಚ್ ಹಾಕಿ ಸುಲಿಗೆ ಮಾಡುತ್ತಿದ್ದವರು ಅಂದರ್….

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಮುಂದೆ ಕೈ ಕಟ್ಟಿ ಕುಳಿತಿರುವ ಹೆಸರು ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ಹಾದು ಹೋಗಿರುವ ದಾಬಸ್ ಪೇಟೆಯಿಂದ ಹೊಸಕೊಟೆವರೆಗಿನ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಬೀಡು ಬಿಡ್ತಿದ್ದ ಈ ಮೂವರು ಖದೀಮರು ಡಾಬಾಗಳ ಬಳಿ ಸ್ಕೇಚ್ ಹಾಕ್ತಿದ್ರು. ಅಲ್ಲದೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಡಾಬಾಗಳಿಗೆ ಬರುವ ಒಂಟಿ ಜನರನ್ನೆ ಟಾರ್ಗೆಟ್ ಮಾಡಿಕೊಳ್ತಿದ್ದ ಖದೀಮರು ವಾಹನ ಸವಾರರು ಊಟ ಮುಗಿಸಿ ಕಾರು ಹತ್ತುತ್ತಿದ್ದಂತೆ ಬಂದು ಅಟ್ಯಾಕ್ ಮಾಡ್ತಿದ್ರು. ಇದೇ ರೀತಿ ಕಳೆದ ಎರಡು ತಿಂಗಳಿಂದೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನದೇವಿ ಅಗ್ರಹಾರದ ಮೂನ್ ಲೈಟ್ ಡಾಬಾದಲ್ಲಿ ಊಟಕ್ಕೆ ಬಂದಿದ್ದವರನ್ನ ಬೆದರಿಸಿ ಸುಲಿಗೆ ಮಾಡಿದ್ದು, ಮೊಬೈಲ್ ನಗದು ಮತ್ತು ಫೋನ್ ಪೇ ನಲ್ಲಿದ್ದ ಹಣವನ್ನೆಲ್ಲ ಕಿತ್ತುಕೊಂಡು ಎಸ್ಕೇಪ್ ಆಗಿದ್ರು…

ಕಳೆದ ಮೂರು ನಾಲ್ಕು ತಿಂಗಳುಗಳಿಂದ ದೊಡ್ಡಬಳ್ಳಾಪುರ-ದೇವನಹಳ್ಳಿ ಹೆದ್ದಾರಿಯಲ್ಲಿ ಇದೇ ರೀತಿ ಹಲವು ದರೋಡೆ ಪ್ರಕರಣಗಳು ನಡೆದಿದ್ದ ಕಾರಣ ಅಲರ್ಟ್ ಆಗಿದ್ದ ದೊಡ್ಡಬೆಳವಂಗಲ ಪೊಲೀಸರು ಇದೀಗ ಒಂಟಿ ಜನರನ್ನ ಸುಲಿಗೆ ಮಾಡ್ತಿದ್ದ ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್ ಅನ್ನೊ ಮೂವರು ಖದೀಮರನ್ನ ಲಾಕ್ ಮಾಡಿದ್ದಾರೆ.

ಬಂಧಿತರಿಂದ ಒಂಟಿ ಜನರ ಬಳಿ ಸುಲಿಗೆ ಮಾಡಿದ್ದ 2 ದ್ವಿಚಕ್ರ ವಾಹನ,  2 ಐ ಫೋನ್, ಬೆಲೆ ಬಾಳುವ ವಾಚ್, 80 ಸಾವಿರ ನಗದು ಸೇರಿದಂತೆ ಹಲವು ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬಂಧಿತ ಬಾಲಕೃಷ್ಣ ವಿರುದ್ದ ರೌಡಿ ಶೀಟರ್ ತೆರೆದಿದ್ದು, ಬಾಲೃಕಷ್ಣ ಜೊತೆಗೆ ಅನಿಲ್ ಕುಮಾರ್ ಮೇಲೆ ಮಾದನಾಯಕನಹಳ್ಳಿ, ಮಂಡ್ಯ, ಪೀಣ್ಯ ಬಾಗಲಗುಂಟೆ, ಯಲಹಂಕ, ಕೆಂಗೇರಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಗಳಲ್ಲಿ ಹಲವು ಕೇಸ್ ಗಳು ದಾಖಲಾಗಿವೆ.

ಇದೀಗ ದೊಡ್ಡಬೆಳವಂಗಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ  ಮತ್ತು ಸಿಬ್ಬಂದಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಜೈಲಿಗೆ ಹೋಗಿ ಬಂದಿದ್ದರೂ ಒಳ್ಳೆ ಬುದ್ದಿ ಕಲಿಯದೆ ಜೈಲಿನಲ್ಲಿ ಸಿಕ್ಕ ಸ್ನೇಹಿತರ ಜೊತೆಗೂಡಿ ಮತ್ತಷ್ಟು ಅಪರಾದಗಳನ್ನ ಮಾಡುತ್ತಿದ್ದವರು ಇದೀಗ ಮತ್ತೆ ಮುದ್ದೆ ಮುರಿಯಲು ಮುಂದಾಗಿದ್ದಾರೆ.

Ramesh Babu

Journalist

Recent Posts

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

3 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

9 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

23 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

24 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

1 day ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

1 day ago