ಹೆದ್ದಾರಿ ಡಾಬಾಗಳ ಬಳಿ ಖದೀಮರಿಂದ ದರೋಡೆ ಸ್ಕೇಚ್: ಸ್ವಲ್ಪ ಯಾಮಾರಿದ್ರೆ ಚಾಕು ತೋರಿಸಿ, ಬೆದರಿಸಿ ಹಣ, ಚಿನ್ನಾಭರಣ, ಮೊಬೈಲ್ ಎಗರಿಸುವ ದರೋಡೆಕೋರರು….ಇರಲಿ ಎಚ್ಚರಿಕೆ….

ಹೆದ್ದಾರಿಗಳಲ್ಲಿ ಹೋಗುವ ವಾಹನ ಸವಾರರು ಮಧ್ಯಾಹ್ನ ಮತ್ತು ರಾತ್ರಿ ವೇಳೆ ಡಾಬಾಗಳ ಬಳಿ ವಾಹನ ನಿಲ್ಲಿಸಿ ಊಟ ಮಾಡಿ ಹೋಗುವುದು ಸಹಜ. ಆದರೆ, ಇದನ್ನೆ ತಮ್ಮ ಬಂಡವಾಳ ಮಾಡಿಕೊಂಡ ಖದೀಮರು ಒಂಟಿ ಜನರನ್ನ ಬೆದರಿಸಿ ಶೋಕಿ ಮಾಡೋದನ್ನ ಕರಗತ ಮಾಡಿಕೊಂಡಿದ್ದು ಇದೀಗ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.

ದಡೋತಿ ದೇಹ ಕೈ ಕಾಲುಗಳೆಲ್ಲ ದೇವರ ಚೆನ್ನಾಗೆ ಕೊಟ್ಟಿದ್ದಾನೆ. ದುಡಿದು ತಿನ್ನೋಕ್ಕೆ ತೋಳಲ್ಲಿ ಶಕ್ತಿ ಸಹ ಇದ್ದರು, ಮೈ ಬಗ್ಗಿಸಿ ಕೆಲಸ ಮಾಡೋದನ್ನ ಬಿಟ್ಟು ಅಡ್ಡದಾರಿಯಲ್ಲಿ ಜನರ ಸುಲಿಗೆ ಮಾಡೋಕ್ಕೆ ಶುರು ಮಾಡಿರುವ ಖದೀಮರು. ಜೊತೆಗೆ ಒಂದಷ್ಟು ಕಡೆ ಸುಲಿಗೆ ಸ್ಕೇಚ್ ಸಹ ಸಕ್ಸಸ್ ಆಗಿದ್ದು, ಇದನ್ನೆ ಉದ್ಯೋಗ ಮಾಡಿಕೊಳ್ಳಲು ಹೋಗಿ ಇದೀಗ ಪೊಲೀಸರ ಮುಂದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಇಂಗು ತಿಂದ್ದ ಮಂಗಗಳಾಂತಾಗಿದ್ದಾರೆ.

ಡಾಬಾ ಬಳಿ ಸ್ಕೇಚ್ ಹಾಕಿ ಸುಲಿಗೆ ಮಾಡುತ್ತಿದ್ದವರು ಅಂದರ್….

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪೊಲೀಸರ ಮುಂದೆ ಕೈ ಕಟ್ಟಿ ಕುಳಿತಿರುವ ಹೆಸರು ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ಹಾದು ಹೋಗಿರುವ ದಾಬಸ್ ಪೇಟೆಯಿಂದ ಹೊಸಕೊಟೆವರೆಗಿನ ರಾಷ್ಟ್ರಿಯ ಹೆದ್ದಾರಿ 648 ರಲ್ಲಿ ಬೀಡು ಬಿಡ್ತಿದ್ದ ಈ ಮೂವರು ಖದೀಮರು ಡಾಬಾಗಳ ಬಳಿ ಸ್ಕೇಚ್ ಹಾಕ್ತಿದ್ರು. ಅಲ್ಲದೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಡಾಬಾಗಳಿಗೆ ಬರುವ ಒಂಟಿ ಜನರನ್ನೆ ಟಾರ್ಗೆಟ್ ಮಾಡಿಕೊಳ್ತಿದ್ದ ಖದೀಮರು ವಾಹನ ಸವಾರರು ಊಟ ಮುಗಿಸಿ ಕಾರು ಹತ್ತುತ್ತಿದ್ದಂತೆ ಬಂದು ಅಟ್ಯಾಕ್ ಮಾಡ್ತಿದ್ರು. ಇದೇ ರೀತಿ ಕಳೆದ ಎರಡು ತಿಂಗಳಿಂದೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನದೇವಿ ಅಗ್ರಹಾರದ ಮೂನ್ ಲೈಟ್ ಡಾಬಾದಲ್ಲಿ ಊಟಕ್ಕೆ ಬಂದಿದ್ದವರನ್ನ ಬೆದರಿಸಿ ಸುಲಿಗೆ ಮಾಡಿದ್ದು, ಮೊಬೈಲ್ ನಗದು ಮತ್ತು ಫೋನ್ ಪೇ ನಲ್ಲಿದ್ದ ಹಣವನ್ನೆಲ್ಲ ಕಿತ್ತುಕೊಂಡು ಎಸ್ಕೇಪ್ ಆಗಿದ್ರು…

ಕಳೆದ ಮೂರು ನಾಲ್ಕು ತಿಂಗಳುಗಳಿಂದ ದೊಡ್ಡಬಳ್ಳಾಪುರ-ದೇವನಹಳ್ಳಿ ಹೆದ್ದಾರಿಯಲ್ಲಿ ಇದೇ ರೀತಿ ಹಲವು ದರೋಡೆ ಪ್ರಕರಣಗಳು ನಡೆದಿದ್ದ ಕಾರಣ ಅಲರ್ಟ್ ಆಗಿದ್ದ ದೊಡ್ಡಬೆಳವಂಗಲ ಪೊಲೀಸರು ಇದೀಗ ಒಂಟಿ ಜನರನ್ನ ಸುಲಿಗೆ ಮಾಡ್ತಿದ್ದ ಬಾಲಕೃಷ್ಣ, ಹರ್ಷವರ್ಧನ್ ಮತ್ತು ಅನಿಲ್ ಕುಮಾರ್ ಅನ್ನೊ ಮೂವರು ಖದೀಮರನ್ನ ಲಾಕ್ ಮಾಡಿದ್ದಾರೆ.

ಬಂಧಿತರಿಂದ ಒಂಟಿ ಜನರ ಬಳಿ ಸುಲಿಗೆ ಮಾಡಿದ್ದ 2 ದ್ವಿಚಕ್ರ ವಾಹನ,  2 ಐ ಫೋನ್, ಬೆಲೆ ಬಾಳುವ ವಾಚ್, 80 ಸಾವಿರ ನಗದು ಸೇರಿದಂತೆ ಹಲವು ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬಂಧಿತ ಬಾಲಕೃಷ್ಣ ವಿರುದ್ದ ರೌಡಿ ಶೀಟರ್ ತೆರೆದಿದ್ದು, ಬಾಲೃಕಷ್ಣ ಜೊತೆಗೆ ಅನಿಲ್ ಕುಮಾರ್ ಮೇಲೆ ಮಾದನಾಯಕನಹಳ್ಳಿ, ಮಂಡ್ಯ, ಪೀಣ್ಯ ಬಾಗಲಗುಂಟೆ, ಯಲಹಂಕ, ಕೆಂಗೇರಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಗಳಲ್ಲಿ ಹಲವು ಕೇಸ್ ಗಳು ದಾಖಲಾಗಿವೆ.

ಇದೀಗ ದೊಡ್ಡಬೆಳವಂಗಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ  ಮತ್ತು ಸಿಬ್ಬಂದಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಜೈಲಿಗೆ ಹೋಗಿ ಬಂದಿದ್ದರೂ ಒಳ್ಳೆ ಬುದ್ದಿ ಕಲಿಯದೆ ಜೈಲಿನಲ್ಲಿ ಸಿಕ್ಕ ಸ್ನೇಹಿತರ ಜೊತೆಗೂಡಿ ಮತ್ತಷ್ಟು ಅಪರಾದಗಳನ್ನ ಮಾಡುತ್ತಿದ್ದವರು ಇದೀಗ ಮತ್ತೆ ಮುದ್ದೆ ಮುರಿಯಲು ಮುಂದಾಗಿದ್ದಾರೆ.

Ramesh Babu

Journalist

Recent Posts

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

6 hours ago

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು- ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ..…

8 hours ago

ದಲಿತರ ಕಾಲೋನಿಗಿಲ್ಲ ಚರಂಡಿ ಭಾಗ್ಯ: ರಸ್ತೆ‌ ಮೇಲೆಯೇ ಹರಿಯುವ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ‌ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…

11 hours ago

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪ.ಪಂ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರಿಂದ ಹಲ್ಲೆ: ದೂರು ದಾಖಲು

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ‌ಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…

12 hours ago

ಬೆಂ.ಗ್ರಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಆಗಿ ಎ.ವಿ ಲಕ್ಷ್ಮಿನಾರಾಯಣ ನೇಮಕ

ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…

14 hours ago

ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ: ದಾಳಿ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ

ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ  14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…

15 hours ago