ಹೀಲ್ ಗೂ – ಹೀಲಿನ್ ಗೂ ವ್ಯತ್ಯಾಸ ಗೊತ್ತಾಗದೆ ನನ್ನ ರೋಗಿಗಳು ಪರದಾಟ: ನನ್ನ ರೋಗಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಆ ಪೋಸ್ಟ್ ಹಾಕಿದ್ದೆ – ಡಾ. ಅರ್ಜುನ್ ಎಂ ಬಿ ಸ್ಪಷ್ಟನೆ

ದೊಡ್ಡಬಳ್ಳಾಪುರ : ನನ್ನ ಒಡೆತನದಲ್ಲಿರುವ ಹೀಲ್ ಸ್ಪೆಷಾಲಿಟಿ ಕ್ಲಿನಿಕ್ ಸುಮಾರು 4 ವರ್ಷದಿಂದ ದೊಡ್ಡಬಳ್ಳಾಪುರದಲ್ಲಿ ಸೇವೆ ಸಲ್ಲಿಸುತ್ತಿದೆ. ನನ್ನ ಹೀಲ್ ಆಸ್ಪತ್ರೆಗೂ ಹಾಗೂ ಹೀಲಿನ್ ಹಾಸ್ಪಿಟಲ್ ಗೂ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿ ಇರುವುದರಿಂದ ನನ್ನ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ನಾನು ನನ್ನ ವಾಟ್ಸಾಪ್ ಗ್ರೂಪಿನಲ್ಲಿ ಒಂದು ಪೋಸ್ಟನ್ನು ಹಾಕಿದ್ದೇನೆ ಅಷ್ಟೇ. ಇದ್ದರಿಂದ ನನ್ನ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಗಳ ಆಗಬಾರದು ಎಂಬ ಉದ್ದೇಶದಿಂದ ಹಾಗೂ ನನ್ನ ಹಾಸ್ಪಿಟಲ್ ಹಾಗೂ ನನ್ನ ಹೆಸರು ದುರ್ಬಳಕೆ ಆಗಬಾರದೆಂಬ ಕಾರಣದಿಂದ ನಾನು ಆ ರೀತಿ ಪೋಸ್ಟ್ ಹಾಕಿದ್ದೇನೆ ಎಂದು ಹೀಲ್ ಸ್ಪೆಷಾಲಿಟಿ ಕ್ಲಿನಿಕ್ ನ ವೈದ್ಯರಾದ ಡಾಕ್ಟರ್ ಅರ್ಜುನ್ ಅವರು ಹೇಳಿದರು.

ದೊಡ್ಡಬಳ್ಳಾಪುರದ ಮಗನಾಗಿ ದೊಡ್ಡಬಳ್ಳಾಪುರದ ಜನತೆಗೆ ವೈದ್ಯಕೀಯ ಸೇವೆ ಸಲ್ಲಿಸಲು ಬಂದಿದ್ದೇನೆ. ನಾನು ಹುಟ್ಟಿ ಬೆಳೆದು ಓದಿದ್ದೆಲ್ಲ ಇದೇ ದೊಡ್ಡಬಳ್ಳಾಪುರದಲ್ಲಿ, ನನಗೆ ಬೇರೆ ದೇಶಗಳಿಂದ ಸೇವೆ ಸಲ್ಲಿಸಲು ಆಹ್ವಾನಗಳು ಬಂದಿದ್ದರು ಸಹ ನನ್ನ ಹುಟ್ಟೂರು ದೊಡ್ಡಬಳ್ಳಾಪುರದ ಜನತೆಗೆ ನನ್ನ ಸೇವೆ ಇರಲಿ ಎಂದು ಸುಮಾರು ನಾಲ್ಕು ವರ್ಷಗಳಿಂದ ಹೀಲ್ ಸ್ಪೆಷಾಲಿಟಿ ಕ್ಲಿನಿಕ್ ಎಂಬ ಆಸ್ಪತ್ರೆಯನ್ನು ತೆರೆದು ಜನರಿಗೆ ಕಡಿಮೆ ಬೆಲೆಯಲ್ಲಿ ನಾನು ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ. ಆದರೆ ಇತ್ತೀಚೆಗೆ ನನಗೆ ನನ್ನ ಪೇಷಂಟ್ ಅವರ ಮೊಮ್ಮಗ ಕಡೆಯಿಂದ ಒಂದು ಫೋನ್ ಕಾಲ್ ಬಂತು, ಆತ ಹೇಳಿದ ನನ್ನ ಅಜ್ಜಿಗೆ ಎದೆ ನೋವು ಕಾಣಿಸಿಕೊಂಡಿದೆ ಆದರೆ ನಾನು ಈಗ ಎಲ್ಲಿಗೆ ಬರಬೇಕೆಂಬ ಗೊಂದಲದಲ್ಲಿ ಇದ್ದೀನಿ ಇತ್ತೀಚೆಗೆ ನೀವು ಹೊಸ ಹಾಸ್ಪಿಟಲ್ ಪ್ರಾರಂಭಿಸಿದ್ದೀರಾ ಎಂಬ ವಿಷಯ ತಿಳಿಯಿತು. ನಮಗೆ ಕಂಗ್ರಾಟ್ಸ್ ಹೇಳುತ್ತಾ ದಯಮಾಡಿ ಈಗ ನಾನು ಎಲ್ಲಿಗೆ ಬರಬೇಕು ಎಂದು ಗೊತ್ತಾಗುತ್ತಿಲ್ಲ ದಯವಿಟ್ಟು ನನಗೆ ತಿಳಿಸಿ ಅಂದಾಗ ಆ ವಿಷಯವನ್ನು ಕೇಳಿದ ನನಗೆ ಆಶ್ಚರ್ಯವಾಯಿತು. ತಕ್ಷಣವೇ ಆತನಿಗೆ ನಿಮ್ಮ ಅಜ್ಜಿಯನ್ನು ಮೊದಲು ನಮ್ಮ ಆಸ್ಪತ್ರೆಗೆ ಕರೆತನ್ನಿ ಎಂದು ಹೇಳಿದೆ. ತಕ್ಷಣ ಅವರು ಬಂದರು ಆಗ ನಾನು ಅವರಿಗೆ ಇಸಿಜಿ ಮಾಡಿಸಿ ಅವರಿಗೆ ಒಂದು ವೈದ್ಯಕೀಯ ಚಿಕಿತ್ಸೆಯನ್ನು ಕೊಟ್ಟ ನಂತರ ಅವರು ಹೇಳಿದ ಹಾಸ್ಪಿಟಲ್ ಮುಂದೆ ಹೋಗಿ ನಿಂತೆ. ಅಲ್ಲಿ ಯಾವುದೇ ನಾಮಫಲಕವಾಗಲಿ, ಡಾಕ್ಟರ್ ಹೆಸರಾಗಲಿ ಇರಲಿಲ್ಲ ಆಗ ನಾನು ಯೋಚನೆ ಮಾಡಿ ಈ ಹಿಂದೆಯೂ ಸಹ ನನ್ನ ಹೆಸರು ದುರ್ಬಳಕೆ ಆಗಿತ್ತು ಆದ್ದರಿಂದ ನನ್ನ ವಾಟ್ಸಾಪ್ ಗ್ರೂಪಿನಲ್ಲಿ ನನ್ನ ಪೇಷಂಟ್ಗಳು ಮತ್ತು ನನಗೆ ಗೊತ್ತಿರುವ ಡಾಕ್ಟರ್ ಗಳಿಗೆ ಈ ರೀತಿಯ ಒಂದು ಮೆಸೇಜನ್ನು ಹಾಕಿದ್ದೇನೆ. ಅದರ ಉದ್ದೇಶ ಯಾರಿಗೂ ಅವಮಾನ ಮಾಡಲು ಅಲ್ಲ ಎಂದರು.

ನನ್ನ ರೋಗಿಗಳಿಗೆ ಒಂದು ಕ್ಲಾರಿಫಿಕೇಶನ್ ಕೊಡುವ ಉದ್ದೇಶದಿಂದ ಆ ಒಂದು ಪೋಸ್ಟ್ ಹಾಕಿದೆ, ನಂತರ ಸಂಜೆಗೆ ನನಗೆ ಗೊತ್ತಾಯ್ತು ಅದು ನಮ್ಮ ಡಾಕ್ಟರ್ ವೆಂಕಟೇಶ್ ಪ್ರಸಾದ್ ಅವರ ಹಾಸ್ಪಿಟಲ್ ಎಂದು, ಅಷ್ಟರಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿ ಹೋಗಿತ್ತು, ನಾನು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಕೊನೆಗೆ ನನ್ನ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ಒಂದು ಕಂಪ್ಲೇಂಟ್ ಆಗಿತ್ತು ಅದಕ್ಕಾಗಿ ನಾನು ಸ್ಟೇಷನ್ ಗೆ ಹೋಗಿ ನನ್ನ ಸ್ಟೇಟೆಂಟನ್ನು ಸಹ ಕೊಟ್ಟು ಬಂದೆ. ನಾನು ಯಾವುದೇ ವ್ಯಕ್ತಿಗಾಗಲಿ ಒಂದು ಸಂಸ್ಥೆಗಾಗಲಿ ಅವಮಾನ ಮಾಡುವ ಉದ್ದೇಶ ನನ್ನಲ್ಲಿ ಇಲ್ಲ, ನನಗೂ ಸಹ ತಿಳಿದಿದೆ ಒಂದು ಸಂಸ್ಥೆಯನ್ನು ಕಟ್ಟಬೇಕಾದರೆ ಅದರ ಶ್ರಮ ಎಷ್ಟು ಎಂದು ನಾವು ಎಲ್ಲಾ ವೈದ್ಯರು ಒಂದೇ ಎಲ್ಲರೂ ಒಟ್ಟಾಗಿ ಬೆಳೆಯೋಣ ಎಂದು ಈ ಮೂಲಕ ಹೇಳಲು ಇಷ್ಟಪಡುತ್ತೇನೆ ಎಂದರು.

Ramesh Babu

Journalist

Recent Posts

ಡಿ.15ರಂದು ಕಾಣೆಯಾಗಿದ್ದ 15 ವರ್ಷದ ಬಾಲಕ ಇಂದು ಶವವಾಗಿ ಪತ್ತೆ

ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…

2 hours ago

ಬಸ್ಸಿನಲ್ಲಿ 55 ಲಕ್ಷ ಹಣ ಮತ್ತು ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…

3 hours ago

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಂದೇ ಗ್ರಾಮದ ನಾಲ್ವರು ಯುವಕರು ದುರ್ಮರಣ: ಮುಗಿಲು ಮುಟ್ಟಿದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ: ಇಡೀ ಗ್ರಾಮದಲ್ಲಿ ಮನೆ ಮಾಡಿದ ಸೂತಕದ ವಾತಾವರಣ

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…

7 hours ago

ಅಭಿಮಾನಿಗಳ ಅತಿರೇಕ….ಯಾಕಪ್ಪಾ, ಏನಾಗಿದೆ ಸಮಸ್ಯೆ…?

ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…

8 hours ago

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

1 day ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

1 day ago