ನ.9ರ ಸಂಜೆ ದೊಡ್ಡಬಳ್ಳಾಪುರ ನಗರದ ಮುತ್ತೂರಿನ ಅಂಜನೇಯ ದೇವಸ್ಥಾನದ ಬಳಿ ಅಪರಿಚಿತ ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಕೂಲಿ ಮಾಡುವ ವ್ಯಕ್ತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದ. ಈ ಅಪಘಾತಕ್ಕೆ ನೇರ ಕಾರಣ ಸರ್ವಿಸ್ ರಸ್ತೆ ಮತ್ತು ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ಇರುವುದು ಅಪಘಾತಗಳಿಗೆ ಕಾರಣವಾಗಿದೆ ಎಂದು ಅಕ್ರೋಶಗೊಂಡ ಸ್ಥಳಿಯರು ಶವವನ್ನ ರಸ್ತೆಯಲ್ಲೇ ಇಟ್ಟು ಇಂದು ಪ್ರತಿಭಟನೆ ನಡೆಸಿದರು.
ಮುತ್ತೂರು ಬಳಿ ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ ಹಾದು ಹೋಗಿದೆ, ಮುತ್ತೂರು ಬಳಿ ಸರ್ವಿಸ್ ರಸ್ತೆ, ಬೀದಿ ದೀಪಗಳು ಮತ್ತು ರಸ್ತೆ ಉಬ್ಬುಗಳನ್ನ ಹಾಕದೆ ಇರುವುದು ಅಪಘಾತಗಳಿಗೆ ಕಾರಣವಾಗಿದೆ, ರಸ್ತೆ ನಿರ್ವಹಣೆ ಮಾಡುವ ಟೋಲ್ ನವರು ಕೇವಲ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡುತ್ತಾರೆ ಹೊರತು ಸರ್ವಿಸ್ ರಸ್ತೆ ಸೌಲಭ್ಯ ಮತ್ತು ಬೀದಿ ದೀಪಗಳ ವ್ಯವಸ್ಥೆ ಮಾಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಟೋಲ್ ನವರ ನಿರ್ಲಕ್ಷ್ಯತೆಯ ವಿರುದ್ಧ ಅಕ್ರೋಶಗೊಂಡ ಸ್ಥಳೀಯರು ಶವವನ್ನ ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು, ಇದರಿಂದ ಕೆಲಕಾಲ ರಸ್ತೆ ಬಂದ್ ಆಗಿತು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯ ನಿಯಂತ್ರಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಪರು.
ಮುತ್ತೂರು ಬಳಿ ರಸ್ತೆ ಅಪಘಾತಗಳಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಕದೀರ್ ಪಾಷ ಒಬ್ಬನೇ ಮಗ, ಮನೆಗೆ ಆಧಾರವಾಗಿದ್ದ ಒಬ್ಬನೇ ಮಗನನ್ನ ಕಳೆದುಕೊಂಡ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ, ಮುಂದೆ ನಮಗೆ ಯಾರು ಗತಿ, ಇನ್ನೂ ಎಷ್ಟು ತಾಯಂದಿರ ತಮ್ಮ ಮಕ್ಕಳನ್ನು ಕಳೆದುಕೊಳ್ಳ ಬೇಕೆಂದು ಕದೀರ್ ಪಾಷಾನ ತಾಯಿ ಝರೀನಾ ಕಣ್ಣೀರು ಹಾಕಿದರು.
ಪ್ರತಿಭಟನೆಯಲ್ಲಿ ಸಮತ ಸೈನಿಕ ದಳದ ಜಿಲ್ಲಾಧ್ಯಕ್ಷರಾದ ಒಬಳೇಶ್, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಯೈದ್ ರಜಾಕ್, ಸ್ಥಳೀಯರಾದ ಇಮ್ರಾನ್, ಆನಂದ್ ಕುಮಾರ್ ಸೇರಿದಂತೆ ನೂರಾರು ಮುತ್ತೂರಿನ ನಿವಾಸಿಗಳು ಭಾಗಿಯಾಗಿದ್ದರು.