ಹಾವು- ಮುಂಗುಸಿಯ ನಡುವಿನ ತಲ ತಲಾಂತರದ ದ್ವೇಷದ ಹಿಂದಿನ ಕಾರಣವೇನು?: ಹಾವು- ಮುಂಗುಸಿ ಕಾಳಗ ಹೇಗಿರುತ್ತದೆ…? ಈ ಸ್ಟೋರಿ ಓದಿ…

ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳ ನಡುವಿನ ತೀವ್ರತರವಾದ ಹಾಗೂ ಹೆಚ್ಚು ಕಾಲದ ದ್ವೇಷದ ಬಗ್ಗೆ ಹೇಳುವಾಗ ಅವರಿಬ್ಬರೂ ಹಾವು ಮುಂಗುಸಿ ಇದ್ದಂತೆ ಎಂದೇ ಹೇಳುತ್ತಾರೆ. ಬಹುಶಃ ಅವರಿಬ್ಬರ ನಡಿವಿನ ದ್ವೇಷವನ್ನು ನಿಖರವಾಗಿ ಅರ್ಥೈಸಲು ಇದಕ್ಕಿಂತಲೂ ಬೇರೊಂದು ಉದಾಹರಣೆ ಸಾಧ್ಯವಿಲ್ಲ.

ಹಾವು ಮತ್ತು ಮುಂಗುಸಿಯ ನಡುವಿನ ತಲ ತಲಾಂತರದ ದ್ವೇಷದ ಹಿಂದಿನ ಕಾರಣವೇನು? ಹಾವು ಮುಂಗುಸಿಯನ್ನು  ದ್ವೇಷಿಸುತ್ತದೆಯೋ ಅಥವಾ ಮುಂಗುಸಿಯೇ ಹಾವನ್ನು ದ್ವೇಷಿಸುತ್ತದೆಯೋ? ಇವರಿಬ್ಬರ ಕಾದಾಟದಲ್ಲಿ ಮುಂಗುಸಿಯೇ ಹೇಗೆ ಗೆಲ್ಲುತ್ತದೆ..? ಇಂತಹ ಪ್ರಶ್ನೆಗಳಿಗೆ ಉತ್ತರವು ಶುದ್ದ ಪ್ರಾಕೃತಿಕ ವಾಗಿಯೇ ಇರುತ್ತದೆ..

ಮುಂಗುಸಿಗಳು ಪೊದೆಗಳ ಕೆಳಗೆ ಅಥವಾ ಹುಲ್ಲು ಗಾವಲುಗಳ ನಡುವೆ ಪೊಟರೆಗಳನ್ನು ನಿರ್ಮಿಸಿಕೊಂಡು ಆ ಪೊಟರೆಗಳಲ್ಲೇ ವಾಸಮಾಡುತ್ತವೆ, ಹಾಗೂ ತಮ್ಮ ಮರಿಗಳನ್ನು ಪೊಟರೆಯ ಒಳಗೆ ಕೆಲದಿನಗಳ ಕಾಲ ಆರೈಕೆ ಮಾಡುತ್ತವೆ.

ಮುಂಗುಸಿಗಳು ನಿರ್ಮಿಸಿದ ಪೊಟರೆಗಳನ್ನು ಕಂಡ ತಕ್ಷಣವೇ ಅದರೊಳಗೆ ಹೊಕ್ಕು ಅದರೊಳಗಿರುವ ಚಿಕ್ಕ ಚಿಕ್ಕ ಮರಿಗಳನ್ನು ತಿನ್ನುವುದು ಹಾವಿನ ಜನ್ಮ ದತ್ತ ಗುಣವಾಗಿದೆ. ಹಾಗೂ ಸಾಮಾನ್ಯವಾಗಿ ಇಂತಹಾ ಪೊಟರೆಯೊಳಗೆ ತಾನೂ ಸಹಾ ವಾಸಿಸಲೂ ಹವಣಿಸುವುದೂ ಸಹಾ ಹಾವಿನ ಮೂಲ ಗುಣಗಳಲ್ಲೊಂದಾಗಿದೆ…

ಪೃಕೃತಿಯ ಪ್ರತೀ ಜೀವಿಯೂ ತನ್ನ ಸಂತಾನವನ್ನು ಕಾಪಾಡುವುದು ಹಾಗೂ ಅವುಗಳನ್ನು ಅಪಾಯಗಳಿಂದ ರಕ‌್ಷಿಸುವುದು ಇದು ಪೃಕೃತಿಯ ಸೂತ್ರವಾಗಿದೆ.

ಇದರಂತೆಯೇ  ಮುಂಗುಸಿಯು ತನ್ನ ಸಂತಾನವನ್ನು ನಾಶಮಾಡುವಲ್ಲಿ ಮುಂಚೂಣಿಯಲ್ಲಿರು ಹಾವುಗಳ ಬಗ್ಗೆ ತಲೆ ಮಾರುಗಳಿಂದಲೂ ಎಚ್ಚರಿಕೆಯಿಂದಿರುತ್ತವೆ.

ಹಾವುಗಳು ಹೊಕ್ಕದ ಮುಂಗುಸಿಯ ಬಿಲಗಳೇ ಇಲ್ಲ ಎಂದು ಹೇಳಬಹುದು. ಹೀಗೆ ತನ್ನ ಜೀವಿತಾವದಿಯ ಶತೃವಾದ ಹಾವುಗಳನ್ನು ಮುಂಗುಸಿಗಳು ದ್ವೇಷಿಸುತ್ತಲೇ ಇರುತ್ತವೆ.. ಆದರೆ ಹಾವು ಮುಂಗುಸಿಗಳನ್ನು ದ್ವೇಷಿಸುವ ಬದಲಾಗಿ ಮುಂಗುಸಿಗಳು ನಿರ್ಮಿಸಿರುವ ಪೊಟರೆಗಳಲ್ಲಿ ಠಿಕಾಣಿ ಹೂಡಲು ಹಾಗೂ ಅವುಗಳ ಮರಿಗಳನ್ನು ಗುಳುಂ ಮಾಡಲು ಮಾತ್ರ ಹವಣಿಸುತ್ತಿರುತ್ತದೆ.

ಹಾವಿನ ಬಗ್ಗೆ ಸದಾ ಎಚ್ಚರಿಕೆಯಿಂದಿರುವ ಮುಂಗುಸಿಯು ಹಾವನ್ನು ಕಂಡ ತಕ್ಷಣ  ಅಥವಾ ಹಾವಿನ ಚಲನೆಯ ಶಬ್ದವನ್ನು ಕೇಳಿದ ತಕ್ಷಣ ಅಥವಾ ತನ್ನ ಮರಿಗಳು ಸೂಚಿಸುವ ಅಪಾಯದ ಸಂಜ್ಞೆಗಳನ್ನು ತಿಳಿದ ತಕ್ಷಣವೇ  ಜಾಗರೂಕವಾಗಿ ಹಾವಿನ ಮೇಲೆ ದಾಳಿಗಿಳಿಯುತ್ತದೆ. ಈ ರೀತಿ ಎರಗುವ ಮುಂಗುಸಿಯಿಂದ ಪಾರಾಗಲು ಹಾವೂ ಸಹಾ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ .

ಹಾವಿನ ಕಡಿತದಿಂದ ಪಾರಾಗಲು ಮುಂಗುಸಿಯು ಬಹಳ ಚಾಕಚಕ್ಯತೆಯಿಂದ ಹೋರಾಡುತ್ತದೆ. ಕೆಲವೇ ಸಮಯದಲ್ಲಿ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿ ಹಾವಿಗೆ  ಭಯವನ್ನು ಉಂಟು ಮಾಡುತ್ತದೆ.

ಸಾಧ್ಯವಾದರೆ ಮೂರ್ನಾಲ್ಕು ಬಾರಿಯಾದರೂ ಕಚ್ವಿ ಎಳೆದು ಈ ಮುಂಗುಸಿಯ ಸಹವಾಸವೇ ಬೇಡವೆಂದು ಹಾವು ಓಡಿ ಹೋಗುವಂತೆ ಭಯಪಡಿಸುತ್ತವೆ.

ಒಂದು ವೇಳೆ ಹಾವಿನ ಕಡಿತಕ್ಕೆ ಮುಂಗುಸಿಯೇ ಒಳಗಾದರೆ ಹಾವಿನ ವಿಷದಿಂದ ಪಾರಾಗುವ ಸಸ್ಯವನ್ನು ತಿಂದು ಬಚಾವಾಗುತ್ತದೆ ಎಂದೂ ಸಹಾ ಹೇಳಲಾಗುತ್ತದೆ .

ಆದರೇ ಹಾವಿನ ಕಡಿತಕ್ಕೆ ಒಳಪಡದೆ ದಾಳಿಮಾಡುವ ಕೌಶಲ್ಯವನ್ನು ಮುಂಗುಸಿಗಳು ರೂಡಿಸಿಕೊಂಡಿರುತ್ತವೆ. ಹಾವುಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆಯಿಂದಿರುವ ಹಾಗೂ ಹಾವಿನ ಬಗ್ಗೆ ಹೊಂದಿರುವ ರಕ್ತಗತ ದ್ವೇಷವೇ ಮುಂಗುಸಿಯಲ್ಲಿ ಬಹಳ ಜಾಗರೂಕವಾಗಿ ಕಾದಾಡುವ ಕೌಶಲ್ಯಗಳನ್ನು ಬಲಗೊಳಿಸಿರುತ್ತದೆ. ಆದರೆ ಹಾವು ಮುಂಗಿಷಿಯಷ್ಟು ಕೌಶಲ್ಯಗಳನ್ನು ಬಳಸುವುದಿಲ್ಲ. ತನ್ನ ಎದುರಾಳಿ ಮುಂಗುಸಿಯನ್ನು ಭಯಪಡಿಸಲು ಆಕ್ರೋಶದ ಶಬ್ದಮಾಡುವುದು ಹಾಗು ಮುಂಗುಸಿಯನ್ನು ಕಚ್ವಿ ತನ್ನ ಹಲ್ಲುಗಳ ಕೊಳವೆಯಲ್ಲಿ ಸಿದ್ದವಿರುವ ವಿಷಕಾರಲು ಹವಣಿಸುತ್ತದೆ. ಮುಂಗುಸಿಗಿಂತಲೂ ಉದ್ದವಾಗಿರುವ, ತನ್ನ ದೇಹವನ್ನು ಮುಂಗುಸಿಯ ಬಾಯಿಗೆ ಸಿಕ್ಕದಂತೆ ಪಾರಾಗಲು ಹಾವೂ ಸಹಾ ಹೆಚ್ಚು ಶ್ರಮ ಪಡಬೇಕಾಗುತ್ತದೆ.. ಆದರೂ ಸಹಾ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಚೂಪಾದ ಹಲ್ಲುಗಳಿಂದ ಕಚ್ಚಿ ಎಳೆದು ಸೀಳುವಲ್ಲಿ ಮುಂಗುಸಿಯೇ ಯಶಸ್ವಿಯಾಗುತ್ತದೆ.

ಹೀಗಾಗಿ ಪ್ರತೀ ಕಾಳಗದಲ್ಲೂ ಮುಂಗುಸಿಯೇ ಗೆದ್ದಂತೆ ನೋಡುಗರಿಗೆ ಭಾಸವಾಗುತ್ತದೆ.

ಮುಂಗುಸಿಯ ಕಡಿತದಿಂದ ಹಾವಿಗೆ ಪ್ರಾಣಾಪಾಯವಾಗುವುದಿಲ್ಲ. ಆದರೆ ಹೆಚ್ಚು ಕಡಿತದಿಂದ ಹೆಚ್ಚು ನೋವು ರಕ್ತಸ್ರಾವವಾಗಬಹುದು. ಕೆಲವು ಸಲ ಮುಂಗುಸಿಯ ಜೊಲ್ಲಿನಲ್ಲಿರುವ ತೀವೃತರವಾದ ರ‌್ಯಾಬೀಸ್ ಗಳಿಂದ ಹಾವಿನ ಆರೋಗ್ಯವೂ ಕ‌್ಷಿಣಿಸಬಹುದು. ತನ್ನ ಸುಲಲಿತ ಚಲನೆಗೂ ಕೆಲ ಕಾಲ ಅಡ್ಡಿಯಾಗಬಹುದು. ಆದರೆ ಹಾವಿನ ಕಡಿತವು ಮುಂಗುಸಿಗೆ ಹೆಚ್ಚು ಅಪಾಯಕಾರಿ.

ಈ ಹಾವು ಮತ್ತು ಮುಂಗುಸಿಯ ದ್ವೇಷದ ಹಿಂದೆ ಪೃಕೃತಿಯ ಸರಳ ಸೂತ್ರವೇ ಇರುತ್ತದೆ.

ಸಂಗ್ರಹ

Ramesh Babu

Journalist

Recent Posts

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

2 hours ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

9 hours ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

10 hours ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

1 day ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: 15,721 ಮೃತರ ಹೆಸರು ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…

2 days ago