ಹಸು ಮೈ ತೊಳೆಯಲು ಹೋದ ವ್ಯಕ್ತಿ ನೀರು ಪಾಲು?: ಮೃತ ದೇಹವನ್ನ ನೀರಿನಿಂದ ಹೊರತೆಗೆದ ಅಗ್ನಿ ಶಾಮಕ‌‌ ಸಿಬ್ಬಂದಿ

ಹಸು ಮೈ ತೊಳೆಯಲು ಹೋಗಿ ನೀರಿನಲ್ಲಿ ಮುಳುಗಿ ವ್ಯಕ್ತಿಯೊರ್ವ‌ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ತಾಲೂಕಿನ ಒಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ರಾಂಪುರ ನಿವಾಸಿ ಕುಮಾರ್ (43), ಸಾವನಪ್ಪಿರುವ ದುರ್ದೈವಿ. ತನ್ನ ಬಳಿ‌ ಇದ್ದ ಆರು ಹಸುಗಳ ಮೈ ತೊಳೆಯಲು ಕಟ್ಟೆ ಬಳಿಗೆ ವ್ಯಕ್ತಿ ಹೋಗಿದ್ದಾನೆ. ಸಂಜೆ ಹಸುಗಳು ಮನೆಗೆ ಬಂದರೂ ಕುಮಾರ್ ಮನೆಗೆ ಬರಲಿಲ್ಲ. ಆಗ ಮೃತನ ಕುಟುಂಬಸ್ಥರು ಸ್ಥಳಕ್ಕೆ‌‌ ಹೋಗಿ ನೋಡಿದಾಗ ಚಪ್ಪಲಿ ಮತ್ತು ಕಡ್ಡಿ, ಮೊಬೈಲ್ ಬಿದ್ದಿತ್ತು ಎನ್ನಲಾಗಿದೆ. ಹಸು ತೊಳೆಯಲು ಹೋಗಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.

ತಕ್ಷಣ ದೊಡ್ಡಬೆಳವಂಗಲ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಂಜೆ ವೇಳೆ ಕತ್ತಲಿದ್ದರಿಂದ ಮೃತ‌ದೇಹ ಪತ್ತೆ ಕಾರ್ಯಾಚರಣೆ ಮಾಡಲು ಆಗಲಿಲ್ಲ.ಆದ್ದರಿಂದ ಇಂದು ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ದೊಡ್ಡಬೆಳವಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ನೀರಿನಿಂದ ಮೃತದೇಹವನ್ನ ಹೊರತೆಗೆದಿದ್ದಾರೆ. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *