ಗೌರಿಬಿದನೂರು:- ಚಿಕ್ಕ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚೆನ್ನಬೈರೇನಹಳ್ಳಿ ಗ್ರಾಮದ ನಿವಾಸಿ ಸತ್ಯನಾರಾಯಣ (45) ಲೇಟ್ ವೆಂಕಟರಮಣಪ್ಪ ಇವರು ನಗರದ ಕಲ್ಲುಡಿ ಗ್ರಾಮದಲ್ಲಿರುವ ಸಿ.ಬಿ ಮೋಟಾರ್ ಸರ್ವಿಸ್ ಸ್ಟೇಷನ್ ನಲ್ಲಿ ತಮ್ಮ ಬೈಕ್ ಅನ್ನು ರಿಪೇರಿಗೆ ಬಿಟ್ಟಿದ್ದು ಬೈಕ್ ರಿಪೇರಿ ಆದ ಬಳಿಕ ಮೆಕಾನಿಕ್ ಚೇತನ್ ಎಲ್ (21) ಬಿನ್ ಲಕ್ಷ್ಮೀನಾರಾಯಣಪ್ಪ ಎಂಬ ಹುಡುಗ ರಿಪೇರಿಯ ಹಣವನ್ನು ಕೇಳುವ ಸಮಯದಲ್ಲಿ ಚೇತನ್ ಮತ್ತು ಸತ್ಯನಾರಾಯಣ್ ನಡುವೆ ಮಾತಿನ ಚಕಮಕಿ ಮತ್ತು ಗಲಾಟೆ ನಡೆದಿದೆ.
ಕಳೆದ ಅ.25ರ ಬುಧವಾರದಂದು ಚೇತನ್ ಆತನ ಸ್ನೇಹಿತರಾದ ಚೆನ್ನಬೈರೇನಹಳ್ಳಿ ಗ್ರಾಮದ ನಿವಾಸಿ ಜ್ವಾಲೆಂದ್ರ ಬಿನ್ ಅಶ್ವತಪ್ಪ (22) ಮತ್ತು ಚೇತನ್ ಕೆ.ಹೆಚ್ ಬಿನ್ ಹನುಮಂತರಾಯಪ್ಪ (23) ಎಂಬ ಇಬ್ಬರು ಸ್ನೇಹಿತರಿಗೆ ಹಣದ ವಿಷಯ ತಿಳಿಸಿರುತ್ತಾನೆ.
ರಕ್ತಸ್ರಾವದಿಂದ ನರಳಾಡುತ್ತಿದ್ದ ಸತ್ಯನಾರಾಯಣನನ್ನ ಕಂಡ ಸ್ಥಳೀಯರು ಪ್ರಥಮ ಚಿಕಿತ್ಸೆಗಾಗಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಬೆಂಗಳೂರಿನ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಸತ್ಯನಾರಾಯಣ ಸಾವನಪ್ಪಿದ್ದಾರೆ.
ಅದೇ ಗ್ರಾಮದ ನಿವಾಸಿ ಬೈಕ್ ಮೆಕಾನಿಕ್ ಚೇತನ್ ಸ್ನೇಹಿತನಾದ ಜ್ವಾಲೆಂದ್ರ, ಮತ್ತು ಮೃತ ಸತ್ಯನಾರಾಯಣ ಎಂಬುವರಿಗೆ ಖಾಲಿ ನಿವೇಶನದ ವಿಚಾರವಾಗಿ ಈ ಹಿಂದೆ ಗಲಾಟೆಯು ಸಹ ನಡೆದಿತ್ತು. ಹಳೆ ದ್ವೇಷ ಮತ್ತು ಹಣದ ವಿಚಾರಕ್ಕೆ ಮನೆಯ ಬಳಿ ಬಂದು ಗಲಾಟೆ ತೆಗೆದಿದ್ದಾರೆ ಎಂದು ಸತ್ಯನಾರಾಯಣ್ ರವರ ಸಂಬಂಧಿಕರಾದ ಗಂಗಾಧರಪ್ಪ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…