ಹಂದಿ ಶೆಡ್ ನಲ್ಲಿದ್ದ ಸುಮಾರು 30 ಹಂದಿ ಮರಿಗಳನ್ನು ಕದ್ದೊಯ್ದ ಕಳ್ಳರು. ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಹಂಡಿ ಶೆಡ್ ಬಳಿ ಮಾಲೀಕರು ಹೋದ ಸಂದರ್ಭದಲ್ಲಿ ಹಂದಿ ಮರಿಗಳು ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕದಿಯುವ ಭರದಲ್ಲಿ ಕಳ್ಳರು ತಮ್ಮ ಜರ್ಕಿನ್ ನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಬೈರಸಂದ್ರ ಗ್ರಾಮದ ದಿವಾಕರ್ ಎಂಬುವರಿಗೆ ಸೇರಿದ ಹಂದಿ ಶೆಡ್ ಇದಾಗಿದ್ದು, ಇವರು ಹಲವು ವರ್ಷಗಳಿಂದ ಊರ ಹೊರವಲಯದಲ್ಲಿ ಶೆಡ್ ಮಾಡಿಕೊಂಡು ಹಂದಿ ಸಾಕಾಣಿಕೆ ಮಾಡುತ್ತಿದ್ದರು. ಶೆಡ್ ನಲ್ಲಿ ಸುಮಾರು 100ಕ್ಕೂ ಹೆಚ್ಚು ಹಂದಿಗಳಿದ್ದವು ಎನ್ನಲಾಗಿದೆ.
ಕಳೆದ ರಾತ್ರಿ ಮಳೆಯಾಗುತ್ತಿತ್ತು, ಶೆಡ್ ಮಾಲೀಕರು ಶೆಡ್ ಬಳಿ ಇಲ್ಲದ ಸಮಯದಲ್ಲಿ, ಶೆಡ್ ಬಳಿ ಬಂದ ಕಳ್ಳರು ವಾಹನದಲ್ಲಿ ಹಂದಿ ಮರಿಗಳನ್ನ ಕಳವು ಮಾಡಿದ್ದಾರೆ. ಕಳ್ಳರ ನಡೆದಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಇದರ ಜೊತೆಗೆಯಲ್ಲಿ ಕಳ್ಳನೊಬ್ಬ ತನ್ನ ಜರ್ಕಿನ್ ಮರೆತು ಹೋಗಿದ್ದಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…