ಸ್ವಾವಲಂಬಿ ಬದುಕಿಗೆ ಉದ್ಯೋಗ ಮೇಳ ಸಹಕಾರಿ-ಜೆ.ರಾಕೇಶ್

ದೊಡ್ಡಬಳ್ಳಾಪುರ: ಕಾಲೇಜುಗಳಲ್ಲಿ ಉದ್ಯೋಗ ಮೇಳಗಳು ನಡೆಸುವುದರಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳ ಸ್ವಾಲಂಬಿ ಬದುಕಿಗೆ ದಾರಿ ತೋರಿಸಿದಂತಾಗುತ್ತದೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಗೂ ಸಹಕಾರಿಯಾಗುತ್ತದೆ ಎಂದು ಗೌರ್ನಿಂಗ್ ಕೌನ್ಸಿಲ್ ನ ಸದಸ್ಯರಾದ ಜೆ.ರಾಕೇಶ್ ಹೇಳಿದರು.

ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಉದ್ಯೋಗ ಮತ್ತು ತರಬೇತಿ ವಿಭಾಗ ಮತ್ತು ವೃಕ್ಷ ಆರ್ಗ್ಯಾನಿಕ್ ಇವರ ಸಹಯೋಗದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಉದ್ಯೋಗ ಮೇಳಗಳನ್ನು ಕಾಲೇಜುಗಳಲ್ಲಿ ನಡೆಸುವುದರಿಂದ ಗ್ರಾಮೀಣ ಬಡ ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬಿದಂತಾಗುತ್ತದೆ ಅಲ್ಲದೆ ಅವರ ಬದುಕು ಹಸನಾಗಲು ನೆರವಾದ ತೃಪ್ತಿಯು ಸಿಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಗೌರಪ್ಪ ಮಾತನಾಡಿ ಉದ್ಯೋಗ ಆಧಾರಿತ ಶಿಕ್ಷಣ ಪದ್ಧತಿ ಇಂದಿನ ಅಗತ್ಯವಾಗಿದೆ, ಇಂಜಿನಿಯರಿಂಗ್, ಡಿಪ್ಲೋಮೋ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರವೇ ಉದ್ಯೋಗ ಮೇಳಗಳು ಎಂಬ ಭಾವನೆ ಇಂದಿಗೂ ಇದೆ, ಆದರೆ ಪದವಿ ಶಿಕ್ಷಣ ಮುಗಿಸಿದವರಿಗೂ ಉದ್ಯೋಗ ಮೇಳಗಳು ನಡೆಸುವ ಮೂಲಕ ಪದವಿ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವೃಕ್ಷ ಆರ್ಗ್ಯಾನಿಕ್ ಕಂಪನಿಯ ರಾಹುಲ್, ಶ್ರೇಯಸ್,ಮೋಹಿತ್ ಕಾಲೇಜಿನ ಉಪ ಪ್ರಾಂಶುಪಾಲರಾದ ಕೆ.ದಕ್ಷಿಣಮೂರ್ತಿ, ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ ಚಿಕ್ಕಣ್ಣ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಬಾಬುಸಾಬಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸಿ.ಪಿ ಪ್ರಕಾಶ್, ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಚೈತ್ರ, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರುಗಳಾದ ಅಲ್ಲಾಭಕಾಶ್, ಮಧುಶ್ರೀ, ನಂದನ ಪ್ರಾಧ್ಯಾಪಕರಾದ ದಿವ್ಯ, ಕಿರಣ್ ಆದೇಶ್, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!