ನಗರದ ಬಸ್ ನಿಲ್ದಾಣದಲ್ಲಿ ವಿಶೇಷ ಚೇತನವಾದರೂ ನೀರಿನ ಬಾಟಲ್ನ್ನು ಮಾರುತ್ತ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವ ಶಂಭುಲಿಂಗ(ಸುನೀಲ್) ಅವರಿಗೆ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂಜಿಲ್ಲಾ ಪುನರ್ವಸತಿ ಕೇಂದ್ರ ಸಹಕಾರದಿಂದ ಮೂರು ಚಕ್ರದ ಸೈಕಲನ್ನು ಉಚಿತವಾಗಿ ನೀಡಲಾಯಿತು.
ಸುಮಾರು ಮೂರು ತಿಂಗಳ ಹಿಂದೆ ಬೀದರ್ ನಿಂದ ದೊಡ್ಡಬಳ್ಳಾಪುರಕ್ಕೆ ಬಂದು ಹೊಸಹುಡ್ಯ ಗ್ರಾಮದಲ್ಲಿ ವಾಸವಿರುವಿದ್ದುಕೊಂಡು ನಗರದ ಬಸ್ ನಿಲ್ದಾಣದಲ್ಲಿ ನೀರಿನ ಬಾಟಲ್ನ್ನು ಮಾರುತ್ತ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುತ್ತಾರೆ.
ವಾಟರ್ ವಾಟಲ್ ಮಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಶೇಷ ಚೇತನವಾದರೂ ನೀರಿನ ಬಾಟಲ್ನ್ನು ಮಾರುತ್ತ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವುದು ಎಲ್ಲರ ಪ್ರಶಂಸೆಗೆ ಒಳಗಾಗಿತ್ತು.
ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಯಾದ ನರಸಿಂಹಮೂರ್ತಿ K.D, ಮಾಹಿತಿ ಸಲಹಾ ಕೇಂದ್ರದ ಮುಖ್ಯಸ್ಥರಾದ ರವಿಕುಮಾರ್ ಕೆ ಎನ್, ದೊಡ್ಡಬಳ್ಳಾಪುರ ನಗರ ಪುನರ್ವಸತಿ ಕಾರ್ಯಕರ್ತರಾದ ವಿನಯ್ ಕುಮಾರ್.ಪಿ ಉಪಸ್ಥಿತರಿದ್ದರು.