ಸ್ಮಶಾನದಲ್ಲಿ ಬಿಸಿ ಬಿಸಿ ಬಿರಿಯಾನಿ ಊಟ ಸವಿದು ಮೌಢ್ಯಕ್ಕೆ ಸೆಡ್ಡು

ಡಾ.ಬಿ.ಅರ್ ಅಂಬೇಡ್ಕರ್ ರವರ 68ನೇ ಪರಿನಿಬ್ಬಾಣದ  ಅಂಗವಾಗಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ರೋಜಿಪುರ ಸ್ಮಶಾನದಲ್ಲಿ ಬಿರಿಯಾನಿ ಊಟ ಮಾಡಿ ಮೌಢ್ಯವಿರೋಧಿ ದಿನಾಚರಣೆಯನ್ನು ಮಾಡಲಾಯಿತು.

ಮೌಢ್ಯವಿರೋಧಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಪ್ರಕಾಶ್ ಮಂಟೆದ ಭಾಗವಹಿಸಿ ಮಾತನಾಡಿದ ಅವರು, ಜನನ ಹಿಂದಿನ ಕಾಲದಿಂದಲೂ ಮೌಢ್ಯತೆ ಎಂಬುದು ಚಾಲ್ತಿಯಲ್ಲಿದೆ. ಇಂದಿನ ಆಧುನಿಕ ನಾಗರಿಕ ಸಮಾಜ ಹೆಚ್ಚು ಮೌಢ್ಯವನ್ನ ಅನುಸರಿಸುತ್ತಿರುವುದು ನೋವಿನ ಸಂಗತಿ. ಮೌಢ್ಯತೆ ಇವತ್ತು ಫ್ಯಾಷಿನೇಶ್ ಆಗುತ್ತಿದೆ. ಸಾಮಾಜಿಕ ತಂತ್ರಜ್ಞಾನ ಸಹ ಮೌಢ್ಯತೆಯನ್ನ ಬಿತ್ತುವ ಮಾಧ್ಯಮಗಳಾಗಿವೆ. ಇದರಿಂದ ಮತ್ತೆ ಸಮಾಜ ಮೌಢ್ಯತೆಯ ಕಡೆ ಹೊರಳುತ್ತಿದೆ. ಮೌಢ್ಯ ಹೋಗಲಾಡಿಸಿ ವೈಚಾರಿಕ ಪ್ರಜ್ಞೆ ಜನರಲ್ಲಿ ಬಿತ್ತಲು ಮೌಢ್ಯ ವಿರೋಧಿ ದಿನಾಚರಣೆಯಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಜನರಲ್ಲಿ ಅರಿವು ಮತ್ತು ಪ್ರಜ್ಞೆಯನ್ನ ಬಿತ್ತಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಸಮಾಜದ ಆರೋಗ್ಯವನ್ನ ಕಾಪಾಡಬೇಕು. ಅಜ್ಞಾನವನ್ನ ತೊಲಗಿಸಬೇಕೆಂಬ ಕಾರಣಕ್ಕೆ ಸಮಾನ ಮನಸ್ಕರು ಸೇರಿ ಪ್ರತಿ ವರ್ಷ ಈ ಮೌಢ್ಯ ವಿರೋಧಿ ದಿನಾಚರಣೆ ಮಾಡಲಾಗುತ್ತಿದೆ. ಮೌಢ್ಯತೆಯಿಂದ ದೂರವಾಗಿ ಶೂನ್ಯತ್ವದ ಕಡೆ ಹೋಗುವುದನ್ನೇ ಬೌದ್ಧ ದಮ್ಮದಲ್ಲಿ ಪರಿನಿಬ್ಬಾಣ ಎಂದು ಕರೆಯಲಾಗುತ್ತದೆ ಎಂದರು.

ಉದ್ಯಮಿ ರಾಜ್ ಗೋಪಾಲ್ ಮಾತನಾಡಿ, ಹಲವು ರೀತಿಯ ಮೌಢ್ಯತೆಗಳಿಗೆ ನಮಗೆ ಅರಿವಿಲ್ಲದೆಯೇ ನಾವು ಬಲಿಯಾಗಿದ್ದೇವೆ, ಆಧುನಿಕ ಕಾಲದಲ್ಲಿ ವಿಜ್ಞಾನ- ತಂತ್ರಜ್ಞಾನವು ಎಷ್ಟೇ ಮುಂದುವರೆದಿದ್ದರು ಸಹ ಇಂದಿಗೂ ಮೌಡ್ಯತೆ ನಂಬುವ, ಪಾಲಿಸುವ ಯುವ ಸಮುದಾಯ ನಮೊಟ್ಟಿಗಿರುವುದು ವಿಪರ್ಯಾಸವೇ ಸರಿ, ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ  ಯುವ ಸಮುದಾಯವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ , ಸಂಜೀವ್ ನಾಯಕ , ಸೊಣ್ಣಪನಹಳ್ಳಿ ರಮೇಶ್, ವಿ.ವೆಂಕಟೇಶ್, ಅಶೋಕ, ಮುನಿರಾಜು, ಮಲ್ಲರಾಜು, ರಾಜಣ್ಣ ಏಕಾಶಿಪುರ, ತಳಗವಾರ ಪುನೀತ್, ತಳಗವಾರ ಸುರೇಶ್, ವಡ್ಡರಹಳ್ಳಿ ರಾಜಶೇಖರ್, ರತ್ನಮ್ಮ, ಗುರುಪ್ರಸಾದ್, ಹನುಮಣ್ಣ, ರಾಜುಸಣ್ಣಕ್ಕಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Ramesh Babu

Journalist

View Comments

  • ಸರಿ ಇಲ್ಲದ ಮಾಡುವುದು ಸರಿಯೆ ಆದರೆ ಈ ದೇಶದ ಮೊದಲು ನಮ್ಮ ದಲಿತರು ಜನಗಳು ಒಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅದೇ ಮಡಿಕೆ ಅದೇ ಪರಕೆ ಹಿಡಿಯಬೇಕಾಗುತ್ತದೆ ದಯವಿಟ್ಟು ಎಚ್ಚೆತ್ತುಕೊಳ್ಳಿ ನಾವು ಜೈ ಭೀಮ್ ಮಕ್ಕಳು ಸರ್ ರಮೇಶ್ ಎನ್ ಎಂ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಪೋಸ್ಟ್ ನಾಗನಾಯಕನಹಳ್ಳಿ ಗ್ರಾಮ 7829098967 ನಮ್ಮ ಕರ್ನಾಟಕದಲ್ಲಿ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಾಹೇಬರ ಪುತ್ಥಳಿ ಶಂಕುಸ್ಥಾಪನೆ ನೆರವೇರಿಸಿ ಎಂದು ನಿಮ್ಮಲ್ಲಿ ಮನವರಿಕೆ ಮಾಡುತ್ತೇವೆ ಸರ್

Recent Posts

ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ…

12 hours ago

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

1 day ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

2 days ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

2 days ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

2 days ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

3 days ago