ಸ್ಪಾ ಮಾಲೀಕರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳಾದಲ್ಲಿ ದಿವ್ಯಾ ವಸಂತಳನ್ನು ಜೆಬಿ ನಗರ ಪೊಲೀಸರು ಬಂಧನ ಮಾಡಿದ್ದಾರೆ.
ಕೇಸ್ ದಾಖಲಾದ ನಂತರ ದಿವ್ಯಾವಸಂತ ಬೆಂಗಳೂರಿನಿಂದ ಪರಾರಿಯಾಗಿದ್ದರು. ಕಳೆದ ಒಂದು ವಾರದಿಂದ ದಿವ್ಯಾವಸಂತಗಾಗಿ ಹುಡುಕಾಟ ಮಾಡಲಾಗುತ್ತಿತ್ತು. ದಿವ್ಯಾ ವಸಂತ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಬೆಂಗಳೂರಿನಿಂದ ತಮಿಳುನಾಡು – ತಮಿಳುನಾಡಿನಿಂದ ಕೇರಳಾಕ್ಕೆ ದಿವ್ಯಾ ವಸಂತ ಹೋಗಿದ್ದರು. ಸದ್ಯ ಬಂಧನ ಮಾಡಿ ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ.