ಸೊಳ್ಳೆ ಬತ್ತಿಯಿಂದ ಅಗ್ನಿ ಅವಘಡ: ಸುಟ್ಟು ಕರಕಲಾದ ಹಣ್ಣಿನ ಅಂಗಡಿ: ನಗರದ ಚರ್ಚ್ ಬಳಿ ಘಟನೆ

ರಾತ್ರಿ ವೇಳೆ ಸೊಳ್ಳೆಗಳಿಂದ ಪಾರಾಗಲು ಹಚ್ಚಲಾಗಿದ್ದ ಸೊಳ್ಳೆ ಬತ್ತಿಯ ಕಿಡಿ ಪಕ್ಕದಲ್ಲೇ ಇದ್ದ ರಟ್ಟಿನ ಡಬ್ಬಕ್ಕೆ ತಗುಲಿ ಹೊತ್ತಿ ಉರಿದ ಹಣ್ಣಿನ ಅಂಗಡಿ. ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಹಣ್ಣಿನ ಅಂಗಡಿ. ನಗರದ ಟಿ.ಬಿ.ವೃತ್ತದ ಸಮೀಪದ ಚರ್ಚ್ ಬಳಿಯ ಹಣ್ಣಿನ ಅಂಗಡಿಯೊಂದರಲ್ಲಿ ಘಟನೆ ಸಂಭವಿಸಿದೆ.

ಸಾವಿರಾರು ರೂ. ಮೌಲ್ಯದ ಸೇಬು, ಮೂಸಂಬಿ, ಕಿತ್ತಳೆ, ಮಾವು, ದಾಳಿಂಬೆ, ದ್ರಾಕ್ಷಿ, ಬಾಳೆ ಹಣ್ಣು ಸೇರಿದಂತೆ ಇತರೆ‌ ಹಣ್ಣುಗಳು ಬೆಂಕಿಗಾಹುತಿ ಆಗಿವೆ. ಇದರಿಂದ ಅಪಾರ ನಷ್ಟಕ್ಕೆ ಒಳಗಾಗಿರುವ ಅಂಗಡಿ ಮಾಲೀಕ. ಸ್ಥಳಕ್ಕೆ ನಗರ ಠಾಣಾ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *