ಹಾರ್ಮೋನ್, ರಕ್ತನಾಳಗಳಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ತರಹದ ನಿಖರ ರೋಗ ಪತ್ತೆ ಹಚ್ಚುವ 32 ಸ್ಲೈಸ್ ಸಿಟಿ ಸ್ಕ್ಯಾನ್ ಸೌಲಭ್ಯ ಇನ್ನು ಮುಂದೆ ನಗರದಲ್ಲಿ ಸಿಗಲಿದೆ.
ನಗರದ ಡಿ-ಕ್ರಾಸ್ ರಸ್ತೆಯ ಐಸಿಐಸಿಐ ಬ್ಯಾಂಕ್ ಸಮೀಪ ಬುಧವಾರ ನೂತನವಾಗಿ ಪ್ರಾರಂಭವಾದ ಧನ್ವಂತರಿ ಹೆಲ್ತ್ ಸರ್ವೀಸಸ್ ಅಂಗಸಂಸ್ಥೆಯಾದ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆಯಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್, ಚಿಕಿತ್ಸಾ ವಿಧಾನ ಲಭ್ಯವಾಗಲಿದೆ.
ಕ್ಲಿಷ್ಟಕರ ರೋಗಪತ್ತೆ ವಿಧಾನಗಳಿಗಾಗಿ ಸಾರ್ವಜನಿಕರು ಬೆಂಗಳೂರಿಗೆ ಅಲೆಯಬೇಕಿತ್ತು, ಆದರೆ, ದೊಡ್ಡಬಳ್ಳಾಪುರದಲ್ಲಿ ಇದೇ ಪ್ರಪ್ರಥಮ ಬಾರಿಗೆ 2D ಅಲ್ಟ್ರಾ ಸೌಂಡ್ ಯಂತ್ರ ಒಳಗೊಂಡ ಡಯಾಗ್ನೋಸ್ಟಿಕ್ ಸೇವೆಯನ್ನು ನಮ್ಮ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆ ಒದಗಿಸಲಿದೆ. ಇದರ ಜೊತೆಗೆ 32 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ 300mA ಕ್ಷ-ಕಿರಣ ಯಂತ್ರ ಹಾಗೂ ರಕ್ತ, ಹಾರ್ಮೋನುಗಳ ಅಧ್ಯಯನ ನಡೆಸುವ ಸ್ವಯಂ ಚಾಲಿತ ಲ್ಯಾಬ್ ವ್ಯವಸ್ಥೆ ನಗರದಲ್ಲಿ ಪರಿಚಯಿಸಲಾಗಿದೆ ಎಂದು ಡಯಾಗ್ನೋಸ್ಟಿಕ್ ಕೇಂದ್ರ ರೇಡಿಯಾಲಜಿಸ್ಟ್ ಡಾ. ಎಸ್. ರಕ್ಷಿತ್ ತಿಳಿಸಿದರು.
ಶ್ರೇಷ್ಠ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ರೇಡಿಯಾಲಜಿಸ್ಟ್ಗಳಾದ ಡಾ.ಎಸ್.ರಕ್ಷಿತ್, ಡಾ.ಎಂ.ವಿನಯ್, ತಜ್ಞ ವೈದ್ಯರಾದ ಡಾ.ದತ್ತ ಎಂ. ತೊಗಲೂರೆ, ಡಾ.ಸಚಿನ್, ಡಾ.ಎಂ.ಸಂಗಮೇಶ್ ತೊಗಲೂರೆ ಹಾಗೂ ಎಂ.ಜಿ.ಪ್ರಕಾಶ್ ಅವರು ರೋಗಿಗಳ ಸೇವೆಗೆ ಲಭ್ಯವಿರಲಿದ್ದಾರೆ.
ಮೈಸೂರು: ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ…
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಎರಡನೇ ಹಂತದಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ…
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ…
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಧಾರ್ ಕಾರ್ಡ್ ದೊಡ್ಡ…
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ (ಎಂ.ಪಿ.ಆರ್.ಎ.ಸಿ.ಎಸ್.)ದ 2026–2031ನೇ ಅವಧಿಯ ಆಡಳಿತ ಮಂಡಳಿ…
ದೊಡ್ಡಬಳ್ಳಾಪುರ: ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸುವುದು ನಮ್ಮ ಭಾಗದ ಸಾಂಪ್ರದಾಯಿಕ ಆಚರಣೆಯಾಗಿದ್ದು, ಗಾಳಿಪಟವು ಒಂದು ಕಲೆಯಷ್ಟೇ ಅಲ್ಲ ಸಾಹಸದ ಪ್ರವೃತ್ತಿಯೂ…