ಸೂಕ್ಷ್ಮ, ಅತಿಸೂಕ್ಷ್ಮ ತರಹದ ರೋಗ ಪತ್ತೆಯ 32 ಸ್ಲೈಸ್ ಸಿಟಿ ಸ್ಕ್ಯಾನ್ ಸೌಲಭ್ಯ ಇನ್ನು ಮುಂದೆ ನಗರದಲ್ಲಿ ಲಭ್ಯ

ಹಾರ್ಮೋನ್, ರಕ್ತನಾಳಗಳಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ತರಹದ ನಿಖರ ರೋಗ ಪತ್ತೆ ಹಚ್ಚುವ 32 ಸ್ಲೈಸ್ ಸಿಟಿ ಸ್ಕ್ಯಾನ್ ಸೌಲಭ್ಯ ಇನ್ನು ಮುಂದೆ ನಗರದಲ್ಲಿ ಸಿಗಲಿದೆ.

ನಗರದ ಡಿ-ಕ್ರಾಸ್ ರಸ್ತೆಯ ಐಸಿಐಸಿಐ ಬ್ಯಾಂಕ್ ಸಮೀಪ ಬುಧವಾರ ನೂತನವಾಗಿ ಪ್ರಾರಂಭವಾದ ಧನ್ವಂತರಿ ಹೆಲ್ತ್ ಸರ್ವೀಸಸ್ ಅಂಗಸಂಸ್ಥೆಯಾದ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆಯಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್, ಚಿಕಿತ್ಸಾ ವಿಧಾನ ಲಭ್ಯವಾಗಲಿದೆ.

ಬಡವರು, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ 2D, 3D ಹಾಗೂ 4D ಅಲ್ಟ್ರಾ‌ಸೌಂಡ್ ಸ್ಕ್ಯಾನಿಂಗ್‌ ವ್ಯವಸ್ಥೆ,  ಕಲರ್ ಡಾಪ್ಲರ್, 2D ಎಕೋ, ಸಿಟಿ‌ಸ್ಕ್ಯಾನ್, ಎಂಆರ್ ಐ, ಯುಎಸ್ ಜಿ, ಸಿಟಿ ಮಾರ್ಗದರ್ಶಿ ಕಾರ್ಯವಿಧಾನ, ಎಕ್ಸ್ ರೇ, ರೇಡಿಯೋಗ್ರಾಫಿ ಹಾಗೂ ಸ್ವಯಂ ಚಾಲಿತ ಪ್ರಯೋಗಾಲಯದ ಸೇವೆ ಸಿಗಲಿದೆ.

ಕ್ಲಿಷ್ಟಕರ ರೋಗಪತ್ತೆ ವಿಧಾನಗಳಿಗಾಗಿ ಸಾರ್ವಜನಿಕರು ಬೆಂಗಳೂರಿಗೆ ಅಲೆಯಬೇಕಿತ್ತು, ಆದರೆ, ದೊಡ್ಡಬಳ್ಳಾಪುರದಲ್ಲಿ ಇದೇ ಪ್ರಪ್ರಥಮ ಬಾರಿಗೆ 2D ಅಲ್ಟ್ರಾ ಸೌಂಡ್ ಯಂತ್ರ ಒಳಗೊಂಡ ಡಯಾಗ್ನೋಸ್ಟಿಕ್ ಸೇವೆಯನ್ನು ನಮ್ಮ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆ ಒದಗಿಸಲಿದೆ. ಇದರ ಜೊತೆಗೆ 32 ಸ್ಲೈಸ್ ಸಿಟಿ‌ ಸ್ಕ್ಯಾನ್ ಯಂತ್ರ 300mA ಕ್ಷ-ಕಿರಣ ಯಂತ್ರ ಹಾಗೂ ರಕ್ತ, ಹಾರ್ಮೋನುಗಳ ಅಧ್ಯಯನ ನಡೆಸುವ ಸ್ವಯಂ ಚಾಲಿತ‌ ಲ್ಯಾಬ್ ವ್ಯವಸ್ಥೆ ನಗರದಲ್ಲಿ ಪರಿಚಯಿಸಲಾಗಿದೆ ಎಂದು ಡಯಾಗ್ನೋಸ್ಟಿಕ್ ಕೇಂದ್ರ ರೇಡಿಯಾಲಜಿಸ್ಟ್ ಡಾ. ಎಸ್. ರಕ್ಷಿತ್ ತಿಳಿಸಿದರು.

ಅತ್ಯಾಧುನಿಕ ಸ್ಕ್ಯಾನಿಂಗ್ ಸೌಲಭ್ಯದ ಜೊತೆಗೆ ಹೃದಯ, ಶ್ವಾಸಕೋಶ ಹಾಗೂ ಗ್ಯಾಸ್ಟ್ರೋ ಎಂಟರಾಲಜಿಗೆ ಸಂಬಂಧಿಸಿ ವಿಶೇಷ ಚಿಕಿತ್ಸೆ ಕೂಡ ನೀಡಲಾಗುವುದು, ಸ್ಕ್ಯಾನಿಂಗ್ ಫಲಿತಾಂಶ ಪಡೆಯಲು ಇಲ್ಲಿ ದಿನಗಟ್ಟಲೇ ಕಾಯಬೇಕಾದ ಅವಶ್ಯಕತೆ ಇಲ್ಲ. ಯಾವುದೇ ವಿಳಂಬವಿಲ್ಲದಂತೆ ತ್ವರಿತವಾಗಿ ಸ್ಪಷ್ಟ, ಸ್ಥಿರ ಹಾಗೂ ಸಕಾಲಿಕವಾದ ವರದಿ ನೀಡಲಾಗುವುದು. ದೊಡ್ಡಬಳ್ಳಾಪುರದ ನಾಗರಿಕರು ಶ್ರೇಷ್ಠ ಡಯಾಗ್ನೋಸ್ಟಿಕ್ ಕೇಂದ್ರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಶ್ರೇಷ್ಠ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ರೇಡಿಯಾಲಜಿಸ್ಟ್‌ಗಳಾದ ಡಾ.ಎಸ್.ರಕ್ಷಿತ್, ಡಾ.ಎಂ.ವಿನಯ್, ತಜ್ಞ ವೈದ್ಯರಾದ‌ ಡಾ.ದತ್ತ ಎಂ. ತೊಗಲೂರೆ, ಡಾ.ಸಚಿನ್, ಡಾ.ಎಂ.ಸಂಗಮೇಶ್ ತೊಗಲೂರೆ ಹಾಗೂ ಎಂ.ಜಿ.ಪ್ರಕಾಶ್ ಅವರು ರೋಗಿಗಳ ಸೇವೆಗೆ ಲಭ್ಯವಿರಲಿದ್ದಾರೆ.

Ramesh Babu

Journalist

Recent Posts

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

3 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

17 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

18 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

19 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

19 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

23 hours ago