ಸಿರಿಧಾನ್ಯ ಬೆಳೆಗಳಿಗೆ ಸರ್ಕಾರದ ಪೋತ್ಸಾಹವನ್ನು ಸದುಪಯೋಗಪಡಿಸಿಕೊಳ್ಳಿ: ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಮಾ

ಕೋಲಾರ: ಸಿರಿಧಾನ್ಯ ಉತ್ಪನ್ನಗಳನ್ನು ಬೆಳೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆಯುವಂತಾಗಬೇಕು ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಮಾ ತಿಳಿಸಿದರು.

ನಗರದ ಟೇಕಲ್ ರಸ್ತೆಯಲ್ಲಿ ಶನಿವಾರ ಅಂತರಗಂಗೆ ಸಿರಿಧಾನ್ಯ ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಸಿರಿಧಾನ್ಯ ಉಪಯೋಗದ ಮಹತ್ವ ಕುರಿತಾದ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿಧಾನ್ಯಗಳ ಬೆಳೆಯಲು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಾ ಇದೆ. ರೈತರಿಂದ ರೈತರಿಗಾಗಿ ಎನ್ನುವ ಉದ್ದೇಶದಿಂದ ಸರ್ಕಾರಗಳು ಪೋತ್ಸಾಹಿಸಲಾಗುತ್ತಾ ಇದ್ದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ರೈತರಲ್ಲಿ ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಸಹ ಮೂಡಿಸಲಾಗುತ್ತಾ ಇದೆ. ಸರಕಾರದಿಂದ ನೀಡುವ ಸೌಲಭ್ಯಗಳನ್ನು ಪಡೆದು ಗುಣಮಟ್ಟದ ಪರಿಕರಗಳನ್ನು ಬಳಸಿ ಉತ್ಪಾದನೆ ಮಾಡಿ ಮಾದರಿಯ ರೈತರಾಗಬೇಕಾಗಿದೆ ಎಂದರು.

ದೇಶದ ಪ್ರತಿಯೊಬ್ಬ ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳನ್ನೇ ಬಳಸುವಂತಾಗಬೇಕು ಇದರಿಂದಾಗಿಯೇ ಆರೋಗ್ಯವು ವೃದ್ಧಿಯಾಗುತ್ತದೆ ಜೊತೆಗೆ ಅನ್ನದಾತರಿಗೆ ಹೆಚ್ಚಿನ ಪ್ರಮಾಣದಲ್ಲಿ ಆದಾಯವು ಸಿಗಲಿದೆ ಹೊರ ದೇಶದಲ್ಲಿ ಸಹ ಹೆಚ್ಚಿನ ಸಿರಿಧಾನ್ಯಕ್ಕೆ  ಬೇಡಿಕೆ ಇದೆ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಬೆಳೆಗಳನ್ನು ಬೆಳೆಯಬೇಕು ಇದಕ್ಕೆ ಇಲಾಖೆಯ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್ ನಾಗರಾಜ್ ಮಾತನಾಡಿ, ಸಿರಿಧಾನ್ಯಗಳನ್ನು ಸುಮಾರು 50 ವರ್ಷಗಳ ಹಿಂದೆಯೇ ಬೆಳೆಯುತ್ತಾ ಇದ್ದರು ಆದರೆ ಅ ದಿನಗಳಲ್ಲಿ ಬಡವರ ಆಹಾರವಾಗಿತ್ತು ಇವತ್ತು ಶ್ರೀಮಂತರ ಆಹಾರವಾಗಿದೆ ಅಷ್ಟೇ ವ್ಯತ್ಯಾಸ ಇವತ್ತು ರೈತರು ಬೆಳೆಯುವ ಪ್ರತಿಯೊಂದು ಬೆಳೆಗೂ ರಸಾಯನಿಕ ಗೊಬ್ಬರಗಳ ತರಕಾರಿಗಳಿಂದ ಆರೋಗ್ಯ ಕೆಟ್ಟಿದೆ ನಮ್ಮ  ಮುಂದಿನ ಭವಿಷ್ಯಕ್ಕಾಗಿ ಸಿರಿಧಾನ್ಯಗಳನ್ನು ಬೆಳೆದು ಅದನ್ನು ಉತ್ತೇಜಿಸುವಂತಾಗಬೇಕು ಎಂದರು

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಪರಮೇಶ್, ಎಪಿ ಮಾಸ್ ಯೋಜನಾ ನಿರ್ದೇಶಕ ವಿನಾಯಕ ರೆಡ್ಡಿ, ಅಮರನಾರಾಯಣ ತೋಟಗಾರಿಕೆ ಸಂಸ್ಥೆಯ ಈರಪ್ಪರೆಡ್ಡಿ, ರೇಷ್ಮೆ ಉತ್ಪಾದಕರ ಸಂಸ್ಥೆಯ ಶಂಕರರೆಡ್ಡಿ, ಅಂತರಗಂಗ ಸಿರಿಧಾನ್ಯ ಸಂಸ್ಥೆಯ ಅಧ್ಯಕ್ಷ ಕೀರ್ತಿ ನಾರಾಯಣ, ಉಪಾಧ್ಯಕ್ಷ ನಂದೀಶ್ವರ್, ನಿರ್ದೇಶಕರಾದ ಜನಪನಹಳ್ಳಿ ಆನಂದ್, ಮಣಿ, ರೂಪಶ್ರೀ, ಹರೀಶ್, ಪುಟ್ಟಮ್ಮ, ಸತೀಶ್, ಸೌಂದರ್ಯ, ಮುಂತಾದವರು ಇದ್ದರು

Leave a Reply

Your email address will not be published. Required fields are marked *