ಇಂದು ಮುಂಜಾನೆ ಸುಮಾರು 4ಗಂಟೆ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ವ್ಯಾಪ್ತಿಯ ಕಾಡಲಪನಹಳ್ಳಿ, ಬೆನಕಿನಮಡಗು, ನಾಗಲಾಪುರದಲ್ಲಿ ಸುಮಾರು 80ಕ್ಕು ಹೆಚ್ಚು ಬೋರ್ವೆಲ್ ಪ್ಯಾನಲ್ ಬೋರ್ಡ್, ಕೇಬಲ್ ವೈರ್ ಗಳನ್ನು ಕಳ್ಳರು ಕದ್ದು ಟಾಟಾ ಏಸ್ ಗೆ ತುಂಬಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ರೈತರ ಕಣ್ಣಿಗೆ ಬಿದ್ದಿದ್ದಾರೆ. ರೈತರು ಕಳ್ಳರ ಸಮೀಪ ಬರುತ್ತಿದ್ದಂತೆ ಕಳ್ಳರು ಟಾಟಾ ಏಸ್ ವಾಹನವನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಬೋರ್ವೆಲ್ ಪ್ಯಾನಲ್ ಬೋರ್ಡ್, ಕೇಬಲ್ ವೈರ್ ಗಳನ್ನು ಕದ್ದು ತುಂಬಿದ್ದ ಟಾಟಾ ಏಸ್ ನ್ನು ದೊಡ್ಡಬೆಳವಂಗಲ ಪೊಲೀಸರಿಗೆ ರೈತರು ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಸಾಸಲು ಹೋಬಳಿ ವ್ಯಾಪ್ತಿಯಲ್ಲಿ ಬೋರ್ವೆಲ್ ಪ್ಯಾನಲ್ ಬೋರ್ಡ್, ಕೇಬಲ್ ವೈರ್ ಗಳ ಕಳ್ಳರು ಹೆಚ್ಚಾಗಿದ್ದು, ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಖದೀಮರನ್ನು ಬಂಧಿಸಿ ರೈತರ ಆತಂಕವನ್ನು ದೂರಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸದ್ಯ ಕಳ್ಳನ ಮೊಬೈಲ್ ಪೊಲೀಸರ ವಶದಲ್ಲಿದ್ದು, ಕಳ್ಳ ತಪ್ಪಿಸಿಕೊಂಡಿದ್ದಾನೆ. ಎಸ್ಕೇಪ್ ಆಗಿರೋ ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…..
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….