Categories: ಲೇಖನಗಳು

ಸಾಮಾಜಿಕ ಪರಿವರ್ತನೆಗಾಗಿ ಸಿದ್ಧರಾಗಿ…….

ಕೆಟ್ಟದ್ದನ್ನು, ಕೆಟ್ಟವರನ್ನು ಕೆಟ್ಟದ್ದು ಎಂದು ಹೇಳುತ್ತಾ ಆ ಕೆಟ್ಟವರಿಂದ ಕೆಟ್ಟವರೆನಿಸಿಕೊಳ್ಳುವ ಮೂಲಕ ಯಾವುದೇ ನಿರೀಕ್ಷೆ ಮತ್ತು ಪ್ರತಿಫಲ ಅಪೇಕ್ಷೆ ಇಲ್ಲದೇ, ತಾಳ್ಮೆಯಿಂದ, ಪ್ರಬುದ್ಧತೆಯಿಂದ ಸಾಮಾಜಿಕ ಪರಿವರ್ತನೆಗಾಗಿ ಹೋರಾಡುವ ಒಂದಷ್ಟು ಸಾಮಾನ್ಯ ಜನರ ಅವಶ್ಯಕತೆ ಈ ಸಮಾಜಕ್ಕೆ ಈಗ ಇದೆ…..

ಒಳ್ಳೆಯವರನ್ನು ಮತ್ತು ಒಳ್ಳೆಯದನ್ನು ಒಳ್ಳೆಯದು ಎನ್ನುವುದು, ಕೆಟ್ಟದ್ದನ್ನು ಒಳ್ಳೆಯದು ಎನ್ನುವುದು ಬಹಳ ಸುಲಭ ಮತ್ತು ಅದರಿಂದ ಯಾವುದೇ ಹಾನಿಯೂ ಇಲ್ಲ. ಸಮಸ್ಯೆ ಇರುವುದೇ ಕೆಟ್ಟವರು ಮತ್ತು ಕೆಟ್ಟ ವಿಷಯಗಳ ಬಗ್ಗೆ ಮಾತನಾಡುವಾಗ. ನೀವು ಶ್ರೀಮಂತ ಉದ್ಯಮಿಯೋ, ರಾಜಕಾರಣಿಯೋ, ಸಿನಿಮ ನಟರೋ ಅಥವಾ ಯಾವುದೇ ಹಣವಂತ ವ್ಯಕ್ತಿಯಾಗಿದ್ದು ನಿಮ್ಮ ಬಳಿ ಇರುವ ಹಣದಿಂದ ಒಂದಷ್ಟು ಜನರಿಗೆ ಅಥವಾ ಸಮಾಜಕ್ಕೆ ಸ್ವಲ್ಪ ಸಹಾಯ ಮಾಡುತ್ತಿದ್ದರೆ ನಿಮ್ಮನ್ನು ಈ ಸಮಾಜ ಅತ್ಯಂತ ಅಭಿಮಾನದಿಂದ ಆರಾಧಿಸುತ್ತದೆ, ಅಭಿಮಾನಿಸುತ್ತದೆ ಮತ್ತು ಗೌರವವನ್ನು ನೀಡುತ್ತದೆ. ಉದಾಹರಣೆಗೆ ಒಬ್ಬ ಪ್ರಖ್ಯಾತ ಮತ್ತು ಶ್ರೀಮಂತ ವ್ಯಕ್ತಿ ಕೆರೆಕಟ್ಟಿಸುವುದು, ಆಸ್ಪತ್ರೆ ಕಟ್ಟಿಸುವುದು, ಶಿಕ್ಷಣ ಸಂಸ್ಥೆ ಕಟ್ಟಿಸುವುದು, ಆ ಮೂಲಕ ಬಡವರಿಗೆ ಸಹಾಯ ಮಾಡುವುದು, ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡುವುದು ಮುಂತಾದ ಏನೋ ಮಾಡಿದರೆ ಜನ ಅದೊಂದು ಮಹತ್ವದ ಉಪಕಾರ ಎಂಬಂತೆ ಸ್ಮರಿಸುತ್ತದೆ……

ಆದರೆ ಈ ಸಮಾಜದ ಅತ್ಯಂತ ಮಹತ್ವದ ವಿಷಯಗಳಾದ ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆಯ ಬಗ್ಗೆ, ಇಲ್ಲಿನ ಸಮಕಾಲೀನ ಸಮಸ್ಯೆಗಳ ಬಗ್ಗೆ, ಶೋಷಣೆಯ ಬಗ್ಗೆ ಮಾತನಾಡುವವರು ಯಾರು ? ಮೇಲೆ ಹೇಳಿದ ದಾನಿಗಳು ಇವುಗಳ ಬಗ್ಗೆ ಹೆಚ್ಚು ಮಾತನಾಡದೆ ರಾಜಕಾರಣಿಗಳು, ಅಧಿಕಾರಸ್ತರು, ಪತ್ರಕರ್ತರು, ಸ್ವಾಮೀಜಿಗಳು, ಸಿನಿಮಾನಟರು, ಉದ್ಯಮಿಗಳು ಇಂಥವರ ಜೊತೆ ಒಡನಾಟ ಇಟ್ಟುಕೊಂಡು ತಮ್ಮ ವ್ಯಾಪಾರ, ವಹಿವಾಟು, ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಂಡು ತಾವು ಮತ್ತಷ್ಟು ಪ್ರಖ್ಯಾತರಾಗುತ್ತಾ, ಹಣ ಮಾಡುತ್ತಾ, ಜೀವನದ ಸುಖಭೋಗಗಳನ್ನು ಅನುಭವಿಸುತ್ತಾ, ಸಾರ್ವಜನಿಕವಾಗಿ ಒಳ್ಳೆಯ ಹೆಸರಿನೊಂದಿಗೆ ಬದುಕುತ್ತಿರುತ್ತಾರೆ……

ಹಾಗಾದರೆ ಸರ್ಕಾರದ ಭ್ರಷ್ಟಾಚಾರವನ್ನು, ಅಧಿಕಾರಿಗಳ ನಿರ್ಲಕ್ಷ್ಯವನ್ನು, ಪತ್ರಕರ್ತರ ಪಕ್ಷಪಾತವನ್ನು, ಸ್ವಾಮೀಜಿಗಳ ವಂಚನೆಯನ್ನು ಮಾತನಾಡುವವರಾದರು ಯಾರು? ಪ್ರಶ್ನಿಸುವವರಾದರು ಯಾರು?……..

ಸಾಮಾನ್ಯ ಜನರು ಇವುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರಿಗೆ ಇಡೀ ವ್ಯವಸ್ಥೆಯನ್ನು ತಲುಪುವ ಶಕ್ತಿ ಇರುವುದಿಲ್ಲ. ದುರಂತವೆಂದರೆ ಆ ಶಕ್ತಿ ಇರುವವರು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು, ಆತ್ಮ ವಂಚನೆ ಮಾಡಿಕೊಂಡು ತಾವು ಸುಖವಾಗಿರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು…..

ನಾವು ಯಾರನ್ನು ಮಹಾನ್ ದಾನಿಗಳು, ಸಮಾಜ ಸೇವಕರು ಎಂದು ಹೇಳುತ್ತೇವೆಯೋ ಅವರುಗಳು ಆಂತರ್ಯದಲ್ಲಿ ತಮ್ಮ ಸ್ವಾರ್ಥಕ್ಕೆ ಮಹತ್ವ ಕೊಟ್ಟಿರುತ್ತಾರೆ ಎಂಬುದು ಸಾಕಷ್ಟು ಜನರಲ್ಲಿ ಕಾಣಬಹುದು. ಅಪರೂಪದ ಕೆಲವು ನಿಸ್ವಾರ್ಥರನ್ನು ಹೊರತುಪಡಿಸಿ ಯಾರೂ ಈ ವ್ಯವಸ್ಥೆಯ ದೋಷಗಳ ಬಗ್ಗೆ ನೇರವಾಗಿ ಮತ್ತು ನಿಷ್ಠುರವಾಗಿ ಮಾತನಾಡದೆ ತಮ್ಮ ವೈಯಕ್ತಿಕ ಇಮೇಜ್ ಅನ್ನು ಕಾಪಾಡಿಕೊಳ್ಳುತ್ತಾ ಪ್ರಶಸ್ತಿ, ಸನ್ಮಾನ, ಅಧಿಕಾರ, ಜನರಿಂದ ಜೈಕಾರದ ಘೋಷಣೆಗಳು, ಪತ್ರಕರ್ತರಿಂದ ವಿಶೇಷ ಕಾರ್ಯಕ್ರಮಗಳನ್ನು ಮಾಡಿಸಿಕೊಂಡು ತಾವು ಭವ್ಯ ಬಂಗಲೆಗಳಲ್ಲಿ ವಾಸಿಸುತ್ತಾ, ತಾವು ಜಾತಿವಾದಿಗಳು, ಕೋಮುವಾದಿಗಳು, ಭ್ರಷ್ಟಾಚಾರಿಗಳೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಇರುತ್ತಾರೋ ಅವರ ಬಗ್ಗೆ ಸಣ್ಣ ಅಸಮಾಧಾನವಿದೆ……

ಮುಖವಾಡಗಳ ಮರೆಯಲ್ಲಿ ಎಂದು ಹೇಳುವುದು ಇದನ್ನೇ, ಅಂದರೆ ಜನರನ್ನು ಭ್ರಮೆಗಳಲ್ಲಿ ತೇಲಿಸುತ್ತಾ, ವಾಸ್ತವದಿಂದ ಅವರನ್ನು ದೂರ ಮಾಡಿ ತಾವು ತಮ್ಮ ಸುಖ ಭೋಗಕ್ಕಾಗಿ ಜನರ ಮೇಲೆ ನಿಯಂತ್ರಣ ಹೊಂದುವ ಪ್ರಕ್ರಿಯೆ. ಇನ್ನು ಎಲ್ಲರೂ ಅವರವರ ಸುರಕ್ಷತೆಯನ್ನೇ ನೋಡಿಕೊಂಡರೆ ಸಮಾಜ ಸುಧಾರಣೆ ಹೇಗೆ ಸಾಧ್ಯ. ಇದರ ಲಾಭವನ್ನೇ ರಾಜಕಾರಣಿಗಳು, ಕಾರ್ಪೊರೇಟ್ ಉದ್ಯಮಿಗಳು, ಪತ್ರಕರ್ತರು, ಸ್ವಾಮೀಜಿಗಳು ಪಡೆಯುವುದು. ಅವರಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿದೆ ಈ ಜನ ಒಗ್ಗಟ್ಟಾಗುವುದಿಲ್ಲ, ಸಾಮಾನ್ಯ ಜನ ಅವರದೇ ಬಲೆಯೊಳಗೆ ಸಿಲುಕಿದ್ದಾರೆ, ಅವರನ್ನು ವಂಚಿಸುವುದು ಅಥವಾ ಶೋಷಿಸುವುದು ಬಹಳ ಸುಲಭ. ಅವರು ಹಾಗೆಯೇ ಇರಲಿ ಅಂದರೆ ಬಡತನ ಮತ್ತು ಬಡವರು ಹಾಗೆ ಇರಲಿ ನಾವು ಶ್ರೀಮಂತರಾಗುತ್ತ ಬಿಡಿಗಾಸನ್ನು ಅವರಿಗೆ ಸೇವೆ ಹೆಸರಲ್ಲಿ ಚೆಲ್ಲುತ್ತಾ ಆರಾಮಾಗಿರಬಹುದು, ವ್ಯವಸ್ಥೆಯ ಹುಳುಕುಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆ ಅದು ನಮ್ಮ ಬುಡಕ್ಕೆ ಬರುತ್ತದೆ. ಆದ್ದರಿಂದ ಈಗಿರುವ ವ್ಯವಸ್ಥೆಯೇ ಉತ್ತಮ ಎಂಬುದು ಆ ದೊಡ್ಡ ವ್ಯಕ್ತಿಗಳ ಆಂತರ್ಯದ ಆಸೆ……

ಆದ್ದರಿಂದ ಕೆಟ್ಟವರನ್ನು ಕೆಟ್ಟದ್ದನ್ನು ಕೆಟ್ಟದ್ದು ಎಂದು ಹೇಳುವ ಧೈರ್ಯ ತೋರಿಸೋಣ ಆಗ ಮಾತ್ರ ಒಂದು ಸಣ್ಣ ಪರಿವರ್ತನೆ ಸಾಧ್ಯ. ಇಲ್ಲದಿದ್ದರೆ ವ್ಯವಸ್ಥೆ ಹೀಗೇ ಮುಂದುವರೆದರಿಯುತ್ತದೆ. ಸ್ವಲ್ಪ ತ್ಯಾಗಕ್ಕೆ ಸಿದ್ದರಾಗಿ. ಆಯ್ಕೆ ನಿಮ್ಮ ಮುಂದಿದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

2 hours ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

3 hours ago

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

8 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

10 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

13 hours ago

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

1 day ago