Categories: ಲೇಖನಗಳು

ಸಾಮಾಜಿಕ ಪರಿವರ್ತನೆಗಾಗಿ ಸಿದ್ಧರಾಗಿ…….

ಕೆಟ್ಟದ್ದನ್ನು, ಕೆಟ್ಟವರನ್ನು ಕೆಟ್ಟದ್ದು ಎಂದು ಹೇಳುತ್ತಾ ಆ ಕೆಟ್ಟವರಿಂದ ಕೆಟ್ಟವರೆನಿಸಿಕೊಳ್ಳುವ ಮೂಲಕ ಯಾವುದೇ ನಿರೀಕ್ಷೆ ಮತ್ತು ಪ್ರತಿಫಲ ಅಪೇಕ್ಷೆ ಇಲ್ಲದೇ, ತಾಳ್ಮೆಯಿಂದ, ಪ್ರಬುದ್ಧತೆಯಿಂದ ಸಾಮಾಜಿಕ ಪರಿವರ್ತನೆಗಾಗಿ ಹೋರಾಡುವ ಒಂದಷ್ಟು ಸಾಮಾನ್ಯ ಜನರ ಅವಶ್ಯಕತೆ ಈ ಸಮಾಜಕ್ಕೆ ಈಗ ಇದೆ…..

ಒಳ್ಳೆಯವರನ್ನು ಮತ್ತು ಒಳ್ಳೆಯದನ್ನು ಒಳ್ಳೆಯದು ಎನ್ನುವುದು, ಕೆಟ್ಟದ್ದನ್ನು ಒಳ್ಳೆಯದು ಎನ್ನುವುದು ಬಹಳ ಸುಲಭ ಮತ್ತು ಅದರಿಂದ ಯಾವುದೇ ಹಾನಿಯೂ ಇಲ್ಲ. ಸಮಸ್ಯೆ ಇರುವುದೇ ಕೆಟ್ಟವರು ಮತ್ತು ಕೆಟ್ಟ ವಿಷಯಗಳ ಬಗ್ಗೆ ಮಾತನಾಡುವಾಗ. ನೀವು ಶ್ರೀಮಂತ ಉದ್ಯಮಿಯೋ, ರಾಜಕಾರಣಿಯೋ, ಸಿನಿಮ ನಟರೋ ಅಥವಾ ಯಾವುದೇ ಹಣವಂತ ವ್ಯಕ್ತಿಯಾಗಿದ್ದು ನಿಮ್ಮ ಬಳಿ ಇರುವ ಹಣದಿಂದ ಒಂದಷ್ಟು ಜನರಿಗೆ ಅಥವಾ ಸಮಾಜಕ್ಕೆ ಸ್ವಲ್ಪ ಸಹಾಯ ಮಾಡುತ್ತಿದ್ದರೆ ನಿಮ್ಮನ್ನು ಈ ಸಮಾಜ ಅತ್ಯಂತ ಅಭಿಮಾನದಿಂದ ಆರಾಧಿಸುತ್ತದೆ, ಅಭಿಮಾನಿಸುತ್ತದೆ ಮತ್ತು ಗೌರವವನ್ನು ನೀಡುತ್ತದೆ. ಉದಾಹರಣೆಗೆ ಒಬ್ಬ ಪ್ರಖ್ಯಾತ ಮತ್ತು ಶ್ರೀಮಂತ ವ್ಯಕ್ತಿ ಕೆರೆಕಟ್ಟಿಸುವುದು, ಆಸ್ಪತ್ರೆ ಕಟ್ಟಿಸುವುದು, ಶಿಕ್ಷಣ ಸಂಸ್ಥೆ ಕಟ್ಟಿಸುವುದು, ಆ ಮೂಲಕ ಬಡವರಿಗೆ ಸಹಾಯ ಮಾಡುವುದು, ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡುವುದು ಮುಂತಾದ ಏನೋ ಮಾಡಿದರೆ ಜನ ಅದೊಂದು ಮಹತ್ವದ ಉಪಕಾರ ಎಂಬಂತೆ ಸ್ಮರಿಸುತ್ತದೆ……

ಆದರೆ ಈ ಸಮಾಜದ ಅತ್ಯಂತ ಮಹತ್ವದ ವಿಷಯಗಳಾದ ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆಯ ಬಗ್ಗೆ, ಇಲ್ಲಿನ ಸಮಕಾಲೀನ ಸಮಸ್ಯೆಗಳ ಬಗ್ಗೆ, ಶೋಷಣೆಯ ಬಗ್ಗೆ ಮಾತನಾಡುವವರು ಯಾರು ? ಮೇಲೆ ಹೇಳಿದ ದಾನಿಗಳು ಇವುಗಳ ಬಗ್ಗೆ ಹೆಚ್ಚು ಮಾತನಾಡದೆ ರಾಜಕಾರಣಿಗಳು, ಅಧಿಕಾರಸ್ತರು, ಪತ್ರಕರ್ತರು, ಸ್ವಾಮೀಜಿಗಳು, ಸಿನಿಮಾನಟರು, ಉದ್ಯಮಿಗಳು ಇಂಥವರ ಜೊತೆ ಒಡನಾಟ ಇಟ್ಟುಕೊಂಡು ತಮ್ಮ ವ್ಯಾಪಾರ, ವಹಿವಾಟು, ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಂಡು ತಾವು ಮತ್ತಷ್ಟು ಪ್ರಖ್ಯಾತರಾಗುತ್ತಾ, ಹಣ ಮಾಡುತ್ತಾ, ಜೀವನದ ಸುಖಭೋಗಗಳನ್ನು ಅನುಭವಿಸುತ್ತಾ, ಸಾರ್ವಜನಿಕವಾಗಿ ಒಳ್ಳೆಯ ಹೆಸರಿನೊಂದಿಗೆ ಬದುಕುತ್ತಿರುತ್ತಾರೆ……

ಹಾಗಾದರೆ ಸರ್ಕಾರದ ಭ್ರಷ್ಟಾಚಾರವನ್ನು, ಅಧಿಕಾರಿಗಳ ನಿರ್ಲಕ್ಷ್ಯವನ್ನು, ಪತ್ರಕರ್ತರ ಪಕ್ಷಪಾತವನ್ನು, ಸ್ವಾಮೀಜಿಗಳ ವಂಚನೆಯನ್ನು ಮಾತನಾಡುವವರಾದರು ಯಾರು? ಪ್ರಶ್ನಿಸುವವರಾದರು ಯಾರು?……..

ಸಾಮಾನ್ಯ ಜನರು ಇವುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರಿಗೆ ಇಡೀ ವ್ಯವಸ್ಥೆಯನ್ನು ತಲುಪುವ ಶಕ್ತಿ ಇರುವುದಿಲ್ಲ. ದುರಂತವೆಂದರೆ ಆ ಶಕ್ತಿ ಇರುವವರು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು, ಆತ್ಮ ವಂಚನೆ ಮಾಡಿಕೊಂಡು ತಾವು ಸುಖವಾಗಿರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು…..

ನಾವು ಯಾರನ್ನು ಮಹಾನ್ ದಾನಿಗಳು, ಸಮಾಜ ಸೇವಕರು ಎಂದು ಹೇಳುತ್ತೇವೆಯೋ ಅವರುಗಳು ಆಂತರ್ಯದಲ್ಲಿ ತಮ್ಮ ಸ್ವಾರ್ಥಕ್ಕೆ ಮಹತ್ವ ಕೊಟ್ಟಿರುತ್ತಾರೆ ಎಂಬುದು ಸಾಕಷ್ಟು ಜನರಲ್ಲಿ ಕಾಣಬಹುದು. ಅಪರೂಪದ ಕೆಲವು ನಿಸ್ವಾರ್ಥರನ್ನು ಹೊರತುಪಡಿಸಿ ಯಾರೂ ಈ ವ್ಯವಸ್ಥೆಯ ದೋಷಗಳ ಬಗ್ಗೆ ನೇರವಾಗಿ ಮತ್ತು ನಿಷ್ಠುರವಾಗಿ ಮಾತನಾಡದೆ ತಮ್ಮ ವೈಯಕ್ತಿಕ ಇಮೇಜ್ ಅನ್ನು ಕಾಪಾಡಿಕೊಳ್ಳುತ್ತಾ ಪ್ರಶಸ್ತಿ, ಸನ್ಮಾನ, ಅಧಿಕಾರ, ಜನರಿಂದ ಜೈಕಾರದ ಘೋಷಣೆಗಳು, ಪತ್ರಕರ್ತರಿಂದ ವಿಶೇಷ ಕಾರ್ಯಕ್ರಮಗಳನ್ನು ಮಾಡಿಸಿಕೊಂಡು ತಾವು ಭವ್ಯ ಬಂಗಲೆಗಳಲ್ಲಿ ವಾಸಿಸುತ್ತಾ, ತಾವು ಜಾತಿವಾದಿಗಳು, ಕೋಮುವಾದಿಗಳು, ಭ್ರಷ್ಟಾಚಾರಿಗಳೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಇರುತ್ತಾರೋ ಅವರ ಬಗ್ಗೆ ಸಣ್ಣ ಅಸಮಾಧಾನವಿದೆ……

ಮುಖವಾಡಗಳ ಮರೆಯಲ್ಲಿ ಎಂದು ಹೇಳುವುದು ಇದನ್ನೇ, ಅಂದರೆ ಜನರನ್ನು ಭ್ರಮೆಗಳಲ್ಲಿ ತೇಲಿಸುತ್ತಾ, ವಾಸ್ತವದಿಂದ ಅವರನ್ನು ದೂರ ಮಾಡಿ ತಾವು ತಮ್ಮ ಸುಖ ಭೋಗಕ್ಕಾಗಿ ಜನರ ಮೇಲೆ ನಿಯಂತ್ರಣ ಹೊಂದುವ ಪ್ರಕ್ರಿಯೆ. ಇನ್ನು ಎಲ್ಲರೂ ಅವರವರ ಸುರಕ್ಷತೆಯನ್ನೇ ನೋಡಿಕೊಂಡರೆ ಸಮಾಜ ಸುಧಾರಣೆ ಹೇಗೆ ಸಾಧ್ಯ. ಇದರ ಲಾಭವನ್ನೇ ರಾಜಕಾರಣಿಗಳು, ಕಾರ್ಪೊರೇಟ್ ಉದ್ಯಮಿಗಳು, ಪತ್ರಕರ್ತರು, ಸ್ವಾಮೀಜಿಗಳು ಪಡೆಯುವುದು. ಅವರಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿದೆ ಈ ಜನ ಒಗ್ಗಟ್ಟಾಗುವುದಿಲ್ಲ, ಸಾಮಾನ್ಯ ಜನ ಅವರದೇ ಬಲೆಯೊಳಗೆ ಸಿಲುಕಿದ್ದಾರೆ, ಅವರನ್ನು ವಂಚಿಸುವುದು ಅಥವಾ ಶೋಷಿಸುವುದು ಬಹಳ ಸುಲಭ. ಅವರು ಹಾಗೆಯೇ ಇರಲಿ ಅಂದರೆ ಬಡತನ ಮತ್ತು ಬಡವರು ಹಾಗೆ ಇರಲಿ ನಾವು ಶ್ರೀಮಂತರಾಗುತ್ತ ಬಿಡಿಗಾಸನ್ನು ಅವರಿಗೆ ಸೇವೆ ಹೆಸರಲ್ಲಿ ಚೆಲ್ಲುತ್ತಾ ಆರಾಮಾಗಿರಬಹುದು, ವ್ಯವಸ್ಥೆಯ ಹುಳುಕುಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆ ಅದು ನಮ್ಮ ಬುಡಕ್ಕೆ ಬರುತ್ತದೆ. ಆದ್ದರಿಂದ ಈಗಿರುವ ವ್ಯವಸ್ಥೆಯೇ ಉತ್ತಮ ಎಂಬುದು ಆ ದೊಡ್ಡ ವ್ಯಕ್ತಿಗಳ ಆಂತರ್ಯದ ಆಸೆ……

ಆದ್ದರಿಂದ ಕೆಟ್ಟವರನ್ನು ಕೆಟ್ಟದ್ದನ್ನು ಕೆಟ್ಟದ್ದು ಎಂದು ಹೇಳುವ ಧೈರ್ಯ ತೋರಿಸೋಣ ಆಗ ಮಾತ್ರ ಒಂದು ಸಣ್ಣ ಪರಿವರ್ತನೆ ಸಾಧ್ಯ. ಇಲ್ಲದಿದ್ದರೆ ವ್ಯವಸ್ಥೆ ಹೀಗೇ ಮುಂದುವರೆದರಿಯುತ್ತದೆ. ಸ್ವಲ್ಪ ತ್ಯಾಗಕ್ಕೆ ಸಿದ್ದರಾಗಿ. ಆಯ್ಕೆ ನಿಮ್ಮ ಮುಂದಿದೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

14 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

21 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

24 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

2 days ago