ಸರ್ಕಾರಿ ಶಾಲಾ ಮಕ್ಕಳ ಮೇಲೆ‌ ಕುಸಿದು ಬಿದ್ದ ಕಟ್ಟದ ಸರ್ಜ: ಮೂವರು ಮಕ್ಕಳಿಗೆ ಗಾಯ: ಆಸ್ಪತ್ರೆಗೆ ರವಾನೆ

ಸರ್ಕಾರಿ ಶಾಲಾ ಮಕ್ಕಳ ತಲೆ ಮೇಲೆ ಕಟ್ಟದ ಸರ್ಜ ಬಿದ್ದಿದೆ. ಅವಘಡದಲ್ಲಿ ಮೂರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಮೃತ್ಯು ಕೂಪದಿಂದ ಕ್ಷಣಮಾತ್ರದಲ್ಲಿ ವಿದ್ಯಾರ್ಥಿಗಳು ಬಚಾವಾಗಿದ್ದಾರೆ.

ದೇವನಹಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿರುವ ಶಾಲೆಯಲ್ಲಿ ಘಟನೆ ನಡೆದಿದೆ…

ಕೇವಲ 9 ವರ್ಷಗಳ ಹಿಂದಷ್ಟೇ ಕಟ್ಟಿದ ಕಟ್ಟಡದಲ್ಲಿ ಭಾರೀ ಅವಾಂತರವಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಅವಘಡ ಸಂಭವಿಸಿದೆ.

ಭುವನ್ 7(ವರ್ಷ), ದರ್ಶನ್ 14(ವರ್ಷ), ಕುಮಾರ್ 15 ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!