ಸಪ್ತಪದಿಗೆ ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ ಮಾಡಿದ ಸರ್ಕಾರ

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಲೆಂದು ವಧು-ವರರ ಸರಳ ಸಾಮೂಹಿಕ ವಿವಾಹಕ್ಕಾಗಿ ‘ಸಪ್ತಪದಿ’ ಯೋಜನೆ ಜಾರಿಗೆ ತರಲಾಗಿದೆ. ಪ್ರಸ್ತುತ ಈ ಸಪ್ತಪದಿ ವಿವಾಹ ಯೋಜನೆಗೆ ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ ಮಾಡಲಾಗಿದೆ.

‘ಮಾಂಗಲ್ಯ ಭಾಗ್ಯ’ ಯೋಜನೆಯ ಉದ್ದೇಶವು ಮದುವೆಗೆ ದುಂದು ವೆಚ್ಚ ಮಾಡುವ ಮೂಲಕ ಬಡ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸುವುದಾಗಿದೆ. ಈ ಯೋಜನೆಯನ್ನು ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ವಿಸ್ತರಿಸಲಾಗಿದೆ.

ಸಪ್ತಪದಿ ಯೋಜನೆಯಡಿಯ ಮಾರ್ಗಸೂಚಿಗಳನ್ನೇ ‘ಮಾಂಗಲ್ಯ ಭಾಗ್ಯ’ದಲ್ಲಿ ಅಳವಡಿಸಲಾಗಿದೆ. ವರನಿಗೆ ಅಂಗಿ-ಧೋತಿ, 5 ಸಾವಿರ ರೂ. ನಗದು ಹಾಗೂ ವಧುವಿಗೆ ಮಂಗಳಸೂತ್ರಕ್ಕಾಗಿ ಸೀರೆ, 1 ಸಾವಿರ ರೂ. ನಗದು, 8 ಗ್ರಾಂ. ಚಿನ್ನದ ತಾಳಿ-ಗುಂಡುಗಳನ್ನ ನೀಡಲಾಗುತ್ತದೆ.

ದೇವಾಲಯ ಆಡಳಿತ ಮಂಡಳಿಗಳು ಮದುವೆಗೆ ಬರುವ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳಲಿವೆ. ಯೋಜನೆಯಡಿಯಲ್ಲಿ ಸಾಮೂಹಿಕ ವಿವಾಹಕ್ಕೆ ಬೇಕಾಗುವ ವೆಚ್ಚವನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುತ್ತದೆ. ದೇವಸ್ಥಾನದಿಂದ ಸಾಧ್ಯವಾಗದಿದ್ದಾಗ ಮಾತ್ರ ವಧು-ವರರಿಗೆ ನೀಡುವ ಆರ್ಥಿಕ ಸಹಾಯ ಧನವನ್ನು ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.

Leave a Reply

Your email address will not be published. Required fields are marked *